ಸತ್ಯನಾರಾಯಣ ಪೂಜೆ ಉಲ್ಟಾ ಹೊಡೀತು ಎಂದು ಅರ್ಚಕನಿಗೆ ಥಳಿತ

Published : Oct 04, 2022, 07:40 AM ISTUpdated : Oct 04, 2022, 07:41 AM IST
ಸತ್ಯನಾರಾಯಣ ಪೂಜೆ ಉಲ್ಟಾ ಹೊಡೀತು ಎಂದು ಅರ್ಚಕನಿಗೆ ಥಳಿತ

ಸಾರಾಂಶ

ಮನೆಯಲ್ಲಿ ಮಾಡಿಸಿದ ಸತ್ಯನಾರಾಯಣ ಪೂಜೆ ನಿರೀಕ್ಷಿತ ಫಲ ಕೊಡಲಿಲ್ಲ ಎಂಬ ಕಾರಣಕ್ಕೆ ಪೂಜಾರಿಯನ್ನು ತಂದೆ ಮಕ್ಕಳು ಸೇರಿ ಥಳಿಸಿದ ಘಟನೆ ಮಧ್ಯಪ್ರದೇಶ ಇಂದೋರ್‌ನಲ್ಲಿ ನಡೆದಿದೆ.

ಇಂದೋರ್‌: ಮನೆಯಲ್ಲಿ ಮಾಡಿಸಿದ ಸತ್ಯನಾರಾಯಣ ಪೂಜೆ ನಿರೀಕ್ಷಿತ ಫಲ ಕೊಡಲಿಲ್ಲ ಎಂಬ ಕಾರಣಕ್ಕೆ ಪೂಜಾರಿಯನ್ನು ತಂದೆ ಮಕ್ಕಳು ಸೇರಿ ಥಳಿಸಿದ ಘಟನೆ ಮಧ್ಯಪ್ರದೇಶ ಇಂದೋರ್‌ನಲ್ಲಿ ನಡೆದಿದೆ.

ಕುಂಜ್‌ಬಿಹಾರಿ (60) ಥಳಿತಕ್ಕೊಳಗಾದ ವ್ಯಕ್ತಿ. ಲಕ್ಷ್ಮೀಕಾಂತ್‌ ಶರ್ಮಾ (Lakshmikanth sharma) ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ (Sathyanarayana Puja)ನಡೆಸಿ ಮನೆಗೆ ಮರಳಿದ್ದೆ. ಆದರೆ ಪೂಜೆ ಮುಗಿದ ಬಳಿಕ ಶರ್ಮಾ ಅವರ ಪುತ್ರ ವಿಚಿತ್ರವಾಗಿ ಆಡಲು ಆರಂಭಿಸಿದ್ದ. ಹೀಗಾಗಿ ಪೂಜೆಯಲ್ಲಿ ಏನೋ ದೋಷ ಆಗಿದೆ ಎಂದು ಎಣಿಸಿ ಅಪ್ಪ-ಮಕ್ಕಳು ರಾತ್ರಿ ನನ್ನ ಮನೆಗೆ ಆಗಮಿಸಿ ಹಲ್ಲೆ ನಡೆಸಿದ್ದಾರೆ ಎಂದು ಕುಂಜ್‌ ಬಿಹಾರಿ (Kunj bihari) ದೂರಿದ್ದಾರೆ. ಈ ವೇಳೆ ನೆರೆಹೊರೆಯವರು ಅರ್ಚಕರನ್ನು (Priest) ರಕ್ಷಿಸಿದ್ದಾರೆ. ಪ್ರಕರಣ ಸಂಬಂಧ ಲಕ್ಷ್ಮಿಕಾಂತ್‌ ಅವರ ಕುಟುಂಬದ ಮೂವರನ್ನು ಬಂಧಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್