ಲಸಿಕೆ ಪಡೆದವರಲ್ಲಿ ಪತ್ತೆಯಾದ ಸೋಂಕಿನಲ್ಲಿ ಬಹುಪಾಲು ಡೆಲ್ಟಾ

Kannadaprabha News   | Asianet News
Published : Jul 17, 2021, 09:35 AM IST
ಲಸಿಕೆ ಪಡೆದವರಲ್ಲಿ ಪತ್ತೆಯಾದ ಸೋಂಕಿನಲ್ಲಿ ಬಹುಪಾಲು ಡೆಲ್ಟಾ

ಸಾರಾಂಶ

ಲಸಿಕೆ ಪಡೆದ ಹೆಚ್ಚಿನವರಲ್ಲಿ ಕಾಣಿಸಿಕೊಂಡಿರುವುದು ಡೆಲ್ಟಾರೂಪಾಂತರಿ ವೈರಸ್‌  ಲಸಿಕೆ ಪಡೆದವರಲ್ಲಿ ಶೇ.9.8 ಮಂದಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅಗತ್ಯತೆ ಲಸಿಕೆ ಪಡೆದವರಲ್ಲಿ ಶೇ.0.4ರಷ್ಟುಮಾತ್ರ ಸಾವು ಸಂಭವಿಸಿದೆ.

 ನವದೆಹಲಿ (ಜು.17):  ಒಂದು ಅಥವಾ ಎರಡು ಡೋಸ್‌ ಲಸಿಕೆ ಪಡೆದ ನಂತರ ಕೊರೋನಾ ಸೋಂಕು ತಗಲಿದರೆ ಅದರ ಸ್ವರೂಪ ಹೇಗಿರುತ್ತದೆ ಎಂಬ ಬಗ್ಗೆ ಇದೇ ಮೊದಲ ಬಾರಿ ದೇಶಾದ್ಯಂತ ಸಮಗ್ರ ಅಧ್ಯಯನವೊಂದು ನಡೆದಿದ್ದು, ಅದರಲ್ಲಿ ಲಸಿಕೆ ಪಡೆದ ಹೆಚ್ಚಿನವರಲ್ಲಿ ಕಾಣಿಸಿಕೊಂಡಿರುವುದು ಡೆಲ್ಟಾರೂಪಾಂತರಿ ವೈರಸ್‌ ಎಂಬುದು ಪತ್ತೆಯಾಗಿದೆ. ಅಲ್ಲದೆ, ಲಸಿಕೆ ಪಡೆದವರಲ್ಲಿ ಶೇ.9.8 ಮಂದಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅಗತ್ಯ ಕಂಡುಬಂದಿದ್ದು, ಶೇ.0.4ರಷ್ಟುಮಾತ್ರ ಸಾವು ಸಂಭವಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಕರ್ನಾಟಕ ಸೇರಿದಂತೆ 17 ರಾಜ್ಯಗಳಲ್ಲಿ ಈ ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ ಒಂದು ಅಥವಾ ಎರಡು ಡೋಸ್‌ ಕೋವಿಶೀಲ್ಡ್‌ ಅಥವಾ ಕೋವ್ಯಾಕ್ಸಿನ್‌ ಲಸಿಕೆ ಪಡೆದ ನಂತರವೂ ಕೋವಿಡ್‌ ತಗಲಿದ 677 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಬೆಂಗಳೂರು IISC ಲಸಿಕೆ ಡೆಲ್ಟಾಗೂ ರಾಮಬಾಣ : ತಜ್ಞರ ಮಹತ್ವದ ಅಧ್ಯಯನ

ಅವರ ಪೈಕಿ 86% ಜನರಲ್ಲಿ ಡೆಲ್ಟಾರೂಪಾಂತರಿ ವೈರಸ್‌ ಕಾಣಿಸಿಕೊಂಡಿದೆ. 85 ಜನರಲ್ಲಿ ಮೊದಲ ಡೋಸ್‌ ನಂತರ, 592 ಜನರಲ್ಲಿ ಎರಡೂ ಡೋಸ್‌ ನಂತರ ಸೋಂಕು ಕಾಣಿಸಿಕೊಂಡಿದೆ. 71% ಜನರಲ್ಲಿ ಸೋಂಕಿನ ಲಕ್ಷಣಗಳಿದ್ದರೆ, 29% ಜನರಲ್ಲಿ ಲಕ್ಷಣಗಳಿರಲಿಲ್ಲ. ಇವರಲ್ಲಿ 67 ಜನರಿಗೆ ಮಾತ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ಅಗತ್ಯ ಕಂಡುಬಂದಿದೆ. ಇನ್ನುಳಿದವರು ಮನೆಯಲ್ಲೇ ಗುಣಮುಖರಾಗಿದ್ದಾರೆ. ಕೇವಲ 3 ಮಂದಿ ಮಾತ್ರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

‘ಹೀಗಾಗಿ ಕೊರೋನಾದ ಮುಂದಿನ ಅಲೆಗಳನ್ನು ತಡೆಯಲು ಹಾಗೂ ಅದರಿಂದ ಉಂಟಾಗಬಹುದಾದ ಸಾವನ್ನು ಕಡಿಮೆ ಮಾಡಲು ಲಸಿಕೆ ನೀಡುವ ವೇಗವನ್ನು ಹೆಚ್ಚಿಸುವುದೇ ಪರಿಣಾಮಕಾರಿಯಾದ ಮಾರ್ಗ’ ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ