
ಪುದುಚೇರಿ(ಮೇ.03): ಕರ್ನಾಟಕದ ರಾಜ್ಯಸಭಾ ರಾಜೀವ್ ಚಂದ್ರಶೇಖರ್ ಹಾಗೂ ಕರ್ನಾಟಕ ಬಿಜೆಪಿ ಮುಖಂಡ ನಿರ್ಮಲ್ಕುಮಾರ್ ಸುರಾನಾ ಅವರು ಪುದುಚೇರಿಯಲ್ಲಿ ಎನ್ಆರ್-ಕಾಂಗ್ರೆಸ್-ಬಿಜೆಪಿ-ಅಣ್ಣಾಡಿಎಂಕೆ ಕೂಟ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರು.
ರಾಜೀವ್ರನ್ನು ಪುದುಚೇರಿಯ ಸಹ ಉಸ್ತುವಾರಿಯನ್ನಾಗಿ ಹಾಗೂ ಸುರಾನಾ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಈ ವೇಳೆ ಕಾಂಗ್ರೆಸ್ ಆಡಳಿತ ವೈಖರಿಗೆ ಆ ಪಕ್ಷದ ಸಾಕಷ್ಟುಶಾಸಕರು ಬೇಸತ್ತಿದ್ದನ್ನು ಗಮನಿಸಿದ ಈ ಬಿಜೆಪಿ ನಾಯಕರು, ಇವರನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಯಶಸ್ವಿಯಾದರು. ಇದು ಬಿಜೆಪಿ ಗೆಲುವಿಗೆ ಪ್ರಮುಖ ಕಾರಣವಾಗಿದೆ.
ಅಲ್ಲದೆ, ಚುನಾವಣೆ ನಡೆದ ವೇಳೆ ಪುದುಚೇರಿ ಸುತ್ತಿದ ಈ ನಾಯಕರು ಪಕ್ಷ ಸಂಘಟಿಸಿದರು. ಇದರಿಂದಾಗಿ ಅಷ್ಟುಪ್ರಬಲ ನೆಲೆ ಹೊಂದಿರದ ಪಕ್ಷವು ಪುದುಚೇರಿಯಲ್ಲಿ ಪ್ರಬಲವಾಗಿ ಬೆಳೆಯಲು ನಾಂದಿ ಹಾಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ