
ನವದೆಹಲಿ(ಏ.15): ತೀವ್ರವಾಗಿ ಏಳುತ್ತಿರುವ ಕೊರೋನಾದ 2ನೇ ಅಲೆ ಮೇ ಅಂತ್ಯದವರೆಗೆ ಮುಂದುವರಿಯಲಿದೆ. ಆದರೆ ಅದಕ್ಕಿಂತ ಮೊದಲು ನಿತ್ಯ ಸುಮಾರು 3 ಲಕ್ಷ ಸೋಂಕಿನ ಪ್ರಕರಣಗಳು ದಾಖಲಾಗುತ್ತವೆ ಎಂದು ಹೆಸರಾಂತ ವೈರಾಣು ತಜ್ಞ ಡಾ| ಶಾಹಿದ್ ಜಮೀಲ್ ಹೇಳಿದ್ದಾರೆ.
ಟೀವಿ ಚಾನೆಲ್ ಒಂದರ ಜತೆ ಮಾತನಾಡಿದ ಜಮೀಲ್, ‘ಪ್ರಕರಣಗಳ ಏರುಗತಿ ಭಯಾನಕವಾಗಿದೆ. ಏರುಗತಿ ನಿತ್ಯ ಶೇ.7ರ ಪ್ರಮಾಣದಲ್ಲಿದೆ. ಇದು ತುಂಬಾ ಗರಿಷ್ಠ ಏರುಗತಿ. ದುರದೃಷ್ಟಕರ ರೀತಿಯಲ್ಲಿ ಇದೇ ರೀತಿ ಏರಿಕೆ ಆಗುತ್ತಿದ್ದರೆ ನಿತ್ಯ 3 ಲಕ್ಷ ಪ್ರಕರಣಗಳು ದಾಖಲಾಗುತ್ತವೆ’ ಎಂದು ಅಂದಾಜಿಸಿದರು.
‘ಕೊರೋನಾದ ಹೊಸ ತಳಿ ಹೆಚ್ಚು ಸೋಂಕುಕಾರಕವಾಗಿವೆ. ಆದರೆ ಅವು ಕಡಮೆ ಮಾರಣಾಂತಿಕ ಎಂದು ಹೇಳಲು ಯಾವುದೇ ಸಾಕ್ಷ್ಯಗಳು ಲಭಿಸುತ್ತಿಲ್ಲ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
‘ದೇಶದಲ್ಲಿ ಲಸಿಕೆ ಬಂದಾಗ ಜನರು ಉದಾಸೀನ ಭಾವನೆಯಲ್ಲಿದ್ದರು. ‘ಕೊರೋನಾ ಹೋಗಿದೆ. ನನಗೇಕೆ ಲಸಿಕೆ ಬೇಕು?’ ಎಂದು ಕೆಲವರು ಲಘುವಾಗಿ ಮಾತನಾಡುತ್ತಿದ್ದರು. ಆದರೆ ಈಗ ಕೊರೋನಾ ಹೆಚ್ಚಾಗುತ್ತಿದೆ. ಯಾವಾಗ ಲಸಿಕೆ ಪಡೆಯಬೇಕಾಗಿತ್ತೋ ಆಗ ಪಡೆಯದವರು ಈಗ ಲಸಿಕೆಯ ರೇಸ್ನಲ್ಲಿದ್ದಾರೆ’ ಎಂದು ಪರಿಸ್ಥಿತಿಯನ್ನು ಜಮೀಲ್ ವಿಶ್ಲೇಷಿಸಿದರು.
ಇದೇ ವೇಳೆ, ದೇಶದಲ್ಲಿ ಲಸಿಕೆ ಕೊರತೆ ಇದೆ ಎಂಬ ವಾದಗಳನ್ನು ತಿರಸ್ಕರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ