ಈ ಬಾರಿಯೂ ದೆಹಲಿಯಲ್ಲಿ ಪಟಾಕಿ ಸಂಪೂರ್ಣ ನಿಷೇಧ: ಮಾರಾಟ, ಸಂಗ್ರಹ ಎಲ್ಲವೂ ಬಂದ್!

By Suvarna NewsFirst Published Sep 15, 2021, 4:07 PM IST
Highlights

* ಈ ಬಾರಿಯೂ ದೆಹಲಿಯಲ್ಲಿ ಪಟಾಕಿಗೆ ಸಂಪೂರ್ಣ ನಿಷೇಧ

* ಮಾರಾಟ, ಸಂಗ್ರಹಕ್ಕೂ ಬ್ರೇಕ್

* ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕ್ರಮ ಜಾರಿಗೊಳಿಸಿದ ಆಪ್‌

ನವದೆಹಲಿ(ಸೆ.15): ಕಳೆದ ಮೂರು ವರ್ಷಗಳಿಂದ ದೀಪಾವಳಿಯಲ್ಲಿ ದೆಹಲಿಯ ವಾಯು ಮಾಲಿನ್ಯದ ಆತಂಕಕಾರಿ ಮಟ್ಟಕ್ಕೇರಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಎಲ್ಲಾ ರೀತಿಯ ಪಟಾಕಿಗಳ ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸುವುದಾಗಿ ಘೋಷಿಸಿದ್ದಾರೆ. ಜನರ ಜೀವ ಉಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದೂ ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಅರವಿಂದ ಕೇಜ್ರೀವಾಲ್ "ಕಳೆದ ವರ್ಷ, ವ್ಯಾಪಾರಿಗಳು ಪಟಾಕಿಗಳನ್ನು ಸಂಗ್ರಹಿಸಿದ್ದ ಬಳಿಕ, ಮಾಲಿನ್ಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ನಿಷೇಧವನ್ನು ಹೇರಲಾಗಿತ್ತು. ಆ ನಿಷೇಧ ಕೊಂಚ ತಡವಾಗಿ ವಿಧಿಸಲಾಗಿತ್ತು. ಹೀಗಾಗಿ ಅದು ವ್ಯಾಪಾರಿಗಳಿಗೆ ನಷ್ಟವನ್ನು ಉಂಟುಮಾಡಿತ್ತ. ಆದರೆ ಈ ಬಾರಿ ಸಂಪೂರ್ಣ ನಿಷೇಧವನಮ್ನು ಗಮನದಲ್ಲಿಟ್ಟುಕೊಂಡು, ಯಾವುದೇ ರೀತಿಯ ಶೇಖರಣೆಯನ್ನು ಮಾಡಬೇಡಿ ಎಂದು ಎಲ್ಲ ವ್ಯಾಪಾರಿಗಳಲ್ಲಿ ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ.

पिछले 3 साल से दीवाली के समय दिल्ली के प्रदूषण की खतरनाक स्तिथि को देखते हुए पिछले साल की तरह इस बार भी हर प्रकार के पटाखों के भंडारण, बिक्री एवं उपयोग पर पूर्ण प्रतिबंध लगाया जा रहा है। जिससे लोगों की जिंदगी बचाई जा सके।

— Arvind Kejriwal (@ArvindKejriwal)

ಈ ವರ್ಷ ನವೆಂಬರ್ ಮೊದಲ ವಾರದಲ್ಲಿ ದೀಪಾವಳಿ ಆಚರಿಸಲಾಗುತ್ತದೆ. ಪಟಾಕಿಗಳನ್ನು ಹೇರಳವಾಗಿ ಬಳಕೆ ಮಾಡಲಾಗುತ್ತಿದ್ದು, ಅತ್ತ ನೆರೆ ರಾಜ್ಯದ ರೈತರು ಸುಡುವ ಹುಲ್ಲಿನಿಂದಾಗಿ ಇತ್ತೀಚೆಗೆ ದೆಹಲಿಯಲ್ಲಿ ಚಳಗಾಲದಲ್ಲಿ ವಾಯುಮಾಲಿನ್ಯ ಭಾರೀ ಹೆಚ್ಚುತ್ತಿತ್ತು. ಇದಾದ ಬಳಿಕ ಕಳೆದ ವರ್ಷ ಸಿಎಂ ಕೇಜ್ರೀವಾಲ್ ಪಟಾಕಿ ಬಳಕೆಗೆ ಸಂಪೂರ್ಣ ನಿಷೇಧ ಹೇರಿದ್ದರು. ಹೀಗಿದ್ದರೂ ಬಿಜೆಪಿ ಈ ನಿರ್ಧಾರವನ್ನು ಟೀಕಿಸಿತ್ತು. ಪಟಾಕಿ ನಿಷೇಧದಿಂದ ವ್ಯಾಪಾರಿಗಳಿಗಾದ ನಷ್ಟವನ್ನು ಸರ್ಕಾರವೇ ಭರಿಸಬೇಕೆಂದು ಕಮಲ ಪಾಳಯ ಒತ್ತಾಯಿಸಿತ್ತು.

ದೆಹಲಿಯ ಗಾಳಿಯೇ ವಿಷಯುಕ್ತ

ವಾಸ್ತವವಾಗಿ, ಅಕ್ಟೋಬರ್ ಆರಂಭದಿಂದ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕುಸಿತಗೊಳ್ಳುತ್ತದೆ. ಇದೇ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೆಹಲಿಯಲ್ಲಿ ವಾಯು ಮಾಲಿನ್ಯದಿಂದಾಗಿ ಜನರು ಮಾಸ್ಕ್ ಧರಿಸಿಯೇ ಹೊರಗೆ ಹೋಗಬೇಕಾಗಿದೆ.

ಇತ್ತೀಚಿನ ವರ್ಷಗಳಲ್ಲಿ ದೆಹಲಿ ಸರ್ಕಾರ ಪಟಾಕಿಗಳ ಬಳಕೆಯನ್ನು ನಿಷೇಧಿಸಿತು ಮತ್ತು ಇತ್ತೀಚಿನ ವರ್ಷಗಳಲ್ಲಿ ಚಳಿಗಾಲದ ತಿಂಗಳುಗಳಲ್ಲಿ ಪಟಾಕಿಗಳ ಬಳಕೆಯನ್ನು ದೆಹಲಿ ಸರ್ಕಾರವು ನಿಷೇಧಿಸಿತು, ಏಕೆಂದರೆ ಅಕ್ಕಪಕ್ಕದ ರಾಜ್ಯಗಳಲ್ಲಿ ರೈತರು ಅತಿಯಾದ ಕ್ರ್ಯಾಕರ್ಸ್ ಮತ್ತು ಸ್ಟಬ್ಬಲ್ ಬರೆಯುವಿಕೆಯಿಂದಾಗಿ. ಆದರೆ, ಇದನ್ನು ಬಿಜೆಪಿ ಟೀಕಿಸಿದೆ. ಕೇಜ್ರಿವಾಲ್ ಸರ್ಕಾರವು ಕ್ರ್ಯಾಕರ್ಸ್ ಮಾರಾಟ ಮಾಡದೆ ಇರುವ ನಷ್ಟಕ್ಕೆ ವ್ಯಾಪಾರಿಗಳಿಗೆ ಪರಿಹಾರ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿತು.

click me!