ಈರುಳ್ಳಿ ದರ ಏರಿಕೆ: ಸಚಿವ ಪಾಸ್ವಾನ್‌ ವಿರುದ್ಧ ಕೇಸ್‌!

Published : Dec 08, 2019, 08:54 AM IST
ಈರುಳ್ಳಿ ದರ ಏರಿಕೆ: ಸಚಿವ ಪಾಸ್ವಾನ್‌ ವಿರುದ್ಧ ಕೇಸ್‌!

ಸಾರಾಂಶ

ಈರುಳ್ಳಿ ದರ ಏರಿಕೆ: ಸಚಿವ ಪಾಸ್ವಾನ್‌ ವಿರುದ್ಧ ಕೇಸ್‌!| ಈರುಳ್ಳಿ ದರ ಏರಿಕೆಯ ಕುರಿತು ಜನರನ್ನು ದಾರಿತಪ್ಪಿಸಿ ಮೋಸ ಮಾಡಿದ್ದಾರೆ ಎಂಬ ಆರೋಪ

ಮುಂಬೈ[ಡಿ.08]: ಈರುಳ್ಳಿ ದರ ಏರಿಕೆಯ ಕುರಿತು ಜನರನ್ನು ದಾರಿತಪ್ಪಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ವಿರುದ್ಧ ಬಿಹಾರದ ಮುಜಫ್ಫರ್‌ಪುರ ಸಿವಿಲ್‌ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಪ್ರಕರಣವೊಂದು ದಾಖಲಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ಎಂ. ರಾಜು ನಯ್ಯರ್‌ ಎನ್ನುವವರು ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದು, ಡಿ.12ರಂದು ವಿಚಾರಣೆ ನಿಗದಿಯಾಗಿದೆ.

ಪಾಸ್ವಾನ್‌ ಅವರು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಸರಬರಾಜು ಸಚಿವರಾಗಿದ್ದ ಹೊರತಾಗಿಯೂ ಈರುಳ್ಳಿ ದರದ ಮೇಲೆ ನಿಗಾ ವಹಿಸಲು ವಿಫಲರಾಗಿದ್ದಾರೆ.

ಕಾಳ ಸಂತೆಯಿಂದಾಗಿ ತರಕಾರಿ ದರಗಳು ಏರಿಕೆ ಆಗಿವೆ ಎಂದು ಜನರನ್ನು ದಾರಿ ತಪ್ಪಿಸಿದ್ದಾರೆ ಎಂದು ಮುಜಫ್ಫರ್‌ಪುರ ನಿವಾಸಿಯಾಗಿರುವ ನಯ್ಯರ್‌ ದೂರಿನಲ್ಲಿ ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೆಲ್ಮೆಟ್ ಇಲ್ಲದ ಬೈಕ್ ಸವಾರನ ಹಿಡಿದ ಪೊಲೀಸ್, ಒಂದೇ ಮಾತಿಗೆ ದಂಡ ವಿಧಿಸದೆ ಬಿಟ್ಟುಕಳುಹಿಸಿದ್ರು
ಗ್ರೀನ್ ಕಾರ್ಡ್ ಸಂದರ್ಶನದ ವೇಳೆ 30 ವರ್ಷಗಳಿಂದ ಅಮೆರಿಕಾದಲ್ಲಿ ವಾಸವಿದ್ದ ಭಾರತೀಯ ಮಹಿಳೆಯ ಬಂಧನ