
ಕೋಲ್ಕತಾ: ದೇಶವ್ಯಾಪಿ ನಡೆಯುತ್ತಿರುವ ಮತಾಂತರ ಪ್ರಕ್ರಿಯೆ ಸ್ಥಗಿತಗೊಳಿಸದೇ ಹೋದರೆ, ಶೀಘ್ರವೇ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗಲಿದ್ದಾರೆ ಎಂಬ ಅಲಹಾಬಾದ್ ಹೈಕೋರ್ಟ್ನ ಇತ್ತೀಚಿನ ಎಚ್ಚರಿಕೆ ಬೆನ್ನಲ್ಲೇ, ಕೋಲ್ಕತಾ ಮಹಾನಗರ ಪಾಲಿಕೆ ಮೇಯರ್ ಫಿರ್ಹಾದ್ ಹಕೀಂ, ಅನ್ಯಧರ್ಮೀಯರನ್ನೆಲ್ಲಾ ಇಸ್ಲಾಂಗೆ ಮತಾಂತರ ಮಾಡಿ ಎಂದು ಬಹಿರಂಗವಾಗಿಯೇ ಕರೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪ್ತ ಮತ್ತು ಟಿಎಂಸಿ ನಾಯಕನೂ ಆಗಿರುವ ಹಕೀಂ ಇಲ್ಲಿ ಆಯೋಜಿಸಿದ್ದ ‘ಅಖಿಲ ಭಾರತ ಕುರಾನ್ ಸ್ಪರ್ಧೆ’ ವೇಳೆ ಮಾತನಾಡಿ ‘ಇಸ್ಲಾಂ ಧರ್ಮದಲ್ಲಿ ಜನಿಸದವರು ಅದೃಷ್ಟಹೀನರು. ಅವರನ್ನು ನಾವು ಇಸ್ಲಾಂಗೆ ಕರೆತರಬೇಕು’ ಎಂದು ಮತಾಂತರಕ್ಕೆ ಕರೆ ನೀಡಿದ್ದಾರೆ.
ಸೂರ್ಯ ನಮಸ್ಕಾರ, ಸರಸ್ವತಿ ಪೂಜೆ ಅನ್ಯಧರ್ಮಿಯರ ಮೇಲೆ ಹೇರುವುದು ಸಂವಿಧಾನ ವಿರೋಧಿ: ಜಮೀಯತ್
ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟಿಎಂಸಿಯ ತುಷ್ಟೀಕರಣ ರಾಜಕೀಯವನ್ನು ಟೀಕಿಸಿದ್ದಾರೆ. ‘ಟಿಎಂಸಿ ತುಷ್ಟೀಕರಣ ರಾಜಕೀಯವನ್ನು ಅನುಸರಿಸುತ್ತಿದೆ ಎಂಬುದು ಜಗಜ್ಜಾಹಿರ. ಸತತ ಚುನಾವಣಾ ಜಯಗಳು ಪಕ್ಷವನ್ನು ಹಿಂದೆಂದಿಗಿಂತಲೂ ಹೆಚ್ಚು ಧೈರ್ಯಶಾಲಿ ಮತ್ತು ಅಹಂಕಾರಿಯನ್ನಾಗಿ ಮಾಡುತ್ತಿದೆ. ಷರಿಯಾ ಕಾನೂನಿನಂತೆ ಮಹಿಳೆಯೊಬ್ಬಳ ಥಳಿತಕ್ಕೆ ಹಮಿದುರ್ ರಹಮಾನ್ ನೀಡಿದ ಸಮರ್ಥನೆ ಟಿಎಂಸಿಯ ಕಾರ್ಯಸೂಚಿಯನ್ನು ತೋರಿಸುತ್ತಿವೆ. ಹೀಗೇ ಮುಂದುವರಿದರೆ ದೀದಿಯ ಸ್ಫೂರ್ತಿಯಿಂದ ಬಂಗಾಳ ಮುಸ್ಲಿಂ ರಾಜ್ಯವಾಗುವ ದಿನ ದೂರವಿಲ್ಲ’ ಎಂದು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಮರು ತಮ್ಮ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರಿಡಬೇಡಿ ಎಂದ ಬಿಜೆಪಿ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ