'ನೀವು ಹೀಗೆ ಮಾಡಿದ್ರೆ ಕೇಂದ್ರಕ್ಕೆ ಅಧಿಕಾರ ಕೊಡ್ಬೇಕಾಗುತ್ತೆ'

Published : Apr 27, 2021, 08:20 PM ISTUpdated : Apr 27, 2021, 08:21 PM IST
'ನೀವು ಹೀಗೆ ಮಾಡಿದ್ರೆ ಕೇಂದ್ರಕ್ಕೆ ಅಧಿಕಾರ ಕೊಡ್ಬೇಕಾಗುತ್ತೆ'

ಸಾರಾಂಶ

ದೆಹಲಿ ಸರ್ಕಾರಕ್ಕೆ ಹೈ ಕೋರ್ಟ್ ಚಾಟಿ/ ಕಾಳಸಂತೆಯಲ್ಲಿ ಆಕ್ಸಿಜನ್ ಮಾರಾಟ/ ಪರಿಸ್ಥಿತಿ ನಿಭಾಯಿಸಲು ವಿಫಲವಾದರೆ ಕೇಂದ್ರಕ್ಕೆ ಅಧಿಕಾರವಹಿಸಿಕೊಡಬೇಕಾಗುತ್ತದೆ/ ನಿಮ್ಮ ಮೇಲೆ ಇಟ್ಟಿದ್ದ ವಿಶ್ವಾಸವನ್ನೇ ಕಳೆದುಕೊಂಡಿದ್ದೀರಿ

ನವದೆಹಲಿ(ಏ. 27) ಕೊರೋನಾ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡದ ದೆಹಲಿ ಸರ್ಕಾರದ ಮೇಲೆ  ನ್ಯಾಯಾಲಯ ಚಾಟಿ ಬೀಸಿದೆ.  ನಿಮ್ಮ ಮೇಲೆ ಇಟ್ಟ ವಿಶ್ವಾಸವೇ ಅಲುಗಾಡಿಹೋಗಿದೆ ಎಂದಿದೆ.

ನಿಮ್ಮ ಬಳಿ ಈ ಪರಿಸ್ಥಿತಿ ನಿಭಾಯಿಸಲು ಅಸಾಧ್ಯ ಎಂದರೆ ಹೇಳಿ ಕೇಂದ್ರ ಸರ್ಕಾರಕ್ಕೆ ಅಧಿಕಾರವಹಿಸಿಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.  ಕಚೇರಿಯಲ್ಲಿ ಕುಳಿತು ಸೂಚನೆ ಹೊರಡಿಸುತ್ತಿದ್ದರೆ ಕೊರೋನಾ ಪರಿಸ್ಥಿತಿ ಸುಧಾರಣೆ ಆಗಲ್ಲ ಎಂದು ತಿಳಿಸಿದೆ.

ಕರ್ನಾಟಕ ಸರ್ಕಾರ ಲೆಕ್ಕ ಮುಚ್ಚಿಡುತ್ತಿದೆಯಾ?

ಆಕ್ಸಿಜನ್ ಮತ್ತು ತುರ್ತು ವಸ್ತುಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಜನರ ಹಿತಾಸಕ್ತಿಯನ್ನು ಕೇಳುವವರು ಯಾರು ಇಲ್ಲವಾಗಿದೆ. ಈ ಬಗ್ಗೆ ಏನು ಹೇಳುತ್ತೀರಿ ಎಂದು ಸರ್ಕಾರಕ್ಕೆ ಪ್ರಶ್ನೆ  ಮಾಡಿದೆ.

ಒಂದು ಕಡೆ ಆಮ್ಲಜನಕ ಲಭ್ಯತೆ ಇಲ್ಲ ಎಂದು ಹೇಳುತ್ತೀರಿ. ಇನ್ನೊಂದು ಕಡೆ ಕಾಳಸಂತೆಯಲ್ಲಿ ಮಾರಾಟ ಮಾಡುವ ವರದಿಗಳು ಬರುತ್ತಿವೆ. ಹಾಗಾದರೆ ಸರ್ಕಾರ  ಇಂಥವರ ವಿರುದ್ಧ ಯಾವ ಕ್ರಮ  ತೆಗೆದುಕೊಂಡಿದೆ ಎಂದು  ಪ್ರಶ್ನೆ ಮಾಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್