ಜನರ ಚುಚ್ಚು ಮಾತಿಗೆ ಬೇಸತ್ತು ರಾಧಿಕಾ ಕೊಂದ ತಂದೆ

Kannadaprabha News   | Kannada Prabha
Published : Jul 12, 2025, 04:42 AM IST
Radhika Yadav murder case

ಸಾರಾಂಶ

ಹರ್ಯಾಣದ ಗುರುಗ್ರಾಮದಲ್ಲಿ ತಂದೆಯಿಂದಲೇ ಹತ್ಯೆಯಾದ ರಾಷ್ಟ್ರ ಮಟ್ಟದ ಟೆನ್ನಿಸ್‌ ಆಟಗಾರ್ತಿ ರಾಧಿಕಾ ಯಾದವ್ ಕೊಲೆಗೆ ಕೌಟುಂಬಿಕ ಕಲಹವೇ ಮುಖ್ಯ ಕಾರಣ ಎನ್ನಲಾಗುತ್ತಿದ್ದು, ಮಗಳ ರೀಲ್ಸ್ ಹುಚ್ಚು, ಜನರ ಚುಚ್ಚು ಮಾತು ತಂದೆ ದೀಪಕ್‌ ಯಾದವ್‌ನನ್ನು ಕೆರಳಿಸಿತ್ತು.

ಗುರುಗ್ರಾಮ: ಹರ್ಯಾಣದ ಗುರುಗ್ರಾಮದಲ್ಲಿ ತಂದೆಯಿಂದಲೇ ಹತ್ಯೆಯಾದ ರಾಷ್ಟ್ರ ಮಟ್ಟದ ಟೆನ್ನಿಸ್‌ ಆಟಗಾರ್ತಿ ರಾಧಿಕಾ ಯಾದವ್ ಕೊಲೆಗೆ ಕೌಟುಂಬಿಕ ಕಲಹವೇ ಮುಖ್ಯ ಕಾರಣ ಎನ್ನಲಾಗುತ್ತಿದ್ದು, ಮಗಳ ರೀಲ್ಸ್ ಹುಚ್ಚು, ಜನರ ಚುಚ್ಚು ಮಾತು ತಂದೆ ದೀಪಕ್‌ ಯಾದವ್‌ನನ್ನು ಕೆರಳಿಸಿತ್ತು. ಹೀಗಾಗಿ ಕಳೆದ 3 ದಿನದಿಂದ ಮಗಳ ಮೇಲೆ ಕುದಿಯುತ್ತಿದ್ದ ಅವರು ಆಕೆಯನ್ನು ಕೊಂದರು ಎಂದು ಗೊತ್ತಾಗಿದೆ.

ಇದೇ ವೇಳೆ ಪೋಸ್ಟ್‌ ಮಾರ್ಟಂ ವರದಿಯಲ್ಲಿ ಆಕೆಯ ಮೇಲೆ ತಂದೆ ದೀಪಕ್ 4 ಗುಂಡು ಹಾರಿಸಿದ್ದು ಗೊತ್ತಾಗಿದೆ.

ಮಾಜಿ ಬ್ಯಾಂಕ್ ಉದ್ಯೋಗಿ ದೀಪಕ್‌ ಹಲವು ಆಸ್ತಿ ಹೊಂದಿದ್ದರು. ಅದರಿಂದಲೇ ತಿಂಗಳಿಗೆ 15- 17 ಲಕ್ಷ ರು. ಆದಾಯ ಬರುತ್ತಿತ್ತು. ಆಕೆಯ ಟೆನ್ನಿಸ್‌ ಅಕಾಡೆಮಿಗೆ 2.5 ಕೋಟಿ ರು. ಖರ್ಚು ಮಾಡಿದ್ದರು. ಈ ನಡುವೆ ರಾಧಿಕಾ ಗಾಯದ ಬಳಿಕ ಟೆನ್ನಿಸ್‌ ಕಡೆಗೆ ಗಮನ ನೀಡಿರಲಿಲ್ಲ. ರೀಲ್ಸ್ ಗೀಳಿಗೆ ಬಿದ್ದು ಇನ್‌ಫ್ಲೂಯೆನ್ಸರ್‌ ಎಲ್ವಿಶ್‌ ಯಾದವ್ ರೀತಿ ಜನಪ್ರಿಯತೆ ಪಡೆವ ಕನಸು ಕಂಡಿದ್ದರು. ತಂದೆ ಬುದ್ಧಿ ಹೇಳಿದರೂ ಕೇಳಿರಲಿಲ್ಲ. ಜೊತೆಗೆ ಮಗಳ ಟೆನ್ನಿಸ್‌ ಅಕಾಡೆಮಿ ಆದಾಯದಿಂದ ಜೀವನ ನಡೆಸುತ್ತಿದ್ದಾರೆ ಎಂದು ಊರಿನವರು ನಿಂದಿಸುತ್ತಿದ್ದರು. ಅಕಾಡೆಮಿ ಮುಚ್ಚು ಎಂದರೂ ಆಕೆ ಕೇಳಿರಲಿಲ್ಲ, ಇದು ತಂದೆಯನ್ನು ಕೆರಳಿಸಿತ್ತು.

ಹೀಗಾಗಿಯೇ ತಾನು ಆಕೆಯನ್ನು ಕೊಂದೆ ಎಂದು ದೀಪಕ್‌ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಿಟ್ಟು?

ಈ ನಡುವೆ ‘ಕರ್ವಾನ್‌’ ಎನ್ನುವ ಮ್ಯೂಸಿಕ್‌ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ತಂದೆ ಆಕ್ಷೇಪಿಸಿ, ವಿಡಿಯೋ ಅಳಿಸು ವಂತೆ ಕೇಳಿದ್ದರು. ಅದು ಆಗಿರಲಿಲ್ಲ. ಈ ವಿಚಾರಗಳೇ ಕೊಲೆಗೆ ಕಾರಣ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನು ರಾಧಿಕಾ ಯಾದವ್‌ಗೆ ದೀಪಕ್‌ ನಾಲ್ಕು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು