ರಿಲೀಫ್ ಕೇಳಿದ್ದ ಕಂಗನಾಗೆ ಆಘಾತ.. ಮತ್ತೆ ಬನ್ನಿ!

Published : Dec 24, 2020, 05:49 PM IST
ರಿಲೀಫ್ ಕೇಳಿದ್ದ ಕಂಗನಾಗೆ ಆಘಾತ.. ಮತ್ತೆ ಬನ್ನಿ!

ಸಾರಾಂಶ

ಕಂಗನಾ ವರ್ಸಸ್ ಮುಂಬೈ ಆಡಳಿತ/ ನೋಟಿಸ್ ಗೆ ರಿಲೀಫ್ ಕೇಳಿ ಕಂಗನಾ ಸಲ್ಲಿಸಿದ್ದ ಅರ್ಜಿ ವಜಾ/ ಅನುಮತಿಯಿಲ್ಲದೆ ಕಟ್ಟಡ ವಿಸ್ತರಿಸಿದ್ದರು ಎಂಬುದು ಆರೋಪ/ ಮುಂದಿನ ಫೆಬ್ರವರಿಗೆ ವಿಚಾರಣೆ  

ಮುಂಬೈ(ಡಿ. 24)ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ) ನೀಡಿರುವ  ನೋಟಿಸ್ ಗೆ ರಿಲೀಫ್ ಕೇಳಿ ನಟಿ ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.

ಅನಧಿಕೃತವಾಗಿ ಕಂಗನಾ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದಡಿ ಬಿಎಂಸಿ ನೋಟಿಸ್ ನೀಡಿತ್ತು.  ಕಂಗನಾ ಕಾರ್ಪೋರೇಶನ್ ಅನುಮತಿ ಪಡೆಯದೆ ಕಟ್ಟಡ ಮುಂದುವರಿಸಿದ್ದರು ಎಂಬುದು ಆರೋಪ.

ಮನಸಿಗೆ ಕಂಡಿದ್ದನ್ನೆಲ್ಲ ಬರೆಯುವ ಕಂಗನಾಗೆ ಮೂಗುದಾರ ಹಾಕಿ

2019 ರ ಜನವರಿಯಲ್ಲಿ ಕಂಗನಾ ಇದೇ ವಿಚಾರಕ್ಕೆ  ಸಿವಿಲ್ ನ್ಯಾಯಾಲಯದ ಮುಂದೆ ಹೋಗಿದ್ದರು. ಕಟ್ಟಡ ತೆರವು ಮಾಡದಂತೆ ಕೇಳಿಕೊಂಡಿದ್ದರು.
 
ಇದೆಲ್ಲವನ್ನು ಗಮನಿಸಿದ ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳಲು ತಿಳಿಸಿದ್ದು ಮುಂದಿನ ವಿಚಾರಣೆಯನ್ನು  2021 ರ ಫೆಬ್ರವರಿಗೆ ನಿಗದಿ ಮಾಡಿದೆ. ಹೈಕೋರ್ಟ್‌ ಗೆ ತೆರಳುವುದಾದರೆ ಆರು ವಾರಗಳ ಕಾಲಾವಕಾಶ  ನೀಡಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!