
ನವದೆಹಲಿ (ಸೆ.6): ಚುನಾವಣಾ ದೇಣಿಗೆ ಕುರಿತು ಆಕ್ಷೇಪಗಳ ನಡುವೆಯೇ, 2024ರ ಲೋಕಸಭಾ ಚುನಾವಣೆಗೂ ಮುನ್ನ ಗುಜರಾತ್ನ ಮಾನ್ಯತೆ ಹೊಂದಿರದ 6 ಪಕ್ಷಗಳಿಗೆ ಭರ್ಜರಿ 1700 ಕೋಟಿ ರು.ದೇಣಿಗೆ ಸಂದಾಯವಾಗಿತ್ತು. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.
ಚುನಾವಣೆಗೆ ಅಭ್ಯರ್ಥಿಗಳನ್ನೇ ಕಣಕ್ಕಿಳಿಸದ ಈ ಪಕ್ಷಗಳು, ಬಿಜೆಪಿ ಹೊರತುಪಡಿಸಿ 5 ರಾಷ್ಟ್ರೀಯ ಪಕ್ಷಗಳು ಸಂಗ್ರಹಿಸಿದ ಒಟ್ಟು ದೇಣಿಗೆಗಿಂತ 200 ಕೋಟಿ ರು. ಹೆಚ್ಚಿಗೆ ದೇಣಿಗೆ ಪಡೆದಿರುವುದು ಪಕ್ಷದ ಹೆಸರಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆಗೆ ಎಡೆಮಾಡಿದೆ.
ಕಾಂಗ್ರೆಸ್, ಸಿಪಿಎಂ, ಎಎಪಿ, ಬಿಎಸ್ಪಿ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಒಟ್ಟು ಆದಾಯವು 2023-24ರಲ್ಲಿ 1,480.43 ಕೋಟಿ ರು.ನಷ್ಟಿತ್ತು. ಇವುಗಳನ್ನು ಮೀರಿ 6 ಸ್ಥಳೀಯ ಪಕ್ಷಗಳು ದೇಣಿಗೆ ಸಂಗ್ರಹಿಸಿವೆ.
2020ರಲ್ಲಿ ಸ್ಥಾಪನೆಯಾಗಿದ್ದ ಆಮ್ ಜನ್ಮತ್ ಪಾರ್ಟಿಯು 2022-23ರಲ್ಲಿ 216 ಕೋಟಿ ರು. ದೇಣಿಗೆ ಪಡೆದಿದ್ದರೆ, 2023-24ನೇ ಸಾಲಿನಲ್ಲಿ ಅತಿ ಹೆಚ್ಚು, 620 ಕೋಟಿ ರು. ದೇಣಿಗೆ ಪಡೆದಿದೆ. ಸತ್ಯವಾದಿ ರಕ್ಷಕ ಪಾರ್ಟಿಯು 330.55 ಕೋಟಿ ರು. ಪಡೆದಿದ್ದು, ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಉಳಿದಂತೆ ಸ್ವತಂತ್ರತಾ ಅಭಿವ್ಯಕ್ತಿ ಪಾರ್ಟಿ 219.69 ಕೋಟಿ ರು., ನ್ಯೂ ಇಂಡಿಯಾ ಯುನೈಟೆಡ್ ಪಾರ್ಟಿ 200.69 ಕೋಟಿ ರು., ಭಾರತೀಯ ರಾಷ್ಟ್ರೀಯ ಜನತಾ ದಳ 191.61 ಕೋಟಿ ರು. ಮತ್ತು ಗರೀಬ್ ಕಲ್ಯಾಣ್ ಪಾರ್ಟಿ 138 ಕೋಟಿ ರು. ದೇಣಿಗೆ ಪಡೆದಿದ್ದವು. ಈ 6 ಪಕ್ಷಗಳು 2024ರ ಲೋಕಸಭಾ ಚುನಾವಣೆಗೆ ಕೇವಲ 15 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ