'ನಾವು ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನವನ್ನು ನಾಶಮಾಡಿ ಮಂಡಿಯೂರಿಸುತ್ತೇವೆ..; ಶತ್ರುರಾಷ್ಟ್ರಕ್ಕೆ ವಾಯುಪಡೆ ಮುಖ್ಯಸ್ಥ ಖಡಕ್ ವಾರ್ನ್!

Published : Jan 21, 2026, 05:55 PM IST
IAF Chief Warns Pakistan Can Destroy and Make You Kneel in a Few Hours

ಸಾರಾಂಶ

ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು, ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನವನ್ನು ನಾಶಮಾಡುವ ಸಾಮರ್ಥ್ಯ ವಾಯುಪಡೆಗೆ ಇದೆ ಎಂದು ಎಚ್ಚರಿಸಿದ್ದಾರೆ. ರಾಷ್ಟ್ರ ರಕ್ಷಣೆಗೆ ಆರ್ಥಿಕ ಶಕ್ತಿಗಿಂತ ಮಿಲಿಟರಿ ಶಕ್ತಿಯೇ ಅಂತಿಮ,, ಅದನ್ನು ಬಳಸುವ ರಾಜಕೀಯ ಇಚ್ಛಾಶಕ್ತಿಯೂ ಮುಖ್ಯ ಎಂದರು.

ನವದೆಹಲಿ (ಜ.21): ಬದಲಾಗುತ್ತಿರುವ ಜಗತ್ತಿನಲ್ಲಿ ಯುದ್ಧದ ಸ್ವರೂಪವೂ ಬದಲಾಗುತ್ತಿದೆ. ಈ ಹೊತ್ತಿನಲ್ಲಿ ಭಾರತೀಯ ವಾಯುಪಡೆಯ ಶಕ್ತಿ ಮತ್ತು ಸಾಹಸವನ್ನು ಕೊಂಡಾಡಿರುವ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು, ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಕೆಲವೇ ಗಂಟೆಗಳಲ್ಲಿ ವೈರಿಯ ಸರ್ವನಾಶ ಸಾಧ್ಯ

ಬುಧವಾರ (ಜನವರಿ 21, 2026) ಮಾತನಾಡಿದ ಎಪಿ ಸಿಂಗ್ ಅವರು, ಭಾರತೀಯ ವಾಯುಪಡೆಯ ಕಾರ್ಯಾಚರಣಾ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ನಾವು ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಅನೇಕ ಗುರಿಗಳ ಮೇಲೆ ದಾಳಿ ಮಾಡಿ, ಅವರನ್ನು ನೆಲಕಚ್ಚುವಂತೆ ಮಾಡುವ ಶಕ್ತಿ ಹೊಂದಿದ್ದೇವೆ. ಸುಡಾನ್‌ನಂತಹ ಯುದ್ಧ ವಲಯಗಳಿಂದ ಜನರನ್ನು ಸ್ಥಳಾಂತರಿಸುವುದಿರಲಿ ಅಥವಾ ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡುವುದಿರಲಿ, ನಮ್ಮ ವಾಯುಪಡೆ ಎಲ್ಲೆಡೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು.

ಆರ್ಥಿಕ ಬಲವಿದ್ದರೆ ಸಾಲದು, ಸೈನಿಕ ಬಲವೇ ಅಂತಿಮ

ರಾಷ್ಟ್ರೀಯ ಭದ್ರತೆಯಲ್ಲಿ ಮಿಲಿಟರಿ ಶಕ್ತಿಯ ಮಹತ್ವವನ್ನು ಒತ್ತಿ ಹೇಳಿದ ಮುಖ್ಯಸ್ಥರು, ದೇಶವನ್ನು ರಕ್ಷಿಸಲು ಕೇವಲ ಆರ್ಥಿಕ ಶಕ್ತಿಯನ್ನು ಹೊಂದಿದ್ದರೆ ಸಾಲದು. ಮಿಲಿಟರಿ ಶಕ್ತಿಯು ರಾಷ್ಟ್ರೀಯ ಶಕ್ತಿಯ ಅಂತಿಮ ಅಳತೆಯಾಗಿದೆ. ಈ ಹಿಂದೆ ನಾವು ಮತ್ತು ಚೀನಾ ಸೇರಿ ವಿಶ್ವದ ಒಟ್ಟು GDPಯ ಶೇ. 60 ರಷ್ಟನ್ನು ಹೊಂದಿದ್ದೆವು. ಆದರೂ ಮಿಲಿಟರಿ ಬಲದ ಕೊರತೆಯಿಂದಾಗಿ ನಾವು ವಿದೇಶಿಯರ ಆಕ್ರಮಣಕ್ಕೆ ಒಳಗಾಗಬೇಕಾಯಿತು ಮತ್ತು ವಸಾಹತುಶಾಹಿಯಾಗಬೇಕಾಯಿತು ಎಂದು ಇತಿಹಾಸವನ್ನು ನೆನಪಿಸಿದರು.

ಬಲಿಷ್ಠ ಸೇನೆ ಮತ್ತು ಇಚ್ಛಾಶಕ್ತಿ ಮುಖ್ಯ

ಬಲಿಷ್ಠ ಸೇನೆ ಇಲ್ಲದಿದ್ದರೆ ಯಾರಾದರೂ ನಿಮ್ಮ ಮೇಲೆ ದಾಳಿ ಮಾಡಬಹುದು, ಇದಕ್ಕೆ ಇರಾಕ್ ಮತ್ತು ವೆನೆಜುವೆಲಾ ದೇಶಗಳೇ ಸಾಕ್ಷಿ ಎಂದ ಎಪಿ ಸಿಂಗ್ ಅವರು, ಸೈನ್ಯದ ಜೊತೆಗೆ ಅದನ್ನು ಬಳಸುವ ರಾಜಕೀಯ ಇಚ್ಛಾಶಕ್ತಿಯೂ ಅಷ್ಟೇ ಮುಖ್ಯ ಎಂದರು. ನಿಮ್ಮ ಬಳಿ ಇಚ್ಛಾಶಕ್ತಿ ಇಲ್ಲದಿದ್ದರೆ ನಿಮ್ಮ ಸಂಯಮವನ್ನು ದೌರ್ಬಲ್ಯ ಎಂದು ಭಾವಿಸಲಾಗುತ್ತದೆ. ನೀವು ಬಲಿಷ್ಠರಾಗಿದ್ದು ಸಂಯಮ ತೋರಿದಾಗ ಮಾತ್ರ ಅದನ್ನು 'ಸಾಮರ್ಥ್ಯ' ಎಂದು ಜಗತ್ತು ಒಪ್ಪಿಕೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಭದ್ರತೆಗೆ ಹೊಸ ದಿಕ್ಸೂಚಿ

ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಭಾರತವು ಮಿಲಿಟರಿ ಬಲದ ಮೇಲೆ ಹೆಚ್ಚು ಗಮನಹರಿಸುವುದು ಅತ್ಯಗತ್ಯ ಎಂದು ಹೇಳುವ ಮೂಲಕ, ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಭಾರತದ ರಕ್ಷಣಾ ನೀತಿಯ ಮುಂದಿನ ದಾರಿಯನ್ನು ಸ್ಪಷ್ಟಪಡಿಸಿದರು. ವೈರಿ ರಾಷ್ಟ್ರಗಳ ಪ್ರಚೋದನೆಗೆ ತಕ್ಕ ಉತ್ತರ ನೀಡಲು ಭಾರತೀಯ ವಾಯುಪಡೆ ಸದಾ ಸಜ್ಜಾಗಿದೆ ಎಂಬ ಸಂದೇಶವನ್ನು ಈ ಮೂಲಕ ರವಾನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೊದಲ ಹೆಂಡ್ತಿ ನನ್ನ ಕಸಿನ್​, 2ನೆಯವ್ಳು ರಾಂಗ್​ ನಂಬರ್​, 3ನೇಯವ್ಳು ಅವಳ ಫ್ರೆಂಡ್, ಕೋಪ ಬಂದಾಗ 4ನೆಯವ್ಳು!
ಅಮಾಯಕ ದೀಪಕ್‌ನ ಆ*ತ್ಮಹ*ತ್ಯೆಗೆ ಕಾರಣವಾಗಿದ್ದ ಶಿಮ್ಜಿತಾ ಅರೆಸ್ಟ್‌, ಸಂಬಂಧಿಯ ಮನೆಯಿಂದ ಬಂಧನ!