
ಶಿಮ್ಲಾ(ಮಾ.07): ಕೊರೋನಾ ಕಾರಣ ಸಂಬಳ ಕಡಿತ ಅನುಭವಿಸಿದ್ದ ಹಿಮಾಚಲ ಪ್ರದೇಶದ ಶಾಸಕರಿಗೆ ಶುಭ ಸುದ್ದಿ. ರಾಜ್ಯದ ಎಲ್ಲಾ ಶಾಸಕರಿಗೆ ಏಪ್ರಿಲ್ 1ರಿಂದಲೇ ಪೂರ್ತಿ ವೇತನ ಹಾಗೂ ಪೂರ್ತಿ ಪ್ರಮಾಣದ ಶಾಸಕರ ನಿಧಿ ಲಭ್ಯವಾಗಲಿದೆ.
ಶುಕ್ರವಾರ ವಿಧಾನಸಭೆ ಅಧಿವೇಶನದಲ್ಲಿ 2021-22ರ ಬಜೆಟ್ ಮಂಡನೆ ವೇಳೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಈ ವಿಚಾರ ತಿಳಿಸಿದ್ದಾರೆ.
ಕೊರೋನಾ ಲಾಕ್ಡೌನ್ ಹಾಗೂ ಕೊರೋನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಹಣದ ಸಂಗ್ರಹಕ್ಕಾಗಿ ಕಳೆದ ವರ್ಷ ಶಾಸಕರ ವೇತನದ ಪೈಕಿ ಶೇ.30ರಷ್ಟುಕಡಿತಗೊಳಿಸಲಾಗಿತ್ತು ಹಾಗೂ 2 ವರ್ಷಗಳಿಗೆ ಅನ್ವಯಿಸುವಂತೆ ಶಾಸಕರ ನಿಧಿಯನ್ನು ಅಮಾನತಿನಲ್ಲಿಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ