1947ರ ಬಳಿಕ ಮೊದಲ ಬಾರಿ ಜಮ್ಮು ಕಾಶ್ಮೀರದ ಶಾರದಾ ದೇಗುಲದಲ್ಲಿ Deepavali

By Kannadaprabha NewsFirst Published Oct 26, 2022, 11:15 AM IST
Highlights

ಈ ದೇಗುಲದಲ್ಲಿ ಶೃಂಗೇರಿ ಶ್ರೀಮಠವು ಇತ್ತೀಚೆಗೆ ನೀಡಿದ್ದ ವಿಗ್ರಹವನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ದೇಗುಲಕ್ಕೆ ಕರ್ನಾಟಕದ ಕಲ್ಲುಗಳನ್ನು ಬಳಸಲಾಗಿದ್ದು, ಕರ್ನಾಟಕದ ಮಾಗಡಿಯ ಕುಶಲಕರ್ಮಿಗಳು ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ತೀತ್ವಾಲ್‌ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಶಾರದಾ ದೇಗುಲದಲ್ಲಿ ಸೋಮವಾರ ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಿಸಲಾಯಿತು. ಕುಪ್ವಾರಾ ಜಿಲ್ಲೆಯಲ್ಲಿ ಬರುವ ಈ ದೇಗುಲದಲ್ಲಿ ದೀಪಾವಳಿ ಆಚರಣೆ ಮಾಡುತ್ತಿರುವುದು ಸ್ವಾತಂತ್ರ್ಯಾ ನಂತರ ಇದೇ ಮೊದಲು. ಸ್ಥಳೀ​ಯರು ಹಾಗೂ ಸೈನಿ​ಕರು ನೂರಾರು ದೀಪ​ ಬೆಳ​ಗಿ ಸಿಹಿ ಹಂಚುವ ಮೂಲಕ ದೀಪಾ​ವ​ಳಿ​ಯನ್ನು ಆಚ​ರಿ​ಸಿ​ದರು. ಈ ದೇಗುಲದಲ್ಲಿ ಶೃಂಗೇರಿ ಶ್ರೀಮಠವು ಇತ್ತೀಚೆಗೆ ನೀಡಿದ್ದ ವಿಗ್ರಹವನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ದೇಗುಲಕ್ಕೆ ಕರ್ನಾಟಕದ ಕಲ್ಲುಗಳನ್ನು ಬಳಸಲಾಗಿದ್ದು, ಕರ್ನಾಟಕದ ಮಾಗಡಿಯ ಕುಶಲಕರ್ಮಿಗಳು ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಸರಸ್ವತಿ ದೇವಿಯನ್ನು ಕಾಶ್ಮೀರದಲ್ಲಿ ಶಾರದೆ ಎಂದು ಕರೆಯಲಾಗುತ್ತದೆ. ಶಾರದಾ ಪೀಠವು ಭಾರತೀಯ ಉಪಖಂಡದ ಅಗ್ರಗಣ್ಯ ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ತೀತ್ವಾಲ್‌ 
ಕುಪ್ವಾರದಲ್ಲಿದೆ ಮತ್ತು ಶಾರದಾ ಪೀಠವು ಈ ಗ್ರಾಮದಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿದೆ.

ಇದನ್ನು ಓದಿ: ಕಾಶ್ಮೀರದ ದೇವಾಲಯಕ್ಕೆ ಶೃಂಗೇರಿಯಿಂದ ಪಂಚಲೋಹ ಮೂರ್ತಿ ಹಸ್ತಾಂತರ

ಶಾರದಾ ಪೀಠವು ನೀಲಂ ನದಿಯ ಉದ್ದಕ್ಕೂ ಶಾರದಾ ಗ್ರಾಮದಲ್ಲಿ ನೆಲೆಸಿರುವ ದೇವಾಲಯವಾಗಿದೆ, ಇದು ಕಲಿಕೆಯ ಪ್ರಮುಖ ಕೇಂದ್ರವಾಗಿತ್ತು. ಇದು ದಕ್ಷಿಣ ಏಷ್ಯಾದ 18 ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ.

ಭಾರತ - ಪಾಕ್‌ ವಿಭಜನೆಯ ನಂತರ ಮೊದಲ ಬಾರಿಗೆ, ಶಾರದಾ ಯಾತ್ರಾ ದೇವಸ್ಥಾನದಲ್ಲಿ ದೀಪಾವಳಿ ಆಚರಣೆಗಳನ್ನು ಮೇಣದಬತ್ತಿಗಳು ಮತ್ತು ದೀಪಗಳನ್ನು ಬೆಳಗಿಸಲಾಗಿದೆ. ಸೋಮವಾರದಂದು ಹೆಚ್ಚಿನ ಸಂಖ್ಯೆಯ ಸ್ಥಳೀಯರು ಸೇನಾ ಯೋಧರೊಂದಿಗೆ ಮಣ್ಣಿನ ದೀಪಗಳು, ಮೇಣದಬತ್ತಿಗಳನ್ನು ಬೆಳಗಿಸಿ ಮತ್ತು ಸಿಹಿ ಹಂಚುವ ಮೂಲಕ ದೀಪಾವಳಿಯನ್ನು ಆಚರಿಸಿದರು ಎಂದು ಸೇವ್‌ ಶಾರದಾ ಸಮಿತಿ ಅಧ್ಯಕ್ಷ ರವೀಂದರ್ ಪಂಡಿತ್ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಶಾರದಾ ಪೀಠ ಗರ್ಭಗುಡಿ ನಿರ್ಮಾಣ ಶುರು, ಮಾಗಡಿ ಕಲ್ಲು ಬಳಕೆ!

ನಿರ್ಮಾಣ ಸಮಿತಿ ಸದಸ್ಯ ಏಜಾಜ್ ಖಾನ್ ನೇತೃತ್ವದಲ್ಲಿ, ವಿಭಜನೆಯ ನಂತರ ಮೊದಲ ಬಾರಿಗೆ ತೀತ್ವಾಲ್‌ನಲ್ಲಿ ದೀಪಾವಳಿ ಆಚರಿಸಲಾಯಿತು. ಸೇವ್‌ ಶಾರದಾ ಸಮಿತಿಯು ದೇವಸ್ಥಾನ ಮತ್ತು ಸಿಖ್ ಗುರುದ್ವಾರದ ಪುನರ್‌ನಿರ್ಮಾಣದ ಮುಂದಾಳತ್ವವನ್ನು ವಹಿಸಿಕೊಂಡಿದೆ ಎಂದು ಅವರು ಹೇಳಿದರು.

click me!