ಅನಾವರಣವಾಯ್ತು ಬಾಲ ಪ್ರತಿಭೆ; ಹಿಂದೂಸ್ತಾನ್ ಸ್ಕೂಲ್‌ನಲ್ಲಿ ಸೃಜನಶೀಲತೆಗೆ ರೆಕ್ಕೆ

Published : Nov 18, 2019, 07:17 PM ISTUpdated : Nov 18, 2019, 07:24 PM IST
ಅನಾವರಣವಾಯ್ತು ಬಾಲ ಪ್ರತಿಭೆ; ಹಿಂದೂಸ್ತಾನ್ ಸ್ಕೂಲ್‌ನಲ್ಲಿ ಸೃಜನಶೀಲತೆಗೆ ರೆಕ್ಕೆ

ಸಾರಾಂಶ

ಕಲೆ ಇರಲಿ ಅಥವಾ ವಿಜ್ಞಾನ, ಮಕ್ಕಳಿಗೆ ಬೇಕು ಪ್ರಾಯೋಗಿಕ ಕಲಿಕೆ ಹಿಂದೂಸ್ತಾನ್ ಇಂಟರ್ನ್ಯಾಷನಲ್ ಶಾಲೆ,ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಬದ್ಧ ಮಕ್ಕಳ ದಿನದಂದು ವಿದ್ಯಾರ್ಥಿಗಳಿಂದ ಕಲೆ- ವಿಜ್ಞಾನ ಪ್ರದರ್ಶನ 

ಶಿಕ್ಷಣ ಅಂದರೆ ಬರೀ ಒದುವ ಅಥವಾ ಬರೆಯುವ ಸಾಮರ್ಥ್ಯವಲ್ಲ; ಬದಲಾಗಿ ಸಮಗ್ರ ಬೌದ್ಧಿಕ ಬೆಳವಣಿಗೆಯೇ ಶಿಕ್ಷಣದ ಮೂಲ ಆಶಯವಾಗಿದೆ. 

ಪ್ರಸಕ್ತ ಸನ್ನಿವೇಶದಲ್ಲಿ ವಿದ್ಯಾರ್ಥಿಯ ಸಂಪೂರ್ಣ ಬೆಳವಣಿಗೆಯೇ ಶಿಕ್ಷಣದ ಪ್ರಮುಖ ಉದ್ದೇಶ. ಕಲಿಸುವಿಕೆಯಲ್ಲಿ ಪ್ರಾಯೋಗಿಕ ವಿಧಾನ ಇದ್ದರೆ ಮಾತ್ರ ಶಿಕ್ಷಣದ ಗುರಿ ಮುಟ್ಟವುದು ಸಾಧ್ಯ. ಆ ಮೂಲಕ ವಿದ್ಯಾರ್ಥಿಗಳು ಕಲಿಯುವ ಜೊತೆಗೆ ವಿಷಯದ ಅನುಭವವನ್ನು ಕೂಡಾ ಪಡೆಯುತ್ತಾರೆ.

ಪಾದೂರಿನ ಹಿಂದೂಸ್ತಾನ್ ಇಂಟರ್ನ್ಯಾಷನಲ್ ಸ್ಕೂಲ್ (HIS) ವಿದ್ಯಾರ್ಥಿಗಳು ಕಳೆದ ಗುರುವಾರದಂದು (ನ.14) "Spectacular 2019" ವಿಜ್ಞಾನ, ಕಲೆ, ಕರಕುಶಲ, ರೋಬೋಟಿಕ್ಸ್ ಮತ್ತು ICT ಪ್ರದರ್ಶನವನ್ನು ಆಯೋಜಿಸಿದ್ದರು.

ಇದನ್ನೂ ಓದಿ | ಹಿಂದುಸ್ತಾನ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ‘ಕೊರಿಯನ್ ದಿವಸ’ ಆಚರಣೆ... :

ಮಕ್ಕಳ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಬಾಲ ವಿಜ್ಞಾನಿಗಳು ತಮ್ಮ ಸೃಜನಶೀಲತೆ ಮತ್ತು ವೈಜ್ಞಾನಿಕ ಕೌಶಲ್ಯಗಳನ್ನು ಪ್ರದರ್ಶಿಸಿದರು.   ಆ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸಂಶೋಧನಾ ಆಸಕ್ತಿ ಮತ್ತು ಕಲಾ ಪ್ರತಿಭೆಯನ್ನು ಅನಾವರಣಗೊಳಿಸುವ ಪ್ರಯತ್ನ ಇದಾಗಿತ್ತು.

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ, ಇಸ್ರೋದಲ್ಲಿ ಕೆಲಸ ಮಾಡಿದ ಅನುಭವವಿರುವ, ಮತ್ತು GSLV ಪ್ರಾಜೆಕ್ಟ್ ನ ಅಸೋಸಿಯೇಟ್ ಡೈರೆಕ್ಟರ್ ಆಗಿ ನಿವೃತ್ತಿ ಹೊಂದಿರುವ ಆರ್. ದೊರೈರಾಜ್ ಅವರು ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 

ವಿದ್ಯಾರ್ಥಿಗಳ ಕಲೆ ಮತ್ತು ವೈಜ್ಞಾನಿಕ ಪ್ರಯೋಗಗಳಿಗೆ ಮುಖ್ಯ ಅತಿಥಿ ಮೆಚ್ಚುಗೆ ವ್ಯಕ್ತಪಡಿಸಿದರು. ಜೀವನಕ್ಕೆ ಅರ್ಥವಿರಬೇಕು, ಏನನ್ನು ಇಷ್ಟ ಪಡುತ್ತೀರೋ ಅದನ್ನೇ ಮಾಡಿ, ಏನು ಮಾಡ್ತೀರೋ ಅದನ್ನ ಇಷ್ಟ ಪಡಿ, ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ