
ನವದೆಹಲಿ[ನ.18]: ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಹಾಗೂ ಹೈದರಾಬಾದ್ ದೇಶದ ಎರಡನೇ ರಾಜಧಾನಿಯನ್ನಾಗಿಸುವ ವಿಚಾರ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ಇಂತಹ ಮಸೂದೆ ಜಾರಿಗೊಳಿಸಲು ಸರ್ಕಾರ ತಯಾರಿ ನಡೆಸುತ್ತಿದೆ ಎಂಬ ಮಾತುಗಳು ಸದ್ದು ಮಾಡುತ್ತಿವೆ. ಇಂತಹ ಅಂತೆ ಕಂತೆಗಳ ನಡುವೆ ಕೇಂದ್ರ ಸಚಿವ ಕೆ. ಕೃಷ್ಣನ್ ರೆಡ್ಡಿ ಈ ಸಂಬಂಧ ಸ್ಪಷ್ಟನೆ ನೀಡುತ್ತಾ ಸರ್ಕಾರ ಇಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ.
ಇಂದಿನಿಂದ ಚಳಿಗಾಲದ ‘ಬಿಸಿ’ ಅಧಿವೇಶನ ಶುರು
ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕೆ. ಕೃಷ್ಣನ್ ರೆಡ್ಡಿ 'ಸರ್ಕಾರದೆದುರು ಹಲವಾರು ಪ್ರಸ್ತಾವನೆಗಳಿವೆ. ಆದರೆ ಹೈದರಾಬಾದ್ನ್ನು ರಾಷ್ಟ್ರದ ಎರಡನೇ ರಾಜಧಾನಿಯನ್ನಾಗಿಸುವ ಹಾಗೂ ಏಕರೂಪ ಸಂಹಿತೆ ಜಾರಿಗೊಳಿಸುವ ಯಾವುದೇ ಪ್ರಸ್ತಾವನೆಗಳು ಬಂದಿಲ್ಲ. ತೆಲಂಗಾಣ ಸರ್ಕಾರದಿಂದಲೂ ಇಂತಹ ಯಾವುದೇ ಬೇಡಿಕೆ ಬಂದಿಲ್ಲ, ಕೇಂದ್ರ ಸರ್ಕಾರವೂ ಇಂತಹ ಮಾತುಕತೆ ನಡೆಸಿಲ್ಲ. ಇನ್ನು ಏಕರೂಪ ಸಂಹಿತೆ ಜಾರಿಗೊಳಿಸುವ ಯೋಜನೆಯೂ ಸರ್ಕಾರ ಮಾಡಿಲ್ಲ' ಎಂದಿದ್ದಾರೆ.
ಇದೇ ವೇಳೆ ಸಂಸತ್ ಚಳಿಗಾಲದ ಅಧಿವೇಶನ ಸಂಬಂಧ ಪ್ರತಿಕ್ರಿಯಿಸಿದ ಕೇಂದ್ರ ಸಚಿವ 'ಪ್ರತಿಪಕ್ಷಗಳು ಮುಂದಿಡುವ ಎಲ್ಲಾ ಪ್ರಸ್ತಾವನೆಗಳ ಮೇಲೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ತಯಾರಿದೆ' ಎಂದಿದ್ದಾರೆ. ಅಲ್ಲದೇ 'ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಅಲ್ಲಿ ಹೆಚ್ಚು ಶಾಂತಿ ನೆಲೆಸಿದೆ' ಎಂದಿದ್ದಾರೆ.
ನವೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ