
ನವದೆಹಲಿ: ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಸೋಮವಾರ ಸಂಸತ್ ಭವನಕ್ಕೆ ನಾಯಿಯೊಂದನ್ನು ತಂದ ಪ್ರಸಂಗ ನಡೆದಿದೆ. ಅಲ್ಲದೆ, ಇದಕ್ಕೆ ಸ್ಪಷ್ಟನೆ ನೀಡುವ ಭರದಲ್ಲಿ, ‘ಕಚ್ಚುವ ಜನರು ಸಂಸತ್ತಿನ ಒಳಗಿದ್ದಾರೆ. ನಾನು ನಾಯಿ ತಂದಿದ್ದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಬಿಜೆಪಿ ಕಿಡಿಕಾರಿದ್ದು, ‘ರೇಣುಕಾ ಸಂಸತ್ತಿನ ಪಾವಿತ್ರ್ಯತೆಗೆ ಭಂಗ ತಂದಿದ್ದಾರೆ’ ಎಂದಿದೆ.
ಬೆಳಗ್ಗೆ ಸಂಸತ್ ಕಲಾಪಕ್ಕೆ ಕಾರಿನಲ್ಲಿ ನಾಯಿಯೊಂದಿಗೆ ಸಂಸತ್ ಭವನ ಪ್ರವೇಶಿಸಿ ಅಚ್ಚರಿ ಮೂಡಿಸಿದರು. ಬಳಿಕ ಅದನ್ನು ಅದೇ ಕಾರಲ್ಲಿ ಮನೆಗೆ ವಾಪಸ್ ಕಳಿಸಿದರು. ಇದಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಅದು ಬೀದಿ ನಾಯಿ.
ಈಗ ನಾನು ಸಂಸತ್ತಿಗೆ ಬರುವಾಗ ರಸ್ತೆಯಲ್ಲಿತ್ತು. ವೇಗವಾಗಿ ಚಲಿಸುವ ಕಾರುಗಳಿಗೆ ಸಿಲುಕುವ ಅಪಾಯದಲ್ಲಿತ್ತು. ಹೀಗಾಗಿ ಅದನ್ನು ರಕ್ಷಿಸಿ ಕಾರಲ್ಲಿ ಹಾಕಿಕೊಂಡು ಬಂದೆ. ಈಗ ಮನೆಗೆ ವಾಪಸು ಕಳಿಸಿದ್ದೇನೆ. ಸಂಸತ್ತಿನ ಒಳಗೆ ಕಚ್ಚುವ ವ್ಯಕ್ತಿಗಳಿದ್ದಾರೆ. ಇಂಥದ್ದರಲ್ಲಿ ನಾಯಿ ತಂದಿದ್ದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ