
ನವದೆಹಲಿ(ಜ.04): ಕೊರೋನಾ ಲಸಿಕೆಗೆ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದ ಬಗ್ಗೆ ಒಂದೆಡೆ ಸಂತಸ ವ್ಯಕ್ತವಾಗಿದ್ದರೆ, ಕಾಂಗ್ರೆಸ್ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ. ‘ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗವೇ ಇನ್ನೂ ಮುಗಿದಿಲ್ಲ. ಆಗಲೇ ಇದನ್ನು ತುರ್ತು ಬಳಕೆಗೆ ಯಾವ ಮಾನದಂಡ ಅನುಸರಿಸಿ ಅನುಮತಿ ನೀಡಲಾಗಿದೆ ಎಂಬ ದತ್ತಾಂಶಗಳನ್ನು ಹಾಗೂ ಮಾಹಿತಿಯನ್ನು ಬಹಿರಂಗಪಡಿಸಬೇಕು’ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಆನಂದ ಶರ್ಮಾ ಆಗ್ರಹಿಸಿದ್ದಾರೆ.
ಒದೇ ವೇಳೆ, ‘ಬ್ರಿಟನ್ನ ಕೋವಿಶೀಲ್ಡ್ ಲಸಿಕೆ ಪ್ರಯೋಗದ ಅಂತಿಮ ದತ್ತಾಂಶವನ್ನು ಏಕೆ ಬಹಿರಂಗಪಡಿಸಿಲ್ಲ? ಜನರಲ್ಲಿನ ಗೊಂದಲ ನಿವಾರಿಸಲು ಭಾರತ ಹಾಗೂ ಬ್ರಿಟನ್ ಎಲ್ಲ ವಿವರಗಳನ್ನು ಜನರ ಎದುರು ತೆರೆದಿಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಜೈರಾಂ ರಮೇಶ್ ಹಾಗೂ ಶಶಿ ತರೂರ್ ಕೂಡ ಇದೇ ಅನುಸಿಕೆ ವ್ಯಕ್ತಪಡಿಸಿ, ‘ಕೋವ್ಯಾಕ್ಸಿನ್ಗಾಗಿ ಅಂತಾರಾಷ್ಟ್ರೀಯ ಮಾನದಂಡವನ್ನೇಕೆ ಬದಲಿಸಲಾಗಿದೆ? 3ನೇ ಹಂತದ ಪ್ರಯೋಗ ಮುಗಿವ ಮುನ್ನವೇ ಅನುಮತಿ ಏಕೆ? ಈ ಬಗ್ಗೆ ಆರೋಗ್ಯ ಸಚಿವ ಡಾ
ಹರ್ಷವರ್ಧನ್ ಉತ್ತರಿಸಬೇಕು. ಕೋವ್ಯಾಕ್ಸಿನ್ ಪ್ರಯೋಗ ಮುಗಿವ ಮುನ್ನ ಆಸ್ಟ್ರಾಜೆನೆಕಾ ಮಾತ್ರ ಬಳಸಬೇಕು’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ