ಸಂಬಳ ಕಡಿತ ಅಂತ್ಯ: ಹಿಮಾ​ಚ​ಲ ಶಾಸ​ಕ​ರಿ​ಗೆ ಇನ್ನು ಪೂರ್ಣ ವೇತ​ನ

Published : Mar 07, 2021, 09:03 AM ISTUpdated : Mar 07, 2021, 09:06 AM IST
ಸಂಬಳ ಕಡಿತ ಅಂತ್ಯ: ಹಿಮಾ​ಚ​ಲ ಶಾಸ​ಕ​ರಿ​ಗೆ ಇನ್ನು ಪೂರ್ಣ ವೇತ​ನ

ಸಾರಾಂಶ

 ಕೊರೋನಾ ಕಾರಣ ಸಂಬಳ ಕಡಿತ| ಹಿಮಾ​ಚ​ಲ ಶಾಸ​ಕ​ರಿ​ಗೆ ಇನ್ನು ಪೂರ್ಣ ವೇತ​ನ|  ಏಪ್ರಿಲ್‌ 1ರಿಂದಲೇ ಪೂರ್ತಿ ವೇತನ ಹಾಗೂ ಪೂರ್ತಿ ಪ್ರಮಾ​ಣದ ಶಾಸಕರ ನಿಧಿ ಲಭ್ಯ​

ಶಿಮ್ಲಾ(ಮಾ.07): ಕೊರೋನಾ ಕಾರಣ ಸಂಬಳ ಕಡಿತ ಅನುಭವಿಸಿದ್ದ ಹಿಮಾಚಲ ಪ್ರದೇಶದ ಶಾಸಕರಿಗೆ ಶುಭ ಸುದ್ದಿ. ರಾಜ್ಯದ ಎಲ್ಲಾ ಶಾಸ​ಕ​ರಿಗೆ ಏಪ್ರಿಲ್‌ 1ರಿಂದಲೇ ಪೂರ್ತಿ ವೇತನ ಹಾಗೂ ಪೂರ್ತಿ ಪ್ರಮಾ​ಣದ ಶಾಸಕರ ನಿಧಿ ಲಭ್ಯ​ವಾ​ಗ​ಲಿದೆ.

ಶುಕ್ರ​ವಾರ ವಿಧಾ​ನ​ಸಭೆ ಅಧಿ​ವೇ​ಶ​ನ​ದಲ್ಲಿ 2021-22ರ ಬಜೆಟ್‌ ಮಂಡನೆ ವೇಳೆ ಹಿಮಾ​ಚಲ ಪ್ರದೇಶ ಮುಖ್ಯ​ಮಂತ್ರಿ ಜೈರಾಮ್‌ ಠಾಕೂರ್‌ ಅವರು ಈ ವಿಚಾರ ತಿಳಿ​ಸಿ​ದ್ದಾರೆ.

ಕೊರೋನಾ ಲಾಕ್‌​ಡೌನ್‌ ಹಾಗೂ ಕೊರೋನಾ ಸೋಂಕಿನ ವಿರು​ದ್ಧದ ಹೋರಾ​ಟ​ಕ್ಕೆ ಹಣದ ಸಂಗ್ರ​ಹ​ಕ್ಕಾಗಿ ಕಳೆದ ವರ್ಷ ಶಾಸ​ಕರ ವೇತ​ನದ ಪೈಕಿ ಶೇ.30ರಷ್ಟುಕಡಿ​ತ​ಗೊ​ಳಿ​ಸ​ಲಾ​ಗಿತ್ತು ಹಾಗೂ 2 ವರ್ಷ​ಗ​ಳಿಗೆ ಅನ್ವ​ಯಿ​ಸು​ವಂತೆ ಶಾಸಕರ ನಿಧಿಯನ್ನು ಅಮಾ​ನ​ತಿ​ನ​ಲ್ಲಿ​ಡ​ಲಾ​ಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು