
ಪಾಟ್ನಾ(ಜು.06): ದಿವಂಗತ ನಾಯಕ ರಾಮ್ ವಿಲಾಸ್ ಪಾಸ್ವಾನ್ ರಾಜಕೀಯ ಗದ್ದುಗೆ ಮೇಲೆ ತಮ್ಮ ಹಿಡಿತ ಸಾಧಿಸಲು ಚಿಕ್ಕಪ್ಪ ಹಾಗೂ ಮಗ ಇಬ್ಬರೂ ಭಾರೀ ಪ್ರಯತ್ನ ನಡೆಸುತ್ತಿದ್ದಾರೆ. ಇವರ ಈ ಭಿನ್ನಮತದಿಂದ ಎಲ್ಜೆಪಿ ಎರಡು ಹೋಳಾಗಿದೆ. ಹೀಗಿರುವಾಗಲೇ ಎಲ್ಜೆಪಿ ಸಂಸದ ಪಶುಪತಿ ಕುಮಾರ್ ಪಾರಸ್ ಮೋದಿ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆಂಬ ಮಾತುಗಳು ಸದ್ದು ಮಾಡಿವೆ. ಪ್ರಮಾಣ ವಚನಕ್ಕೆ ಅವರು ತಯಾರಿ ನಡೆಸುತ್ತಿದ್ದು, ಇದಕ್ಕಾಗಿ ಹೊಸ ಕುರ್ತಾ ಖರೀದಿಸುವ ದೃಶ್ಯಗಳೂ ಕಂಡು ಬಂದಿದೆ.
ಮಂತ್ರಿಯಾಗುವ ಮುನ್ನ ಕುರ್ತಾ ಖರೀದಿ
ವಾಸ್ತವವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಂಸದ ಪಶುಪತಿಯವರು ಕುರ್ತಾ ಖರೀದಿಸುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಇದಾದ ಬಳಿಕ ರಾಜಕೀಯ ವಲಯದಲ್ಲಿ ಮಂತ್ರಿಗಿರಿ ವಿಚಾರ ಭಾರೀ ಸದ್ದು ಮಾಡಿದೆ. ಹೀಗಿರುವಾಗ ಚಿಕ್ಕಪ್ಪ ತನ್ನ ಅಣ್ಣನ ಮಗನನ್ನು ಹಿಂದಿಕ್ಕಿ ಸಚಿವರಾಗುವ ರೇಸ್ನಲ್ಲಿದ್ದಾರೆ. ಮೋದಿ ಸಂಪುಟದಲ್ಲಿ ಅವರ ಸ್ಥಾನ ಬಹುತೇಕ ಖಚಿತ ಎನ್ನಲಾಗಿದೆ. ಅಲ್ಲದೇ ಅವರು ತಡರಾತ್ರಿ ಪಾಟ್ನಾದಿಂದ ದೆಹಲಿಗೆ ತೆರಳಿದ್ದಾರೆ.
ಕರೆ ಮಾಡಿ ದೆಹಲಿಗೆ ಕರೆಸಿಕೊಂಡ ಅಮಿತ್ ಶಾ
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಪಶುಪತಿ ಪಾರಸ್, ಸೋಮವಾರ ಗೃಹ ಸಚಿವ ಅಮಿತ್ ಶಾರ ಕರೆ ಬಂದಿತ್ತು. ಅವರು ದೆಹಲಿಗೆ ಕರೆದಿದ್ದಾರೆ. ಹಾಗಾದ್ರೆ ನೀವು ಮೋದಿ ಸಂಪುಟದ ಸಚಿವರಾಗುತ್ತೀರಾ ಎಂದು ವರದಿಗಾರರೊಬ್ಬರು ಪ್ರಶ್ನಿಸಿದಾಗ, ಈ ರಹಸ್ಯವನ್ನು ಕೆಲ ಹೊತ್ತು ರಹಸ್ಯವಾಗೇ ಇಡೋಣ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ