
ನವದೆಹಲಿ(ಮೇ.21): ದೇಶದ ಮತ್ಸ್ಯ ಉದ್ಯಮದ ಸುಸ್ಥಿರ ಅಭಿವೃದ್ಧಿಗಾಗಿ ಮುಂದಿನ 5 ವರ್ಷಗಳಲ್ಲಿ 20,050 ಕೋಟಿ ರು. ವಿನಿಯೋಗಿಸುವ ಮಹತ್ವದ ಮತ್ಸ್ಯಸಂಪದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
2020-21ರಿಂದ 2024-25ವರೆಗಿನ 5 ವರ್ಷಗಳ ಆರ್ಥಿಕ ವರ್ಷದಲ್ಲಿ ಈ ಯೋಜನೆ ಜಾರಿ ಮಾಡುವುದಾಗಿ ಕಳೆದ ವರ್ಷ ಮಂಡಿಸಲಾದ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಈ ಯೋಜನೆಗೆ ಕೇಂದ್ರವು 9407 ಕೋಟಿ ರು., ರಾಜ್ಯ ಸರ್ಕಾರ 4880 ಕೋಟಿ ರು. ಹಾಗೂ ಫಲಾನುಭವಿಗಳ ಪಾಲು 5763 ಕೋಟಿ ರು. ಸೇರಿರಲಿದೆ ಎಂದು ತಿಳಿಸಲಾಗಿದೆ. ಈ ಯೋಜನೆ ಕರಾವಳಿ ತೀರ ಹೊಂದಿರುವ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಲಕ್ಷಾಂತರ ಮೀನುಗಾರರಿಗೆ ಲಾಭ ನೀಡಲಿದೆ.
20 ಲಕ್ಷ ಕೋಟಿ ಪ್ಯಾಕೇಜ್ನ ಹಲವು ಯೋಜನೆಗೆ ಸಮ್ಮತಿ!
ಈ ಯೋಜನೆಯ ಉದ್ದೇಶಗಳು
- ಮೀನುಗಾರಿಕಾ ವಲಯದಲ್ಲಿ 15 ಲಕ್ಷ ನೇರ ಉದ್ಯೋಗಾವಕಾಶ ಸೃಷ್ಟಿ
- 2024ರೊಳಗೆ ಮೀನುಗಾರರು, ಈ ಉದ್ಯಮದಲ್ಲಿರುವವರ ಆದಾಯ ದ್ವಿಗುಣ
- ಸುಸ್ಥಿರ ಅಭಿವೃದ್ಧಿ ಮೂಲಕ 2024-25ರ ಒಳಗೆ 2.2 ಲಕ್ಷ ಟನ್ ಮೀನುಗಳ ಉತ್ಪಾದನೆ
- ಮೀನುಗಾರಿಕೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಅವಕಾಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ