ದಾಳಿಯ ಬೆನ್ನಲ್ಲೇ ಕಾರ್ತಿ ಚಿದಂಬರಂ ಆಪ್ತ ಸ್ನೇಹಿತನನ್ನು ಬಂಧಿಸಿದ ಸಿಬಿಐ!

By Santosh NaikFirst Published May 18, 2022, 10:22 AM IST
Highlights

ಮಂಗಳವಾರ ನಡೆದ ದಾಳಿಯ ಬೆನ್ನಲ್ಲಿಯೇ ಸಿಬಿಐ, ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರ ಆಪ್ತ ಸಹಾಯಕ ಭಾಸ್ಕರ್ ರಾಮನ್ ಅವರನ್ನು ಬಂಧಿಸಿದೆ.

ಚೆನ್ನೈ (ಮೇ. 18): ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ (Congress MP Karti Chidambaram ) ಅವರ ಆಪ್ತರೊಬ್ಬರನ್ನು ಸಿಬಿಐ ( CBI ) ಬಂಧಿಸಿದೆ. ಮಂಗಳವಾರ  ನಡೆದ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಮಾಹಿತಿಯ ಪ್ರಕಾರ ಕಾರ್ತಿ ಚಿದಂಬರಂ ಅವರ ಆಪ್ತ ಸಹಾಯಕ ಭಾಸ್ಕರ್ ರಾಮನ್ (Bhaskar Raman) ಅವರನ್ನು ಸಿಬಿಐ ಬಂಧಿಸಿದೆ. ಲಂಚ ಮತ್ತು ಭ್ರಷ್ಟಾಚಾರದ ಆರೋಪ ಅವರ ಮೇಲಿದೆ.

ಕಾರ್ತಿ ಚಿದಂಬರಂ ಅವರಿಗೆ ಸೇರಿದ 9 ಸ್ಥಳಗಳ ಮೇಲೆ ಸಿಬಿಐ ಮಂಗಳವಾರ ದಾಳಿ ಮಾಡಿತ್ತು. ಚೀನಾಕ್ಕೆ (China) ಸಂಬಂಧಿಸಿದ ವಿಚಾರದಲ್ಲಿ ಈ ಕ್ರಮ ನಡೆದಿದೆ. ಈ ವೇಳೆ ಭಾಸ್ಕರ್ ರಾಮನ್ ಎಂಬಾತನನ್ನೂ ಬಂಧಿಸಲಾಗಿದೆ.

ಚೀನಾಕ್ಕೆ ಸಂಬಂಧಿಸಿದ ಪ್ರಕರಣವೇನು?: ಲೋಕಸಭೆ ಸಂಸದ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಮಂಗಳವಾರ ಹೊಸ ಪ್ರಕರಣ ದಾಖಲಿಸಿದೆ.  ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ( Former Finance Minister P Chidambaram) ಅವರ ಪುತ್ರ ಕಾರ್ತಿ ಅವರು 250 ಚೀನಿ ಪ್ರಜೆಗಳಿಗೆ ಭಾರತೀಯ ವೀಸಾಗಳನ್ನು (Indian Visa) ದೊರೆಯಲು ಸಹಾಯ ಮಾಡಿದ್ದರು ಎಂದು ಆರೋಪಿಸಲಾಗಿದ್ದು, ಇದಕ್ಕೆ ಪ್ರತಿಯಾಗಿ ಅವರು 50 ಲಕ್ಷ ಲಂಚ ಪಡೆದಿದ್ದಾರೆ ಎನ್ನಲಾಗಿತ್ತು.

ಮಂಗಳವಾರ ಸಿಬಿಐ ತಂಡ ಕಾರ್ತಿ ಚಿದಂಬರಂ ಅವರ ಮನೆ, ಕಚೇರಿ ಸೇರಿದಂತೆ 9 ಕಡೆ ದಾಳಿ ನಡೆಸಿತ್ತು. ಈ ದಾಳಿಗಳನ್ನು ಚೆನ್ನೈ, ದೆಹಲಿ ಇತ್ಯಾದಿ ಸ್ಥಳಗಳಲ್ಲಿ ನಡೆಸಲಾಗಿತ್ತು. ಮುಂಬೈನ ಮೂರು ಸ್ಥಳಗಳಲ್ಲಿ, ಕರ್ನಾಟಕದ ಒಂದು ಮತ್ತು ಪಂಜಾಬ್ ಮತ್ತು ಒಡಿಶಾದಲ್ಲಿ ತಲಾ ಒಂದರಲ್ಲಿ ಸಿಬಿಐ ದಾಳಿಗಳನ್ನು ನಡೆಸಲಾಯಿತು.

ಸಿಬಿಐ ದಾಖಲಿಸಿರುವ ಹೊಸ ಪ್ರಕರಣದಲ್ಲಿ ಈಗಾಗಲೇ, ತನಿಖೆ ಕೂಡ ನಡೆಯುತ್ತಿತ್ತು. ಯುಪಿಎ ಆಡಳಿತಾವಧಿಯಲ್ಲಿ ಕಾರ್ತಿ ಚಿದಂಬರಂ ಅವರು 250 ಚೀನಿ ಪ್ರಜೆಗಳಿಗೆ ವೀಸಾ ಪಡೆಯಲು ಸಹಾಯ ಮಾಡಿದ್ದರು, ಇದಕ್ಕೆ ಪ್ರತಿಯಾಗಿ ಅವರು 50 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಸಿಬಿಐ ಪ್ರಕಾರ, ಈ ಚೀನಾದ ನಾಗರಿಕರು ಭಾರತಕ್ಕೆ ಬಂದು ಯಾವುದಾದರೂ ವಿದ್ಯುತ್ ಯೋಜನೆಗಾಗಿ ಕೆಲಸ ಮಾಡಲು ಬಯಸಿದ್ದರು. ಇದು 2010ರಿಂದ 2014ರ ಅವಧಿಯಲ್ಲಿ ನಡೆದಿದೆ ಎನ್ನಲಾಗಿದ್ದು, ಪ್ರಾಥಮಿಕ ತನಿಖೆ ಬಳಿಕ ಸಿಬಿಐ ಈ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಿತ್ತು.

ಹೆಚ್ಚುವರಿ ಚೀನೀ ಉದ್ಯೋಗಿಗಳಿಗೆ ಅಕ್ರಮವಾಗಿ ವೀಸಾ ಪಡೆಯಲು ಸಹಾಯ ಮಾಡಿದ ಆರೋಪ ಕಾರ್ತಿ ಚಿದಂಬರಂ ಮೇಲಿದೆ. ಈ ಜನರು ಪಂಜಾಬ್‌ನ ಮಾನ್ಸಾದಲ್ಲಿರುವ ಉಷ್ಣ ವಿದ್ಯುತ್ ಸ್ಥಾವರದಲ್ಲಿ (ತಲ್ವಾಂಡಿ ಸಾಬೋ ಪವರ್ ಪ್ಲಾಂಟ್) ಕೆಲಸ ಮಾಡಲು ಬಂದಿದ್ದರು. ಚೀನಾದ ಶಾಂಡೋಂಗ್ ಎಲೆಕ್ಟ್ರಿಕ್ ಪವರ್ ಕನ್ಸ್ಟ್ರಕ್ಷನ್ ಕಾರ್ಪ್ (SEPCO) ಅದರ ಕೆಲಸವನ್ನು ನೋಡಿಕೊಳ್ಳುತ್ತಿತ್ತು.

ಮಾಹಿತಿಯ ಪ್ರಕಾರ, ಯೋಜನೆಯು ನಿಗದಿತ ಅವಧಿಯ ಹಿಂದೆ ಚಾಲನೆಯಲ್ಲಿದೆ. ಕ್ರಮವನ್ನು ತಪ್ಪಿಸಲು, ತಲ್ವಾಂಡಿ ಸಾಬೋ ಪವರ್ ಲಿಮಿಟೆಡ್ ಹೆಚ್ಚುವರಿ ಚೀನೀ ಕಾರ್ಮಿಕರನ್ನು ಕರೆತರಲು ಬಯಸಿತು. ಆದರೆ ವೀಸಾ ಸೀಲಿಂಗ್‌ನಿಂದಾಗಿ ಈ ಉದ್ಯೋಗಿಗಳು ಬರಲು ಸಾಧ್ಯವಾಗಿರಲಿಲ್ಲ.

ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಕಾರ್ತಿ ಚಿದಂಬರಂ ನಿವಾಸ,ಕಚೇರಿ ಮೇಲೆ ಸಿಬಿಐ ದಾಳಿ!

ನಂತರ ಕಂಪನಿಯು ಕಾರ್ತಿಯೊಂದಿಗೆ ಈ ಕುರಿತಾಗಿ ಮಾತನಾಡಿದೆ ಮತ್ತು ಅವರು ಹಿಂಬಾಗಿಲು ಪ್ರವೇಶದ ವಿಧಾನವನ್ನು ತಿಳಿಸಿದರು. ಕಾರ್ತಿ ಅವರ ಆದೇಶದ ಮೇರೆಗೆ ಗೃಹ ಸಚಿವಾಲಯವು ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗೆ ವೀಸಾವನ್ನು ನೀಡಿತ್ತು. ಇದಕ್ಕಾಗಿ ನಕಲಿ ರಸೀದಿ ಮೂಲಕ ಕಾರ್ತಿಗೆ ಕೋಟಿಗಟ್ಟಲೆ ಹಣ ಸಂದಾಯವಾಗಿದೆ ಎನ್ನಲಾಗಿದೆ.

Aircel Maxis Case: ಚಿದಂಬರಂ ಪುತ್ರ ಕಾರ್ತಿಗೆ ಮತ್ತೆ ಕಂಟಕ, ಸಮನ್ಸ್ ಜಾರಿ!

ಐಎನ್‌ಎಕ್ಸ್ ಮೀಡಿಯಾ ಪ್ರಕರಣದ ತನಿಖೆ ವೇಳೆ ಸಿಬಿಐಗೆ ಈ ವಿಷಯ ತಿಳಿಯಿತು. ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕಾರ್ತಿ ಅವರ ಹೆಸರೂ ಇದೆ, ಅವರ ವಿರುದ್ಧವೂ ತನಿಖೆ ನಡೆಯುತ್ತಿದೆ. ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್‌ಐಪಿಬಿ) ಅನುಮತಿಗೆ ಸಂಬಂಧಿಸಿದಂತೆ ಈ ತನಿಖೆ ನಡೆಯುತ್ತಿದೆ. ತನಿಖೆ ವೇಳೆ ಸಿಬಿಐಗೆ 50 ಲಕ್ಷ ರೂಪಾಯಿ ವ್ಯವಹಾರ ನಡೆದಿರುವುದು ತಿಳಿದು ಬಂದಿದೆ. ಚೀನಾದ ಉದ್ಯೋಗಿಗಳಿಗೆ ವೀಸಾ ಕೊಡಿಸಲು ಅಕ್ರಮವಾಗಿ ಪಡೆದ ಹಣವೂ ಇದೇ ಆಗಿದೆ ಎಂದು ಆರೋಪಿಸಲಾಗಿದೆ.

click me!