ಭಾರತ-ಚೀನಾ 9ನೇ ಸುತ್ತಿನ ಕಮಾಂಡರ್ ಮಾತುಕತೆ; 8 ತಿಂಗಳ ಗಡಿ ಘರ್ಷಣೆ ಕಾಣುತ್ತಾ ಅಂತ್ಯ?

Published : Jan 23, 2021, 08:44 PM IST
ಭಾರತ-ಚೀನಾ 9ನೇ ಸುತ್ತಿನ ಕಮಾಂಡರ್ ಮಾತುಕತೆ; 8 ತಿಂಗಳ ಗಡಿ ಘರ್ಷಣೆ ಕಾಣುತ್ತಾ ಅಂತ್ಯ?

ಸಾರಾಂಶ

ಭಾರತ ಹಾಗೂ ಚೀನಾ ನಡುವೆ 8 ತಿಂಗಳ ಆರಂಭಗೊಂಡ ಲಡಾಖ್ ಘರ್ಷಣೆ ಇನ್ನೂ ಸಂಪೂರ್ಣವಾಗಿ ಅಂತ್ಯಗೊಂಡಿಲ್ಲ. ಪದೆ ಪದೇ ಚೀನಾ ಕಿರಿಕ್ ಮಾಡುತ್ತಲೇ ಇದೆ. ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆ ಹರಿಸಲು ಉಭಯ ದೇಶಗಳು ಇದೀಗ 9ನೇ ಸುತ್ತಿನ ಮಾತುಕತೆಗೆ ರೆಡಿಯಾಗಿದೆ.  

ನವದೆಹಲಿ(ಜ.23): ಗಲ್ವಾನ್ ಕಣಿವೆಯಲ್ಲಿನ ಘರ್ಷಣೆ ಬಳಿಕ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ.  ಈ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾದರೆ, ಅತ್ತ ಚೀನಾಗೂ ಅಪಾರ ನಷ್ಟ ಸಂಭವಿಸಿದೆ. ಆದರೆ ಚೀನಾ ಇದುವರೆಗೆ ಬಹಿರಂಗಪಡಿಸಿಲ್ಲ. ಇದಾದ ಬಳಿಕ ಲಡಾಖ್ ಗಡಿಯಲ್ಲಿ ಭಾರತ-ಚೀನಾ ಕಿರಿಕ್ ನಡೆಯುತ್ತಲೇ ಇದೆ. ಇದೀಗ ಸಮಸ್ಯೆಗೆ ಪರಿಹಾರ ಹುಡುಕಲು 9ನೇ ಸುತ್ತಿನ ಮಾತುಕತೆ ನಡೆಯಲಾಗುತ್ತಿದೆ.

ಗಣರಾಜ್ಯೋತ್ಸವಕ್ಕೆ ಕರಾಚಿ ಬಂದರು ದಾಳಿ ಸ್ಥಬ್ಧಚಿತ್ರ; ಇಂಡೋ-ಪಾಕ್ ಯುದ್ಧ ಮೆಲುಕು ಹಾಕಲಿದೆ ನೌಕಾಪಡೆ!..

9ನೇ ಸುತ್ತಿನ ಕಮಾಂಡರ್ ಮಾತುಕತೆಗೆ ಭಾರತ ಹಾಗೂ ಚೀನಾ ಸಜ್ಜಾಗಿದೆ. ನಾಳೆ(ಜ.24) ಚೀನಾ ಭಾಗದ ಮೊಲ್ಡೊದಲ್ಲಿ ಕಮಾಂಡರ್ ಸುತ್ತಿನ ಮಾತುಕತೆ ನಡೆಯಲಿದೆ. ಬೆಳಗ್ಗೆ 10ಗಂಟೆ ಕಮಾಂಡರ್ ಮಟ್ಟದ ಅಧಿಕಾರಿಗಳು ಸಮಸ್ಯೆ ಬಗೆ ಹರಿಸಲು ಮಾತುಕತೆ ನಡೆಸಲಿದ್ದಾರೆ. 

ಕಮಾಂಡರ್ ಮಟ್ಟದ 8ನೇ ಸುತ್ತಿನ ಮಾತುಕತೆ ನವೆಂಬರ್ 6, 2020ರಂದು ಭಾರತದ ಚುಶೊಲ್ ಮಿಲಿಟರಿ ವಲಯದಲ್ಲಿ ನಡೆದಿತ್ತು. ಆದರೆ 8ನೇ ಸುತ್ತು ಮಾತ್ರವಲ್ಲ, ಹಿಂದಿನ ಎಲ್ಲಾ ಸುತ್ತುಗಳಲ್ಲಿ ಒಮ್ಮತ ಮೂಡಿಲ್ಲ. ಹೀಗಾಗಿ ಸಮಸ್ಯೆ ಕಳೆದ 8 ತಿಂಗಳಿನಿಂದ ಬಗೆ ಹರಿಯದೆ ಹಾಗೇ ಉಳಿದುಕೊಂಡಿದೆ.

ರಾಜಪಥದಲ್ಲಿ ಹಾರಲಿದೆ ಶ್ರೀನಗರ ಕಾಪಾಡಿದ, ಬಾಂಗ್ಲಾಗೆ ಸ್ವಾತಂತ್ರ್ಯ ಕೊಟ್ಟ ವಿಂಟೇಜ್ ಡಕೋಟಾ!

ಭಾರತ ಹಾಗೂ ಚೀನಾ ನಡುವಿನ ಗಡಿ ಘರ್ಷಣೆ ಅಂತ್ಯಗೊಳಿಸಲು ರಾಜತಾಂತ್ರಿಕ, ಮಿಲಿಟರಿ ಸೇರಿದಂತೆ ಎಲ್ಲಾ ರೀತಿಯ ಮಾತುಕತೆಗಳನ್ನು ನಡೆಸುತ್ತಿದ್ದೇವೆ. ಗಡಿಯ ಕೆಲ ಭಾಗದಲ್ಲಿ ನಿರ್ಮಾಣವಾಗಿರುವ ಉದ್ವಿಘ್ನ ಪರಿಸ್ಥಿತಿಯನ್ನು ತಿಳಿಸಿಗೊಳಿಸಲು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ಭಾರತೀಯ ವಿದೇಶಾಂತ ಇಲಾಖೆ ಹೇಳಿದೆ.

ಮಿಲಿಟರಿ ಮಟ್ಟದ ಮಾತುಕತೆಗಳ ಜೊತೆಗೆ, ಎರಡು ಕೌಂಟಿಗಳು ವೊ ಮೂಲಕ ರಾಜತಾಂತ್ರಿಕ ಸುತ್ತಿನ ಮಾತುಕತೆಗಳನ್ನು ಮುಂದುವರಿಸಿದೆ. ಈ ಕುರಿತು ಡಿಸೆಂಬರ್ 18, 2020ರಂದು WMCC ಸಬೆ ನಡೆಸಲಾಗಿತ್ತು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?