
ತ್ರಿಶ್ಶೂರ್[ಫೆ.28]: ಕೇರಳದ ತ್ರಿಶ್ಶೂರ್ ಜಿಲ್ಲೆಯ ಗುರುವಾಯೂರು ದೇಗುಲದ ಅತ್ಯಂತ ಜನಪ್ರಿಯ ಆನೆಗಳ ಪೈಕಿ ಒಂದಾದ ಗಜರತ್ನಂ ಗುರುವಾಯೂರು ಪದ್ಮನಾಭನ್ ಬುಧವಾರ ಸಾವಿಗೀಡಾಗಿದೆ.
ದೇವಾಲಯದ ಕೃಷ್ಣನ ಮೂರ್ತಿಯನ್ನು ಈ ಆನೆ ಹೊರುತ್ತಿತ್ತು. 84 ವರ್ಷದ ಈ ಆನೆ ಕಳೆದ ಒಂದು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿತ್ತು. ಪಾಲಕ್ಕಾಡಿನ ಒಟ್ಟಪಲ್ಲಂನಲ್ಲಿ 1954ರಲ್ಲಿ ಜನಿಸಿದ ಈ ಆನೆ, ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿತ್ತು.
ಕಳೆದ 66 ವರ್ಷಗಳಿಂದ ಶ್ರೀ ಕೃಷ್ಣನ ಮೂರ್ತಿಯನ್ನು ಹೊತ್ತು ದೇವಾಲಯದ ಉತ್ಸವದಲ್ಲಿ ಭಾಗಿ ಆಗುತ್ತಿತ್ತು. ತನ್ನ ಉದ್ದನೆಯ ದಂತ ಮತ್ತು ದೈತ್ಯ ದೇಹದ ಕಾರಣದಿಂದ ಗಜರತ್ನ ಎಂಬ ಬಿರುದಿಗೆ ಪಾತ್ರವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ