
ಕರ್ನಾಲ್(ಸೆ.01): ಇತ್ತೀಚೆಗಷ್ಟೇ ಅನ್ನದಾತರ ಮೇಲೆ ಲಾಠಿಚಾಜ್ರ್ಗೆ ಆದೇಶ ನೀಡಿದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇಲ್ಲಿನ ಜಿಲ್ಲಾ ಕೇಂದ್ರದಲ್ಲಿ ರೈತರು ಭಾರೀ ಪ್ರತಿಭಟನೆ ನಡೆಸಿದರು
ಈ ಸಂಬಂಧ ಮಂಗಳವಾರದಿಂದಲೇ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸುತ್ತಿರುವ ರೈತರು ರಾತ್ರಿಯೂ ಸ್ಥಳದಿಂದ ನಿರ್ಗಮಿಸದೇ ಧರಣಿ ನಡೆಸಿದರು. ಅಲ್ಲದೆ ರೈತರ ತಲೆಗಳನ್ನು ಒಡೆಯಿರಿ ಎಂದು ಕರೆ ನೀಡಿದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಅವರನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳುವವರೆಗೆ ನಾವೆಲ್ಲೂ ಹೋಗಲ್ಲ ಎಂದು ರೈತರು ಗುಡುಗಿದರು.
ಈ ಹಿಂದೆ ದೆಹಲಿಯ ಗಡಿಗಳಾದ ಟಿಕ್ರಿ ಮತ್ತು ಸಿಂಘೂ ಗಡಿ ರೀತಿಯ ಹೋರಾಟವನ್ನು ಇಲ್ಲೂ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.
ಆ.28ರಂದು ಪ್ರತಿಭಟನೆ ವೇಳೆ ರೈತರು ಹದ್ದು ಮೀರಿ ವರ್ತಿಸಿದರೆ ಅವರ ತಲೆಗಳನ್ನು ‘ಹೋಳು ಮಾಡಿ’ ಎಂದು ಐಎಎಸ್ ಅಧಿಕಾರಿ ಸಿನ್ಹಾ ಅವರು ಪೊಲೀಸರಿಗೆ ಹೇಳಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ