ಬಿಜೆಪಿ ಕಾರ‍್ಯಕರ್ತರ ಸಾವಿನ ನೋವು ನಿಮಗೆ ಗೊತ್ತಾ?: ಮಮತಾಗೆ ಶಾ ಸವಾಲು

Published : Mar 16, 2021, 09:42 AM IST
ಬಿಜೆಪಿ ಕಾರ‍್ಯಕರ್ತರ ಸಾವಿನ ನೋವು ನಿಮಗೆ ಗೊತ್ತಾ?: ಮಮತಾಗೆ ಶಾ ಸವಾಲು

ಸಾರಾಂಶ

ನೋವಿನ ಪ್ರತಿಫಲ ಕಾಣಲಿರುವ ದೀದಿ: ಶಾ ವ್ಯಂಗ್ಯ| ನಿಮ್ಮ ಕಾಲಿ​ಗಾದ ಗಾಯ ಬೇಗ ಗುಣ​ಮು​ಖ​ವಾ​ಗ​ಲಿ| ಬಿಜೆಪಿ ಕಾರ‍್ಯಕರ್ತರ ಸಾವಿನ ನೋವು ನಿಮಗೆ ಗೊತ್ತಾ?| ಈ ಚುನಾ​ವಣೆ ಫಲಿ​ತಾಂಶ​ದಲ್ಲಿ ನೋವಿನ ಪ್ರತಿ​ಫ​ಲ​ ಕಾಣ​ಲಿ​ದ್ದೀ​ರಿ

ರಾಣಿ​ಬಂಧ್‌ (ಮಾ.16): ‘ಇತ್ತೀ​ಚೆ​ಗಷ್ಟೇ ಕಾಲಿಗೆ ಗಾಯ ಮಾಡಿ​ಕೊಂಡಿ​ರುವ ಪಶ್ಚಿಮ ಬಂಗಾಳ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ಅವರು ಶೀಘ್ರ ಗುಣ​ಮು​ಖ​ರಾ​ಗಲಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಆಶಿ​ಸಿ​ದ್ದಾರೆ. ಆದ​ರೆ ತಮ್ಮದೇ ನೇತೃ​ತ್ವದ ಟಿಎಂಸಿ ಸರ್ಕಾ​ರ​ದ ದುರಾ​ಡ​ಳಿ​ತ​ದಲ್ಲಿ ಸಾವು-ನೋವು ಕಂಡ ಬಿಜೆಪಿ ಕಾರ್ಯ​ಕ​ರ್ತರ ಕುಟುಂಬದ ನೋವಿನ ಬಗ್ಗೆ ತಮಗೆ ಅರಿ​ವಿ​ದೆಯೇ’ ಎಂದು ಮಮತಾಗೆ ಶಾ ಪ್ರಶ್ನಿ​ಸಿ​ದ್ದಾರೆ.

ಸೋಮ​ವಾರ ಬಂಕುರಾ ಜಿಲ್ಲೆಯ ರಾಣಿ​ಬಂಧ್‌ನಲ್ಲಿ ನಡೆದ ಬಿಜೆಪಿ ರಾರ‍ಯಲಿ​ಯ​ನ್ನು​ದ್ದೇ​ಶಿಸಿ ಮಾತ​ನಾ​ಡಿದ ಶಾ, ‘ದೀದಿ​(​ಬ್ಯಾನ​ರ್ಜಿ) ನಿಮ್ಮ ಕಾಲಿಗೆ ಗಾಯ​ವಾ​ದಾಗ ಅದರ ನೋವು ನಿಮಗೆ ಗೊತ್ತಾ​ಯಿತು. ನೀವು ಬೇಗ ಗುಣ​ಮು​ಖ​ರಾ​ಗಲಿ ಎಂದು ಆಸೆ​ಪ​ಡು​ತ್ತೇನೆ. ಆದರೆ ಟಿಎಂಸಿ ಗೂಂಡಾ​ಗ​ಳಿಂದ ಹತ್ಯೆ​ಗೀ​ಡಾದ 130 ಬಿಜೆಪಿ ಕಾರ್ಯ​ಕ​ರ್ತರ ಅಮ್ಮಂದಿರ ನೋವಿನ ಬಗ್ಗೆ ನೀವು ಎಂದಾ​ದರೂ ಯೋಚಿ​ಸಿ​ದ್ದೀ​ರಾ? ಖಂಡಿತಾ ಇಲ್ಲ. ಈ ಚುನಾ​ವ​ಣೆ​ಯಲ್ಲಿ ಆ ನೋವಿನ ಪ್ರತಿ​ಫ​ಲ​ವ​ನ್ನು ನೀವು ಕಾಣ​ಲಿ​ದ್ದೀ​ರಿ’ ಎಂದು ಗುಡು​ಗಿ​ದರು.

‘ಬಂಗಾ​ಳ​ದಲ್ಲಿ ಬಿಜೆಪಿ ಸರ್ಕಾರ ರಚ​ನೆ​ಯಾ​ದರೆ ರಾಜ್ಯ ಸರ್ಕಾರಿ ನೌಕ​ರ​ರಿಗೆ 7ನೇ ವೇತನ ಆಯೋ​ಗ ಜಾರಿ ಮಾಡ​ಲಾ​ಗು​ತ್ತ​ದೆ’ ಎಂದು ಭರ​ವಸೆ ನೀಡಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ
Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್