4 ಸಚಿವರಿಗೆ ವಕ್ಕರಿಸಿದ ಕೊರೋನಾ ಮಹಾಮಾರಿ

Kannadaprabha News   | Asianet News
Published : Feb 20, 2021, 09:30 AM IST
4 ಸಚಿವರಿಗೆ ವಕ್ಕರಿಸಿದ ಕೊರೋನಾ ಮಹಾಮಾರಿ

ಸಾರಾಂಶ

ಮತ್ತೊಮ್ಮೆ ತನ್ನ ಅಟ್ಟಹಾಸ ಶುರು ಮಾಡಿರುವ ಕೊರೋನಾ ಮಹಾಮಾರಿ ಹೆಚ್ಚಾಗುತ್ತಲೇ ಇದೆ. ಇದೀಗ ನಾಲ್ವರು ಸಚಿವರಿಗೆ ವಕ್ಕರಿಸಿದೆ. 

ಮುಂಬೈ (ಫೆ.20): ಕೊರೋನಾ ವೈರಸ್‌ನ 2ನೇ ಅಲೆಯ ಆತಂಕಕ್ಕೆ ಕಾರಣವಾಗಿರುವ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರ ಮಂತ್ರಿಮಂಡಲದ ಅನೇಕ ಸಚಿವರಿಗೆ ಹಾಗೂ ರಾಜಕೀಯ ಮುಖಂಡರಿಗೆ ಏಕಕಾಲದಲ್ಲಿ ಸೋಂಕು ತಗುಲಿದೆ.

ಸಚಿವರಾದ ಓಂಪ್ರಕಾಶ್‌ ಕಡು, ರಾಜೇಶ್‌ ಟೋಪೆ, ಜಯಂತ ಪಾಟೀಲ್‌, ರಾಜೇಂದ್ರ ಶಿಂಗಣೆ ಅವರಿಗೆ ಕಳೆದ 2-3 ದಿನಗಳಲ್ಲಿ ಕೊರೋನಾ ಬಂದಿದೆ. ಇತ್ತೀಚೆಗೆ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರಿಗೂ ಸೋಂಕು ತಗುಲಿದೆ.

ಇನ್ನು ಎನ್‌ಸಿಪಿ ನಾಯಕ, ಏಕನಾಥ ಖಾಡ್ಸೆ, ಅವರ ಸೊಸೆ ಹಾಗೂ ಬಿಜೆಪಿ ಸಂಸದೆ ರಕ್ಷಾ ಖಾಡ್ಸೆ ಅವರೂ ತಮಗೆ ಕೊರೋನಾ ಸೋಂಕು ತಗುಲಿರುವುದನ್ನು ದೃಢಪಡಿಸಿದ್ದಾರೆ.

ಮತ್ತಷ್ಟು‘ಕೊರೋನಾ ನಿರ್ಬಂಧ’ : ಯಾವ್ಯಾವುದಕ್ಕೆ ನಿಯಂತ್ರಣ .

ಮಹಾರಾಷ್ಟ್ರದಲ್ಲಿ ಮತ್ತೊಂದು ಪ್ರಭೇದದ ವೈರಸ್ ಪತ್ತೆಯಾಗಿದ್ದು, ದಿನದಿನವೂ ಹೆಚ್ಚಾಗುತ್ತಲೇ ಇದೆ. ಇದರಿಂದ ಅನೇಕ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ನೀತಿ ನಿಯಮಗಳನ್ನು ಸರ್ಕಾರ ಸಿದ್ಧಮಾಡಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್