
ಪಟನಾ(ಮಾ.24): ಕಲಾಪಕ್ಕೆ ಅಡ್ಡಿಮಾಡಿದ ವಿಪಕ್ಷ ಸದಸ್ಯರನ್ನು ಮಾರ್ಷಲ್ಗಳು ದರದರನೆ ಎಳೆದೊಯ್ದು ವಿಧಾನಸಭೆಯಿಂದ ಹೊರಹಾಕಿ ಥಳಿಸಿದ ಘಟನೆ ಮಂಗಳವಾರ ಬಿಹಾರ ವಿಧಾನಸಭೆಯಲ್ಲಿ ನಡೆದಿದೆ.
ಘಟನೆಯನ್ನು ವಿಪಕ್ಷ ನಾಯಕರು ಕಟುವಾಗಿ ಟೀಕಿಸಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಆಡಳಿತದ ಕೊನೆಯ ದಿನಗಳನ್ನು ಎಣಿಸುತ್ತಿರುವುದಕ್ಕೆ ಇದೇ ಸಾಕ್ಷಿ ಎಂದು ಕಿಡಿಕಾರಿದ್ದಾರೆ. ಬಿಹಾರ ಮಿಲಿಟರಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ಕೊಡುವ ಮಸೂದೆಯನ್ನು ಸರ್ಕಾರ ಮಂಗಳವಾರ ಮಂಡಿಸಿತ್ತು. ಇದನ್ನು ವಿರೋಧಿಸಿ ವಿಪಕ್ಷಗಳು ಭಾರೀ ಗದ್ದಲ ಮಾಡಿದವು.
ಪರಿಣಾಮ ಸ್ಪೀಕರ್ 2 ಬಾರಿ ಕಲಾಪ ಮುಂದೂಡಿದರು. ಬಳಿಕ ಸಂಜೆ 4.30ಕ್ಕೆ ಪುನಃ ಕಲಾಪ ಆರಂಭಕ್ಕೆ ಸ್ಪೀಕರ್ ಆಗಮಿಸುವ ವೇಳೆ ವಿಪಕ್ಷ ಸದಸ್ಯರು, ಅವರನ್ನು ಕೊಠಡಿಯಲ್ಲೇ ಕೂಡಿಹಾಕಿ ಹೊರಬರದಂತೆ ತಡೆದರು. ಈ ವೇಳೆ ಸ್ವತಃ ಪಟನಾ ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೇ ಸ್ಥಳಕ್ಕೆ ಆಗಮಿಸಿದರು. ಬಳಿಕ ಮಾರ್ಷಲ್ಗಳು ವಿಪಕ್ಷದ ಹಲವು ಶಾಸಕರನ್ನು ದರದರನೆ ಎಳೆದು ಹೊರಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ