ರೋಹಿಣಿ ಜೈಲಿನ 82 ಅಧಿಕಾರಿಗಳ ಮೇಲೆ FIR,ಸುಕೇಶ್‌ನಿಂದ ತಿಂಗಳಿಗೆ 1.5 ಕೋಟಿ ರೂಪಾಯಿ ಲಂಚ!

Published : Jul 10, 2022, 12:45 PM IST
ರೋಹಿಣಿ ಜೈಲಿನ 82 ಅಧಿಕಾರಿಗಳ ಮೇಲೆ FIR,ಸುಕೇಶ್‌ನಿಂದ ತಿಂಗಳಿಗೆ 1.5 ಕೋಟಿ ರೂಪಾಯಿ ಲಂಚ!

ಸಾರಾಂಶ

* ಸುಕೇಶ್ ಚಂದ್ರಶೇಖರ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ಮತ್ತೊಂದು ಶಾಕಿಂಗ್ ಮಾಹಿತಿ  * ರೋಹಿಣಿ ಜೈಲಿನ 82 ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಎಫ್‌ಐಆರ್ * ಸುಕೇಶ್‌ನಿಂದ ತಿಂಗಳಿಗೆ ಒಂದೂವರೆ ಕೋಟಿ ರೂಪಾಯಿ ಲಂಚ

ನವದೆಹಲಿ(ಜು.10): ಸುಕೇಶ್ ಚಂದ್ರಶೇಖರ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ಮತ್ತೊಂದು ಶಾಕಿಂಗ್ ಮಾಹಿತಿ ಹೊರ ಬಿದ್ದಿದೆ. ದೆಹಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗವು ರೋಹಿಣಿ ಜೈಲಿನ 82 ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಈ ಅಧಿಕಾರಿಗಳು ಸುಕೇಶ್ ಚಂದ್ರಶೇಖರ್ ಅವರಿಂದ ತಿಂಗಳಿಗೆ ಸುಮಾರು 1.5 ಕೋಟಿ ರೂಪಾಯಿ ಲಂಚ ಪಡೆಯುತ್ತಿದ್ದರು ಎಂಂಬ ಆರೋಪ ಕೇಳಿ ಬಂದಿದೆ. ಜೈಲಿನಲ್ಲಿ ಮೊಬೈಲ್ ಫೋನ್ ಬಳಕೆ ಸೇರಿದಂತೆ ಪ್ರತ್ಯೇಕ ಬ್ಯಾರಕ್ ಹಾಗೂ ಇತರೆ ಸೌಲಭ್ಯ ಕಲ್ಪಿಸುವ ಹೆಸರಿನಲ್ಲಿ ಸುಕೇಶ್ ಅಧಿಕಾರಿಗಳಿಗೆ ಇಷ್ಟು ಮೊತ್ತ ನೀಡುತ್ತಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ಜೂನ್ 15 ರಂದು ಎಫ್‌ಐಆರ್ ದಾಖಲಾಗಿದೆ.

ಫೋರ್ಟಿಸ್ ಹೆಲ್ತ್‌ಕೇರ್‌ನ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಸೇರಿದಂತೆ ಕೆಲವು ಶ್ರೀಮಂತರನ್ನು ವಂಚಿಸಿದ ಆರೋಪದ ಮೇಲೆ ಸುಕೇಶ್ ಚಂದ್ರಶೇಖರ್ ಅವರನ್ನು ರೋಹಿಣಿಯ ಜೈಲು ಸಂಖ್ಯೆ 10 ರಲ್ಲಿ ವಾರ್ಡ್ ಸಂಖ್ಯೆ 3 ರ ಬ್ಯಾರಕ್ ಸಂಖ್ಯೆ 204 ರಲ್ಲಿ ಇರಿಸಲಾಗಿತ್ತು ಎಂಬುವುದು ಉಲ್ಲೇಖನೀಯ. ಈ ವೇಳೆ ಆತನಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡಿದ್ದಕ್ಕಾಗಿ 7 ಮಂದಿ ಜೈಲು ಸಿಬ್ಬಂದಿಯನ್ನು ಈಗಾಗಲೇ ಬಂಧಿಸಲಾಗಿತ್ತು.

ತಿಹಾರ್ ಜೈಲಿನಲ್ಲಿದ್ದುಕೊಂಡು 200 ಕೋಟಿ ವಂಚಿಸಿದ್ದ

ಈ ಹಿಂದೆ ದೆಹಲಿಯ ತಿಹಾರ್ ಜೈಲಿನಲ್ಲಿದ್ದುಕೊಂಡೇ ಸುಕೇಶ್ ಚಂದ್ರಶೇಖರ್ 200 ಕೋಟಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಸುಕೇಶ್ ಗೃಹ ಸಚಿವಾಲಯದ ಅಧಿಕಾರಿ ಎನ್ನುವ ಮೂಲಕ ಜೈಲಿನಿಂದ ವಂಚಿಸಿದ್ದ. ಧ್ವನಿ ಬದಲಿಸುವ ಮೂಲಕ ಜನರನ್ನು ಬಲೆಗೆ ಕೆಡವಿದ್ದ. ಸುಕೇಶ್ ಜೈಲು ಅಧಿಕಾರಿಗಳಿಗೆ ಲಕ್ಷ ಲಕ್ಷ ಲಂಚ ನೀಡಿ ಮೊಬೈಲ್ ಬಳಸಿದ್ದ ಎನ್ನಲಾಗಿದೆ. ತನಿಖೆಯ ನಂತರ ಹಲವಾರು ಜೈಲು ಅಧಿಕಾರಿಗಳನ್ನು ಬಂಧಿಸಲಾಗಿತ್ತು.

ಆಪ್ತರಿಗೆ ಪತ್ರಗಳನ್ನು ಕಳಿಸಿ ಸಿಕ್ಕಿಬಿದ್ದಿದ್ದ

ಇತ್ತೀಚೆಗೆ ಸುಕೇಶ್ ಚಂದ್ರಶೇಖರ್ ಜೈಲಿನ ಭದ್ರತಾ ವ್ಯವಸ್ಥೆಯನ್ನು ಉಲ್ಲಂಘಿಸಿ ಸಿಕ್ಕಿಬಿದ್ದಿದ್ದ. ಜೈಲಿನ ಹೊರಗೆ ಸುಕೇಶ್ ಸಂದೇಶ ಕಳುಹಿಸುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಗಳು ತಿಹಾರ್ ಜೈಲಿನ ನರ್ಸಿಂಗ್ ಸಿಬ್ಬಂದಿಗೆ ಪತ್ರ ಕಳುಹಿಸಿ ಹೊರಗೆ ಕಳುಹಿಸುತ್ತಿದ್ದರು. ಸುಕೇಶ್ ತನ್ನ ಸಂದೇಶವನ್ನು ಇಲ್ಲಿಂದ ಅಲ್ಲಿಗೆ ತಲುಪಿಸುತ್ತಿದ್ದ ಎಂದು ಜೈಲು ಆಡಳಿತ ಹೇಳಿದೆ. ಈ ಪ್ರಕರಣದಲ್ಲಿ ಆರೋಪಿ ನರ್ಸಿಂಗ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಹಾರ್ ಜೈಲು ಆಡಳಿತ ದೆಹಲಿ ಪೊಲೀಸರಿಗೆ ಪತ್ರ ಬರೆದಿದೆ.

ಸುಕೇಶ್ ಜೈಲಿನಲ್ಲಿ ಚರ್ಚೆಯಲ್ಲಿದ್ದಾರೆ

ವಾಸ್ತವವಾಗಿ, ಸಿಸಿಟಿವಿ ರೆಕಾರ್ಡಿಂಗ್ ಪರಿಶೀಲಿಸಿದಾಗ, ಅಧಿಕಾರಿಗಳು ಸುಕೇಶ್ ಜೈಲು ಆಸ್ಪತ್ರೆಯಲ್ಲಿ ಗುತ್ತಿಗೆಯಲ್ಲಿ ಕೆಲಸ ಮಾಡುವ ನರ್ಸಿಂಗ್ ಸಿಬ್ಬಂದಿಯೊಂದಿಗೆ ಮಾತನಾಡುತ್ತಿದ್ದರು ಮತ್ತು ಪತ್ರವನ್ನು ನೀಡುತ್ತಿದ್ದರು. ಈ ಪತ್ರವನ್ನು ಹೊರಗಿನ ನರ್ಸಿಂಗ್ ಸಿಬ್ಬಂದಿ ಸುಕೇಶ್ ಎಂಬಾತನಿಗೆ ನೀಡಬೇಕಾಗಿತ್ತು ಎನ್ನಲಾಗಿದೆ. ನರ್ಸಿಂಗ್ ಸಿಬ್ಬಂದಿಯನ್ನು ಕೇಳಿದಾಗ, ಅವರು ತೃಪ್ತಿಕರ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ. ಪ್ರಸ್ತುತ, ತಿಹಾರ್ ಅಧಿಕಾರಿಗಳು ಅದರ ತನಿಖೆಗಾಗಿ ದೆಹಲಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಇದೀಗ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಸುಕೇಶ್ ಚಂದ್ರಶೇಖರ್ ತಿಹಾರ್ ಜೈಲು ನಂ 3ರಲ್ಲಿ ಬಂಧಿಯಾಗಿದ್ದಾನೆ. ಕೆಲವೊಮ್ಮೆ ಉಪವಾಸ ಸತ್ಯಾಗ್ರಹದಲ್ಲಿ ಮತ್ತು ಕೆಲವೊಮ್ಮೆ ಭದ್ರತಾ ವ್ಯವಸ್ಥೆಯೊಂದಿಗೆ ಆಟವಾಡುತ್ತಾ, ಅವನು ತಿಹಾರ್ ಅಧಿಕಾರಿಗಳನ್ನು ಪೀಡಿಸುತ್ತಲೇ ಇರುತ್ತಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ