ಕುಟುಂಬಕ್ಕೆ 2 ಮಕ್ಕಳ ನೀತಿ ಜಾರಿಗೆ ಮಸೂದೆ ಮಂಡನೆ!

Published : Mar 15, 2020, 08:41 AM IST
ಕುಟುಂಬಕ್ಕೆ 2 ಮಕ್ಕಳ ನೀತಿ ಜಾರಿಗೆ ಮಸೂದೆ ಮಂಡನೆ!

ಸಾರಾಂಶ

ಕುಟುಂಬಕ್ಕೆ ಎರಡನೇ ಮಕ್ಕಳು ನೀತಿ ಜಾರಿಗೆ ರಾಜ್ಯ​ಸ​ಭೆ​ಯಲ್ಲಿ ಕಾಂಗ್ರೆಸ್‌ ಮಸೂದೆ ಮಂಡನೆ!| ಅಭಿಷೇಕ್‌ ಮನು ಸಿಂಘ್ವಿ ಮಸೂದೆ ಮಂಡನೆ| ಖಾಸಗಿ ಮಸೂದೆ ಮಂಡಿಸಿರುವ ಕಾಂಗ್ರೆಸ್ಸಿ ಗ

ನವ​ದೆ​ಹ​ಲಿ[ಮಾ.15]: ಹೆಚ್ಚು​ತ್ತಿ​ರುವ ಜನ​ಸಂಖ್ಯೆ ದೇಶದ ನಿಯ​ಮಿತ ನೈಸ​ರ್ಗಿಕ ಸಂಪ​ನ್ಮೂ​ಲದ ಮೇಲಿನ ಒತ್ತ​ಡ​ವನ್ನು ಹೆಚ್ಚಿ​ಸುತ್ತಿ​ದೆ ಎಂದು ಪ್ರತಿಪಾದಿ​ಸಿ​ರುವ ಕಾಂಗ್ರೆಸ್‌ ಮುಖಂಡ ಅಭಿ​ಷೇಕ್‌ ಮನು ಸಿಂಘ್ವಿ, ದೇಶ​ದಲ್ಲಿ ಎರಡು ಮಕ್ಕಳ ನೀತಿ​ಯನ್ನು ಜಾರಿಗೆ ತರ​ಬೇಕು ಎಂದು ರಾಜ್ಯ​ಸ​ಭೆ​ಯಲ್ಲಿ ಖಾಸಗಿ ಮಸೂ​ದೆ​ಯೊಂದನ್ನು ಮಂಡಿ​ಸಿ​ದ್ದಾ​ರೆ.

ಜನ​ಸಂಖ್ಯೆ ನಿಯಂತ್ರಣ ಮಸೂ​ದೆ-2020ಗೆ ಹಣ​ಕಾಸಿನ ಬಾಧ್ಯತೆ ಇರುವ ಕಾರ​ಣ ಅದನ್ನು ರಾಜ್ಯ​ಸ​ಭೆ​ಯಲ್ಲಿ ಮಂಡಿ​ಸಲು ರಾಷ್ಟ್ರ​ಪ​ತಿ​ಗಳ ಅನು​ಮೋ​ದನೆ ಪಡೆ​ಯುವ ಅಗ​ತ್ಯ​ವಿ​ದೆ. ಈ ಮಸೂ​ದೆಗೆ ರಾಷ್ಟ್ರ​ಪತಿ ರಾಮ​ನಾಥ್‌ ಕೋವಿಂದ್‌ ಅವರು ಅನು​ಮತಿ ನೀಡಿ​ದ್ದಾರೆ ಎಂದು ಸಿಂಘ್ವಿ ತಿಳಿ​ಸಿ​ದ್ದಾ​ರೆ.

ಎರಡು ಮಕ್ಕಳ ನೀತಿ​ಯನ್ನು ಪಾಲಿ​ಸದೇ ಇರು​ವ​ವರಿಗೆ ಚುನಾ​ವ​ಣೆ​ಯಲ್ಲಿ ಸ್ಪರ್ಧಿ​ಸುವು​ದಕ್ಕೆ ನಿಷೇಧ ಹೇರುವುದು, ಸರ್ಕಾರಿ ಸೇವೆ​ಗ​ಳಲ್ಲಿ ಬಡ್ತಿ ಹಾಗೂ ಸಬ್ಸಿಡಿ ನಿರಾ​ಕ​ರಿಸುವ ಪ್ರಸ್ತಾವ ಇದೆ. ಅಲ್ಲದೆ ಒಂದು ಮಕ್ಕಳು ಹೊಂದಿದವರಿಗೆ ವಿಶೇಷ ಸವಲತ್ತು ಕೊಡಬೇಕು ಎಂಬ ಪ್ರಸ್ತಾಪವೂ ಇದೆ.

ಖಾಸಗಿ ಮಸೂದೆಗಳು ಅಂಗೀಕಾರ ಪಡೆದುಕೊಳ್ಳುವುದು ಕಡಿಮೆ. ಆದರೆ ಕೇಂದ್ರ ಸರ್ಕಾರದ ಚಿಂತನೆಯಲ್ಲಿ ಇದೆ ಎಂದು ಹೇಳಲಾದ ಇಂಥದ್ದೊಂದು ಮಸೂದೆಯನ್ನು ಸ್ವತಃ ವಿಪಕ್ಷ ನಾಯಕರೇ ಮಂಡಿಸಿರುವಾಗ ಆಡಳಿತಾರೂಢ ಬಿಜೆಪಿ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಕುತೂಹಲ ಇದೆ. ಒಂದು ವೇಳೆ ಕೇಂದ್ರದಲ್ಲಿನ ಆಡಳಿತಾರೂಢ ಎನ್‌ಡಿಎ ಒಕ್ಕೂಟಕ್ಕೆ ಬಹುಮತ ಇಲ್ಲದ ರಾಜ್ಯಸಭೆಯಲ್ಲಿ ಈ ಮಸೂದೆ ಏನಾದರೂ, ಪಾಸಾದರೆ, ಎನ್‌ಡಿಎಗೆ ಬಹುಮತ ಇರುವ ಲೋಕಸಭೆಯಲ್ಲಿ ಅದು ಯಾವುದೇ ಅಡ್ಡಿ ಇಲ್ಲದೆಯೇ ಅಂಗೀಕಾರವಾಗುವ ಸಾಧ್ಯತೆ ನಿಚ್ಚಳವಾಗಿದೆ. ಹೀಗಾಗಿಯೇ ಮಸೂದೆ ತೀವ್ರ ಕುತೂಹಲ ಕೆರಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಐಪಿಎಸ್ ಅಧಿಕಾರಿಗೆ ಅಸಭ್ಯ ಕಾಮೆಂಟ್, ಬಾಡಿ ಶೇಮಿಂಗ್: ಕಾಮೆಂಟ್ ಬಾಕ್ಸ್ ಬಂದ್ ಮಾಡಿದ ಪೊಲೀಸರ ಕ್ರಮಕ್ಕೆ ಭಾರಿ ಆಕ್ರೋಶ!
ರಸ್ತೆ ಬದಿ ರೀಲ್ಸ್ ತರುಣನ ಕತೆ ಫಿನಿಶ್: ಎಕ್ಸ್‌ಪ್ರೆಸ್‌ ವೇಯಲ್ಲಿ ದುರಂತ: ಕ್ಯಾಮರಾದಲ್ಲಿ ಕೊನೆಕ್ಷಣ ಸೆರೆ