ಸೆರಂನಿಂದ 10 ಕೋಟಿ ಅಗ್ಗದ ಲಸಿಕೆ!

Published : Aug 08, 2020, 07:30 AM ISTUpdated : Aug 08, 2020, 10:26 AM IST
ಸೆರಂನಿಂದ 10 ಕೋಟಿ ಅಗ್ಗದ ಲಸಿಕೆ!

ಸಾರಾಂಶ

10 ಕೋಟಿ ಕೊರೋನಾ ಲಸಿಕೆ ತಯಾರಿಗೆ ಸೆರಂ ಸಂಸ್ಥೆ ಒಪ್ಪಂದ| ಭಾರತ ಸೇರಿ 92 ಬಡ-ಮಧ್ಯಮ ಆದಾಯದ ದೇಶಗಳಿಗೆ ಪೂರೈಕೆ| ಕೇವಲ 225 ರು.ಗೆ ಸಿಗಲಿದೆ ಒಂದು ಡೋಸ್‌ ಕೊರೋನಾ ಲಸಿಕೆ

ನವದೆಹಲಿ(ಆ.08): ಪುಣೆಯಲ್ಲಿರುವ ಪ್ರಸಿದ್ಧ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕಂಪನಿ ಜಾಗತಿಕ ಮಟ್ಟದಲ್ಲಿ ಸಂಶೋಧಿಸಲ್ಪಡುತ್ತಿರುವ ಎರಡು ಮುಂಚೂಣಿ ಕೊರೋನಾ ಲಸಿಕೆಗಳ 10 ಕೋಟಿ ಡೋಸ್‌ ಉತ್ಪಾದಿಸಲು ಗವಿ ಮತ್ತು ಬಿಲ್‌ ಆ್ಯಂಡ್‌ ಮೆಲಿಂಡಾ ಗೇಟ್ಸ್‌ ಫೌಂಡೇಶನ್‌ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆಸ್ಟ್ರಾಜೆನೆಕಾ ಮತ್ತು ನೋವಾವ್ಯಾಕ್ಸ್‌ ಕಂಪನಿಗಳು ಸಂಶೋಧಿಸುತ್ತಿರುವ ಕೊರೋನಾ ಲಸಿಕೆಗಳು ಯಶಸ್ವಿಯಾದರೆ ಅವು ಸೆರಂ ಕಂಪನಿಯಲ್ಲಿ ಉತ್ಪಾದನೆಯಾಗಿ ಭಾರತವೂ ಸೇರಿದಂತೆ 92 ಬಡ ಹಾಗೂ ಮಧ್ಯಮ ಆದಾಯದ ದೇಶಗಳಿಗೆ ಪೂರೈಕೆಯಾಗಲಿವೆ. ಒಂದು ಡೋಸ್‌ ಲಸಿಕೆಗೆ ಸೆರಂ ಕಂಪನಿ ಗರಿಷ್ಠ 3 ಡಾಲರ್‌ (ಸುಮಾರು 225 ರು.) ದರ ನಿಗದಿಪಡಿಸಿದೆ.

ಕೊರೋನಾಗೆ ಪರಿಣಾಮಕಾರಿಯಾದ ಲಸಿಕೆ ಕಂಡುಹಿಡಿದಿದ್ದೇವೆ; ಸಿಹಿ ಸುದ್ದಿ ನೀಡಿದ ಇಸ್ರೇಲ್!

ಆಸ್ಟ್ರಾಜೆನೆಕಾ ಮತ್ತು ನೋವಾವ್ಯಾಕ್ಸ್‌ ಕಂಪನಿಗಳು ಸಂಶೋಧನೆ ನಡೆಸುತ್ತಿರುವ ಕೋವ್ಯಾಕ್ಸ್‌ ಲಸಿಕೆ ಬಹುತೇಕ ಕೊನೆಯ ಹಂತದಲ್ಲಿದ್ದು, ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದ ಒಪ್ಪಿಗೆ ದೊರೆತ ತಕ್ಷಣ ಸೆರಂನಲ್ಲಿ ಉತ್ಪಾದನೆ ಆರಂಭವಾಗಲಿದೆ. ಬಹುತೇಕ 2021ರ ಮೊದಲರ್ಧದಲ್ಲಿ ಈ ಲಸಿಕೆ ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ.

ಕೊರೋನಾ ಸಾವಿನ ಪ್ರಮಾಣ ಇಳಿಸೋಕೆ ಕೇಜ್ರಿ ಸರ್ಕಾರ ಮಾಡಿದ ಪ್ಲಾನ್ ಇದು..!

ಜಗತ್ತಿನ ಬೇರೆ ಬೇರೆ ದೇಶಗಳನ್ನು ಕಾಡುತ್ತಿರುವ ನಾನಾ ರೋಗಗಳನ್ನು ತಡೆಯಲು ನೀಡಲಾಗುವ ಎಲ್ಲಾ ಲಸಿಕೆಗಳ ಪೈಕಿ ಶೇ.70ರಷ್ಟುಲಸಿಕೆಗಳು ಭಾರತದ ಸೆರಂ ಕಂಪನಿಯಲ್ಲಿ ತಯಾರಾಗುತ್ತವೆ ಎಂದು ಹೇಳಲಾಗಿದೆ. ಈಗ ಕೊರೋನಾಗೂ ಲಸಿಕೆ ತಯಾರಿಸಲು ಸೆರಂ ತುದಿಗಾಲಿನಲ್ಲಿ ನಿಂತಿದ್ದು, ಬೇರೆ ಬೇರೆ ದೇಶಗಳಲ್ಲಿ ಲಸಿಕೆಯ ಸಂಶೋಧನೆ ನಡೆಸುತ್ತಿರುವ ಔಷಧ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live:ಸ್ವತಃ ಏರ್‌ಪೋರ್ಟಿಗೇ ತೆರಳಿ ಪುಟಿನ್‌ಗೆ ಪ್ರಧಾನಿ ಮೋದಿ ಅಚ್ಚರಿಯ ಸ್ವಾಗತ
ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು