ಮೋದಿ ಕುರಿತ 'ಆಜ್ ಕಾ ಶಿವಾಜಿ' ಪುಸ್ತಕ ಹಿಂಪಡೆದ ಬಿಜೆಪಿ ಮುಖಂಡ ಕ್ಷಮೆಯಾಚನೆ!

Suvarna News   | Asianet News
Published : Jan 14, 2020, 04:32 PM IST
ಮೋದಿ ಕುರಿತ 'ಆಜ್ ಕಾ ಶಿವಾಜಿ' ಪುಸ್ತಕ ಹಿಂಪಡೆದ ಬಿಜೆಪಿ ಮುಖಂಡ ಕ್ಷಮೆಯಾಚನೆ!

ಸಾರಾಂಶ

ಪ್ರಧಾನಿ ಮೋದಿ ಅವರನ್ನು ಶಿವಾಜಿ ಮಹಾರಾಜರಿಗೆ ಹೋಲಿಸಿ ಪುಸ್ತಕ| ಆಜ್ ಕಾ ಶಿವಾಜಿ(ಇಂದಿನ ಶಿವಾಜಿ-ನರೇಂದ್ರ ಮೋದಿ)ಪುಸ್ತಕ ಹಿಂಪಡೆದ ಲೇಖಕ| ದೆಹಲಿ ಬಿಜೆಪಿ ಮುಖಂಡ ಜೈ ಭಗವಾನ್ ಗೋಯಲ್ ಕ್ಷಮೆಯಾಚನೆ| ಪುಸ್ತಕಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್| ಮೋದಿ ಅವರನ್ನು ಶಿವಾಜಿ ಮಹಾರಾಜರಿಗೆ ಹೋಲಸಿದ್ದು ಸರಿಯಲ್ಲ ಎಂದ ಜಾವಡೇಕರ್|

ನವದೆಹಲಿ(ಜ.14): ಪ್ರಧಾನಿ ಮೋದಿ ಅವರನ್ನು ಆಧುನಿಕ ಶಿವಾಜಿ ಎಂದು ಬಣ್ಣಸಿದ್ದ 'ಆಜ್ ಕಾ ಶಿವಾಜಿ'(ಇಂದಿನ ಶಿವಾಜಿ-ನರೇಂದ್ರ ಮೋದಿ)ಪುಸ್ತಕವನ್ನು ಬಿಜೆಪಿ ಮುಖಂಡ ಜೈ ಭಗವಾನ್ ಗೋಯಲ್ ಹಿಂಪಡೆದಿದ್ದು, ಪ್ರಮಾದಕ್ಕೆ ಕ್ಷಮೆಯಾಚಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಮೋದಿ ಅವರನ್ನು ಶಿವಾಜಿ ಮಹಾರಾಜರಿಗೆ ಹೋಲಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 'ಆಜ್ ಕಾ ಶಿವಾಜಿ'ಪುಸ್ತಕವನ್ನು ಹಿಂಪಡೆಯಲಾಗಿದೆ ಎಂದು ಲೇಖಕ ಜೈ ಭಗವಾನ್ ಗೋಯಲ್ ತಿಳಿಸಿದ್ದಾರೆ.

ಇನ್ನು ವಿವಾದಿತ ಪುಸ್ಕತ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಪುಸ್ತಕಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಪುಸ್ತಕದ ಲೇಖಕ ಕೂಡ ಕ್ಷಮೆ ಕೋರಿರುವುದರಿಂದ ವಿವಾದ ಅಂತ್ಯ ಕಂಡಿದೆ ಎಂದು ಜಾವಡೇಕರ್ ಹೇಳಿದ್ದಾರೆ.

ಶಿವಾಜಿ ಮಹಾರಾಜರು ಅತ್ಯಂತ ಮಹನೀಯರು. ಅವರಿಗೆ ಬೇರೆ ಯಾರೂ ಸಮಾನರಲ್ಲ ಎಂದು ಜಾವಡೇಕರ್ ಟ್ವೀಟ್ ಮಾಡಿದ್ದಾರೆ. ಮೋದಿ ಅವರನ್ನು ಶಿವಾಜಿ ಮಹಾರಾಜರಿಗೆ ಹೋಲಿಕೆ ಮಾಡಿದ್ದು ಸರಿಯಲ್ಲ ಎಂದೂ ಜಾವಡೇಕರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಶಿವಾಜಿ ಮಹಾರಾಜರಿಗೆ ಹೋಲಿಕೆ ಮಾಡಿದ್ದನ್ನು ತೀವ್ರವಾಗಿ ವಿರೋಧಿಸಿದ್ದ ಶಿವಸೇನೆ, ಪುಸ್ತಕವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?