ಲಸಿಕಾಕರಣದ ಶತಕೋಟಿ ಸಾಧನೆ: ಇನ್ನು 2ನೇ ಡೋಸ್‌ ಮೇಲೆ ಕೇಂದ್ರದ ಗಮನ!

Published : Oct 22, 2021, 08:04 AM ISTUpdated : Oct 22, 2021, 08:48 AM IST
ಲಸಿಕಾಕರಣದ ಶತಕೋಟಿ ಸಾಧನೆ: ಇನ್ನು 2ನೇ ಡೋಸ್‌ ಮೇಲೆ ಕೇಂದ್ರದ ಗಮನ!

ಸಾರಾಂಶ

* ಭಾರತದ ಕೋವಿಡ್‌ ಲಸಿಕಾಕರಣದ ಶತಕೋಟಿ ಸಾಧನೆ  * ಅರ್ಹ 93 ಕೋಟಿ ಜನರಲ್ಲಿ 70 ಕೋಟಿ ಜನರಿಗೆ ಕನಿಷ್ಠ 1 ಡೋಸ್‌ ಲಸಿಕೆ * ಮೊದಲ ಡೋಸ್‌ ಪಡೆದವರಿಗೆಲ್ಲ ವರ್ಷಾಂತ್ಯಕ್ಕೆ 2ನೇ ಡೋಸ್‌ಗೆ ಯತ್ನ * ಎರಡೂ ಡೋಸ್‌ ಪಡೆಯದ 23 ಕೋಟಿ ಜನರ ಲಸಿಕಾಕರಣಕ್ಕೂ ಪ್ರಯತ್ನ

ನವದೆಹಲಿ(ಅ.22): ಕೇಂದ್ರ ಸರ್ಕಾರವು ಕೋವಿಡ್‌ ಲಸಿಕಾಕರಣದ(Covid 19 Vaccination) ಶತಕೋಟಿ ಸಾಧನೆ ಮಾಡುತ್ತಿದ್ದಂತೆಯೇ, ಸಂಭ್ರಮಾಚರಣೆಯಲ್ಲಿ ಮೈಮರೆಯುವುದಿಲ್ಲ ಎಂಬ ಸುಳಿವು ನೀಡಿದೆ. ಇನ್ನು ಏನಿದ್ದರೂ ದೇಶದ ಎಲ್ಲ ಅರ್ಹ ಜನರಿಗೆ ಲಸಿಕೆಯ ಎರಡನೇ ಡೋಸ್‌(Second Dose) ನೀಡುವುದು ಹಾಗೂ ಈವರೆಗೆ ಒಂದೂ ಡೋಸ್‌ ಪಡೆಯದವರಿಗೆ ಲಸಿಕೆ ಕೊಡಿಸುವುದು ಎಂದಿದೆ. ಅಲ್ಲದೆ, 2ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕಾಕರಣ ಶೀಘ್ರದಲ್ಲೇ ಆರಂಭವಾಗಲಿದ್ದು, ಅದರತ್ತ ಕೂಡ ಗಮನ ಹರಿಸುವುದು ಸರ್ಕಾರದ ಇರಾದೆಯಾಗಿದೆ.

18 ವರ್ಷ ಮೇಲ್ಪಟ್ಟ93 ಕೋಟಿ ಜನರು ಲಸಿಕೆಗೆ ಅರ್ಹರಾಗಿದ್ದಾರೆ. ಈವರೆಗೆ ಸುಮಾರು 70 ಕೋಟಿ ಜನರು (ಇದರಲ್ಲಿ ಎರಡೂ ಡೋಸ್‌ ಪಡೆದವರೂ ಉಂಟು) ಕನಿಷ್ಠ ಒಂದು ಡೋಸ್‌ ಲಸಿಕೆ ಪಡೆದಿದ್ದಾರೆ ಹಾಗೂ ಹಾಗೂ 28 ಕೋಟಿ ಜನರು ಎರಡೂ ಡೋಸ್‌ ಪಡೆದಿದ್ದಾರೆ. ಹೀಗಾಗಿ ಇನ್ನು 23 ಕೋಟಿ ಜನರು ಲಸಿಕಾಕರಣದಲ್ಲಿ(Vaccination) ಬಾಕಿ ಉಳಿದಂತಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವಾಲಯದ ಅಧಿಕಾರಿಗಳು(Health Ministry Officials), ‘ಈ ವರ್ಷಾಂತ್ಯದೊಳಗೆ ಎಲ್ಲ ಲಸಿಕಾಕರಣದಿಂದ ದೂರ ಉಳಿದ 23 ಜನರಿಗೆ ಮೊದಲ ಡೋಸ್‌ ನೀಡಿಕೆಯತ್ತ ಗಮನ ಹರಿಸಲಿದ್ದೇವೆ. ಇದೇ ವೇಳೆ ಶೇ.75ರಷ್ಟು ಜನರಿಗೆ ಮೊದಲ ಕನಿಷ್ಠ 1 ಡೋಸ್‌ ಲಸಿಕೆ ನೀಡಿಕೆ ಪೂರ್ಣಗೊಂಡಿರುವ ಕಾರಣ ಇನ್ನು ಅವರಿಗೆ 2ನೇ ಡೋಸ್‌ ನೀಡಿಕೆಯನ್ನು ತೀವ್ರಗೊಳಿಸಲಾಗುವುದು’ ಎಂದಿದ್ದಾರೆ.

ಇದೇ ವೇಳೆ, ಮಕ್ಕಳಿಗೆ ಝೈಕೋವ್‌ ಡಿ ಹಾಗೂ ಕೋವ್ಯಕ್ಸಿನ್‌ ಲಸಿಕೆಗಳು ಅನುಮೋದನೆ ಪಡೆದಿದ್ದು, ಶೀಘ್ರ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳ ಲಸಿಕಾಕರಣದ ಮೇಲೂ ಸರ್ಕಾರ ಇನ್ನು ಗಮನ ಕೇಂದ್ರೀಕರಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್