'ಲಸಿಕೆ ಉತ್ಸವ ಹೆಸರಲ್ಲಿ ಜನರಿಗೆ ಮೋಸ, ಪಿಎಂ ಕೇರ್  ಹಣ ಏನಾಯ್ತು? '

Published : Apr 15, 2021, 09:10 PM IST
'ಲಸಿಕೆ ಉತ್ಸವ ಹೆಸರಲ್ಲಿ ಜನರಿಗೆ ಮೋಸ, ಪಿಎಂ ಕೇರ್  ಹಣ ಏನಾಯ್ತು? '

ಸಾರಾಂಶ

ಲಸಿಕೆ ಉತ್ಸವದ ಹೆಸರಿನಲ್ಲಿ ಜನರಿಗೆ ಮೋಸ/ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ/ ಕೊರೋನಾ ನಿಯಂತ್ರಣಕ್ಕೆ ನಿಜವಾದ ಕಾಳಜಿ ಇಲ್ಲ/ ಬೆಡ್ ವ್ಯವಸ್ಥೆ ಇಲ್ಲ, ಟೆಸ್ಟಿಂಗ್ ಇಲ್ಲ.. 

ನವದೆಹಲಿ (ಏ. 15) ಕೇಂದ್ರ ಸರ್ಕಾರ ಕೊರೋನಾಕ್ಕೆ ಸಂಬಂಧಿಸಿ ನಿಜವಾದ ಕಾಳಜಿ ಮೆರೆಯುವ ಬದಲುನ ಉತ್ಸವ ಮಾಡಿಕೊಂಡು ಕುಳಿತಿದೆ ಎಂದು ಕಾಂಗ್ರೆಸ್  ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಬೆಡ್ ವ್ಯವಸ್ಥೆ ಮಾಡಲಾಗಿಲ್ಲ. ಟೆಸ್ಟಿಂಗ್ ಸರಿಯಾಗಿ ನಡೆಯುತ್ತಿಲ್ಲ. ವೆಂಟಿಲೇಟರ್ ಮತ್ತು ಆಕ್ಸಿಜನ್  ಸ್ಥಿತಿ ಕೇಳುವುದೇ ಬೇಡ ಆಗಿದೆ ಎಂದು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಕೊರೋನಾ ಕಾರಣ; ನೀಟ್ ಪರೀಕ್ಷೆ ಸಹ ಮುಂದಕ್ಕೆ

ಕೊರೋನಾ ನಿರ್ವಹಣೆಗೆಂದು ಪಿಎಂ ಕೇರ್ ಫಂಡ್ ಗೆ ದೊಡ್ಡ ಮೊಟ್ಟದ ಡೊನೇಶನ್ ಹರಿದು ಬರುತ್ತಿದೆ.  ಬೆಡ್ ವ್ಯವಸ್ಥೆ ಇಲ್ಲ, ಟೆಸ್ಟಿಂಗ್ ಇಲ್ಲ.. ಹಾಗಾದರೆ ಪಿಎಂ ಕೇರ್ ಹಣ ಏನಾಗುತ್ತಿದೆ? ಎಂದು ಪ್ರಶ್ನೆ ಮಾಡಿದ್ದಾರೆ.

ಟಿಕಾ ಉತ್ಸವ ಎಂದು  ಕೊರೋನಾ ಲಸಿಕೆ ಅಭಿಯಾನವನ್ನು ಕರೆದು ಅದಕ್ಕೆ ಜಾಹೀರಾತು ಕೊಟ್ಟ ವಿಚಾರಕ್ಕೆ ರಾಹುಲ್ ಕಿಡಿಯಾಗಿದ್ದಾರೆ. ಭಾತರತದಲ್ಲಿ ಒಂದೇ ದಿನ 2,00,739 COVID-19 ಸೋಂಕುಗಳು ಪತ್ತೆಯಾಗಿದ್ದರೆ 1,038 ಸಾವು ಸಂಭವಿಸಿದ್ದು  ದೇಶದ  ಸೋಂಕಿತರ ಸಂಖ್ಯೆ 1,40,74,564 ಕ್ಕೆ ತಲುಪಿದ್ದು ಆತಂಕ ಹೆಚ್ಚಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್