ವಲಸೆ ಕಾರ್ಮಿಕರ ಕಷ್ಟ ಕಂಡ ರಾಹುಲ್ ಡಾಕ್ಯುಮೆಂಟರಿ

Published : May 23, 2020, 02:57 PM ISTUpdated : May 23, 2020, 03:15 PM IST
ವಲಸೆ ಕಾರ್ಮಿಕರ ಕಷ್ಟ ಕಂಡ ರಾಹುಲ್ ಡಾಕ್ಯುಮೆಂಟರಿ

ಸಾರಾಂಶ

ವಲಸೆ ಕಾರ್ಮಿಕರ ವಿಚಾರದಲ್ಲಿ ರಾಹುಲ್ ಗಾಂಧಿ ಡಾಕ್ಯುಮೆಂಟರಿ/ ವಲಸೆ ಕಾರ್ಮಿಕರ ಸಂಕಷ್ಟದ ಚಿತ್ರಣ/ ಕೂಡಲೇ ಕುಟುಂಬವೊಂದಕ್ಕೆ 7500 ರು. ನೀಡಿ

ನವದೆಹಲಿ(ಮೇ 23)  ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರ ವಿಚಾರದಲ್ಲಿ ಕಾಂಗ್ರೆಸ್ ನಡೆ ಸದಾ ಚರ್ಚೆಯಲ್ಲೆ ಇದೆ. ವಲಸೆ ಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ರಸ್ತೆಯಲ್ಲಿ ಕುಳಿತು ಸಂವಾದ ಮಾಡಿದ್ದು ಟೀಕೆಗೆ ಗುರಿಯಾಗಿತ್ತು. 

ವಲಸೆ ಕಾರ್ಮಿಕರು ಕಷ್ಟಪಟ್ಟು ಊರಿಗೆ ತೆರಳುತ್ತಿರುವ ದೃಶ್ಯಗಳೂ ತುಂಬಿವೆ. ಅವರ ಕಷ್ಟಗಳನ್ನು ಒಂದೊಂದಾಗಿ ಹೇಳಲಾಗಿದೆ. ರೈಲಿನ ಅಡಿ ಸಿಕ್ಕಿ ಸಾವನ್ನಪ್ಪಿದ್ದನ್ನು ಚಿತ್ರಿಸಲಾಗಿದೆ.

ನವದೆಹಲಿಯ ಸುಖದೇವ್ ವಿಹಾರದ ಬಳಿ ರಾಹುಲ್ ಗಾಂಧಿ ವಲಸೆ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದರು. ಇದನ್ನು ಬಿಜೆಪಿ ದೊಡ್ಡ ನಾಟಕ ಎಂದು ಟೀಕೆ ಮಾಡಿತ್ತು.  ನೂರಾರು ಕಿಲೋಮೀಟರ್ ನಡೆಯುವ ಅನಿವಾರ್ಯ, ಆಹಾರ  ಇಲ್ಲದೇ ಪರಿತಪಿಸುವ ಪರಿಸ್ಥಿತಿ, ಪೊಲೀಸರಿಂದ ಆಗುತ್ತಿರುವ ದೌರ್ಜನ್ಯ  ಎಲ್ಲವನ್ನು ಚಿತ್ರಿಸಲಾಗಿದೆ. 

ಪ್ರಿಯಾಂಕಾ ವಾದ್ರಾ ಬಸ್ ಪ್ರಹಸನ, ತೆರೆ ಬೀಳುವ ಲಕ್ಷಣ ಇಲ್ಲ

ವಲಸೆ ಕಾರ್ಮಿಕರ ನೆರವಿಗೆ ಕಾಂಗ್ರೆಸ್ ಒಂದು ಸಾವಿರ ಬಸ್ ಬಿಡುತ್ತದೆ. ಇದಕ್ಕೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಬೇಕು ಎಂದು ಪ್ರಿಯಾಂಕಾ ವಾದ್ರಾ ಕೇಳಿಕೊಂಡಿದ್ದರು. ಈ ಬಸ್‌ ಗಳಲ್ಲಿ ಅರ್ಧಕ್ಕೆ ಅರ್ಧ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲ, ಇನ್ನರ್ಧ ತ್ರಿಚಕ್ರ ವಾಹನಗಳು ಸೇರಿವೆ ಎಂಬ ವಿಚಾರ ಸಹ ವಿವಾದಕ್ಕೆ ಕಾರಣವಾಗಿತ್ತು. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!