
ಅರೇಬಿಯನ್ ಸಮುದ್ರದ ಮೇಲೆ ಹಾರಾಟದಲ್ಲಿದ್ದಾಗ ಇಂಧನ ಕೊರತೆಯು ಉಂಟಾದ ಕಾರಣ, ಬ್ರಿಟಿಷ್ ಎಫ್-35ಬಿ ಫೈಟರ್ ಜೆಟ್ ಶನಿವಾರ ರಾತ್ರಿ ಕೇರಳದ ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ. ಈ ಉನ್ನತ ತಂತ್ರಜ್ಞಾನದ ಸ್ಟೆಲ್ತ್ ಜೆಟ್ ಯುಕೆಯ HMS Prince of Wales ವಿಮಾನವಾಹಕ ನೌಕೆಯೊಂದಿಗೆ ಸಂಬಂಧ ಹೊಂದಿದ್ದು, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿತ್ತು.
ಈ ವಿಮಾನವು ಇತ್ತೀಚೆಗೆ ಭಾರತೀಯ ನೌಕಾಪಡೆಯೊಂದಿಗೆ ಜಂಟಿ ಸಮುದ್ರಾಭ್ಯಾಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಹಾರಾಟದ ವೇಳೆ, ಜೆಟ್ ಭಾರೀ ಮಳೆಯ ಪರಿಸ್ಥಿತಿಯನ್ನು ಎದುರಿಸಿತು ಮತ್ತು ಸಮುದ್ರದಲ್ಲಿ ಯುದ್ಧನೌಕೆ ಮೇಲೆ ಲ್ಯಾಂಡ್ ಮಾಡಲು ಸೂಕ್ತ ಪರಿಸ್ಥಿತಿಯಿಲ್ಲ ಎಂದು ನಿರ್ಧರಿಸಲಾಯಿತು. ಇಂಧನ ಮಟ್ಟ ತೀವ್ರವಾಗಿ ಕುಸಿದಿದ್ದರಿಂದ, ಬ್ರಿಟಿಷ್ ಪೈಲಟ್ ಭಾರತೀಯ ನೆಲದಲ್ಲಿ ಇಳಿಯಲು ತುರ್ತು ಅನುಮತಿ ಕೇಳಿದರು.
ಭಾರತೀಯ ಅಧಿಕಾರಿಗಳು ತಕ್ಷಣವೇ ಅಗತ್ಯವಿರುವ ಅನುಮತಿಯನ್ನು ನೀಡಿದ ಬಳಿಕ, ಜೆಟ್ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ರಾತ್ರಿ ಸುಮಾರು 10:30ಕ್ಕೆ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು. ಪೈಲಟ್ ಸಂಪೂರ್ಣವಾಗಿ ಸುರಕ್ಷಿತರಾಗಿದ್ದರು ಮತ್ತು ಯಾವುದೇ ಗಾಯಗಳಾಗಿಲ್ಲ.
ಭಾರತೀಯ ನೌಕಾಪಡೆ ಮತ್ತು ಬ್ರಿಟಿಷ್ ಹೈಕಮಿಷನ್ ಅಧಿಕಾರಿಗಳು ಸ್ಥಳೀಯ ಆಡಳಿತದೊಂದಿಗೆ ಮಾತುಕತೆ ನಡೆಸಿ ವಿಮಾನವಾಹಕ ಕಾರ್ಯಾಚರಣೆಗೆ ಹಿಂದಿರುಗುವ ಮೊದಲು ಜೆಟ್ಗೆ ಇಂಧನ ತುಂಬಿಸುವ ಹಾಗೂ ತಾಂತ್ರಿಕ ಪರಿಶೀಲನೆ ನಡೆಸುವ ಕಾರ್ಯವನ್ನು ಪ್ರಾರಂಭಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ವಿಮಾನವನ್ನು ಈಗ ವಿಮಾನ ನಿಲ್ದಾಣದ ಸುರಕ್ಷಿತ ಪ್ರದೇಶದಲ್ಲಿ ನಿಲ್ಲಿಸಲಾಗಿದೆ ಮತ್ತು ಇದುವರೆಗೆ ಯಾವುದೇ ತಾಂತ್ರಿಕ ದೋಷಗಳು ಅಥವಾ ಹಾನಿ ಪತ್ತೆಯಾಗಿಲ್ಲ. ಪರಿಸ್ಥಿತಿಗಳು ತಿಳಿಯಾದ ಬಳಿಕ, ಎರಡೂ ದೇಶಗಳ ಎಂಜಿನಿಯರ್ಗಳು ಜೆಟ್ನ ಮುಂದಿನ ಹಾರಾಟಕ್ಕೆ ಸಿದ್ಧತೆ ಮಾಡುತ್ತಿದ್ದಾರೆ.
"ಎಫ್-35 ವಿಮಾನಗಳು ಈ ಪರಿಸ್ಥಿತಿಗೆ ತಲುಪುವುದು ಒಳಪಡುವುದು ಸಾಮಾನ್ಯ. ಈ ಹಾರಾಟದ ಸಂದರ್ಭದಲ್ಲಿಯೂ ಸಹ ಐಎಎಫ್ ಸಂಪೂರ್ಣ ಮಾಹಿತಿಯೊಂದಿಗೆ ಕೈಜೋಡಿಸಿದ್ದು, ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದೆ. ಎಲ್ಲ ಆಯಾ ಇಲಾಖೆಗಳೊಂದಿಗೆ ಮಾತುಕತೆ ನಡೆಸಲಾಗಿದೆ."
ಬ್ರಿಟಿಷ್ ಎಫ್-35ಬಿ ಲೈಟ್ನಿಂಗ್ II ಹೆಸರಾಂತ ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್ ಆಗಿದ್ದು, ಇದು Short Take-Off and Vertical Landing (STOVL) ಸಾಮರ್ಥ್ಯ ಹೊಂದಿದೆ. ಈ ವೈಶಿಷ್ಟ್ಯತೆಯಿಂದಾಗಿ, HMS Prince of Wales ನಂತಹ ವಿಮಾನವಾಹಕ ನೌಕೆಯಿಂದ ನೇರವಾಗಿ ಹಾರಾಟ ನಡೆಸಲು ಮತ್ತು ಇಳಿಯಲು ಇದು ಸಾಧ್ಯವಾಗುತ್ತದೆ. ಪ್ರಾಟ್ & ವಿಟ್ನಿ F135 ಎಂಜಿನ್ ಮತ್ತು ರೋಲ್ಸ್-ರಾಯ್ಸ್ ಲಿಫ್ಟ್ ಸಿಸ್ಟಮ್ ನಿಂದ ಚಲಿಸಲ್ಪಡುವ ಈ ಜೆಟ್, ಕಿರು ರನ್ವೇಗಳು ಅಥವಾ ಉಭಯಚರ ದಾಳಿ ನೌಕೆಗಳಲ್ಲಿ ಲಂಬವಾಗಿ ಇಳಿಯಲು ಶಕ್ತವಾಗಿರುತ್ತದೆ — ಇದು ವಾಯುಸೈನ್ಯದ ತಾತ್ಕಾಲಿಕ ನಿರ್ಧಾರಗಳಿಗೆ ಬಹುಪರಾಕ್ಷವಾಗಿ ಸೂಕ್ತವಾಗಿದೆ, ವಿಶೇಷವಾಗಿ ಕೆಟ್ಟ ಹವಾಮಾನ ಪರಿಸ್ಥಿತಿ ಅಥವಾ ಸಮುದ್ರದ ಅಲೆಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಸಾಗರ ಲ್ಯಾಂಡಿಂಗ್ಗೆ ಅಪಾಯಕಾರಿಯಾಗಿರುವ ಸಂದರ್ಭಗಳಲ್ಲಿ ಈ ರೀತಿಯ ತುರ್ತು ಪರಿಸ್ಥಿತಿ ಎದುರಾಗುತ್ತದೆ.
ಈ ಘಟನೆಯು ಇತ್ತೀಚಿನ ಏರ್ ಇಂಡಿಯಾ ದುರಂತದ ಹಿನ್ನೆಲೆಯಲ್ಲಿ ಹೆಚ್ಚು ಗಮನ ಸೆಳೆದಿದೆ. ಕೆಲವೇ ದಿನಗಳ ಹಿಂದೆ ಅಹಮದಾಬಾದ್ನಿಂದ ಲಂಡನ್ಗೆ ಹಾರುತ್ತಿದ್ದ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನವು ಟೇಕ್ಆಫ್ ಆದ ಸ್ವಲ್ಪ ಹೊತ್ತಲ್ಲಿಯೇ ಭೀಕರ ಅಪಘಾತಕ್ಕೀಡಾಗಿ, 274 ಮಂದಿ ಪ್ರಾಣ ಕಳೆದುಕೊಂಡರು. ಈ ಸಂಬಂಧ ತನಿಖೆಗಳು ನಡೆಯುತ್ತಿವೆ, ವಿಮಾನದ ಬ್ಲ್ಯಾಕ್ ಬಾಕ್ಸ್ ವಶಪಡಿಸಿಕೊಳ್ಳಲಾಗಿದೆ ಮತ್ತು ಡ್ರೀಮ್ಲೈನರ್ ಫ್ಲೀಟ್ನ ಎಲ್ಲಾ ವಿಮಾನಗಳ ಸುರಕ್ಷತಾ ಪರಿಶೀಲನೆಗೆ ಭಾರತೀಯ ವಿಮಾನಯಾನ ನಿಯಂತ್ರಕರು ಆದೇಶ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ