ಪರೀಕ್ಷೆಯಿಂದ ಒಂದು ಸಾವಾದರೂ ಆಂಧ್ರ ಸರ್ಕಾರ ಹೊಣೆ: ಸುಪ್ರೀಂ ವಾರ್ನಿಂಗ್!

Published : Jun 23, 2021, 10:07 AM ISTUpdated : Jun 23, 2021, 10:31 AM IST
ಪರೀಕ್ಷೆಯಿಂದ ಒಂದು ಸಾವಾದರೂ ಆಂಧ್ರ ಸರ್ಕಾರ ಹೊಣೆ: ಸುಪ್ರೀಂ ವಾರ್ನಿಂಗ್!

ಸಾರಾಂಶ

* ಪರೀಕ್ಷೆಯಿಂದ ಒಂದೇ ಒಂದು ಸಾವಾದರೂ ಸರ್ಕಾರ ಹೊಣೆ * ಆಂಧ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ * 12ನೇ ಕ್ಲಾಸ್‌ ಪರೀಕ್ಷೆಗೆ ಮುಂದಾಗಿರುವುದಕ್ಕೆ ಚಾಟಿ

ನವದೆಹಲಿ(ಜೂ.23): ಕೊರೋನಾ ಹಾವಳಿ ನಡುವೆಯೂ 12ನೇ ತರಗತಿ ಪರೀಕ್ಷೆ ನಡೆಸಲು ಮುಂದಾಗಿರುವ ಆಂಧ್ರಪ್ರದೇಶಕ್ಕೆ ತೀಕ್ಷ$್ಣ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್‌, ‘ಪರೀಕ್ಷೆ ನಡೆಸುವ ಬಗ್ಗೆ ಇನ್ನು 2 ದಿನದಲ್ಲಿ ಅಂತಿಮ ನಿರ್ಧಾರ ತಿಳಿಸಬೇಕು. ಪರೀಕ್ಷೆಯಿಂದಾಗಿ ಒಂದೇ ಒಂದು ಸಾವು ಸಂಭವಿಸಿದರೂ ರಾಜ್ಯ ಸರ್ಕಾರವನ್ನೇ ಹೊಣೆ ಮಾಡುತ್ತೇವೆ’ ಎಂದು ಎಚ್ಚರಿಸಿದೆ.

ಪರೀಕ್ಷೆ ನಡೆಸುವ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ‘ನೀವು ಎಲ್ಲವನ್ನೂ ಅನಿಶ್ಚಿತ ಸ್ಥಿತಿಯಲ್ಲಿ ಇಡಲು ಆಗದು. 2 ದಿನದಲ್ಲಿ ನಿರ್ಧಾರ ತಿಳಿಸಬೇಕು’ ಎಂದು ಚಾಟಿ ಬೀಸಿತು.

ಈ ವೇಳೆ ವಾದ ಮಂಡಿಸಿದ ಆಂಧ್ರ ಸರ್ಕಾರದ ಪರ ವಕೀಲ ಮಹಫೂಜ್‌ ನಾಕ್ಜಿ, ‘ಕೊರೋನಾ ನಿಯಂತ್ರಣಕ್ಕೆ ಬಂದಿರುವ ಕಾರಣ ಪರೀಕ್ಷೆ ನಡೆಸಲು ಆಂಧ್ರ ನಿರ್ಧರಿಸಿದೆ’ ಎಂದರು. ಸಿಬಿಎಸ್‌ಇ, ಐಸಿಎಸ್‌ಇ ಹಾಗೂ 21 ರಾಜ್ಯಗಳು 12ನೇ ಕ್ಲಾಸ್‌ ಪರೀಕ್ಷೆ ರದ್ದುಗೊಳಿಸಿವೆ. 6 ರಾಜ್ಯಗಳು ಈಗಾಗಲೇ ಪರೀಕ್ಷೆ ನಡೆಸಿವೆ. ಆದರೆ ಆಂಧ್ರ ಸರ್ಕಾರ ಪರೀಕ್ಷೆ ರದ್ದು ಮಾಡಿಲ್ಲ. ಇದು ವಿವಾದದ ಮೂಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!