
ಕೋಲ್ಕತ್ತಾ(ಜು.26): ತಪ್ಪು ಮಾಡಿದ ಗಂಡನಿಗೆ ಹೆಂಡತಿ ಬುದ್ಧಿಕಲಿಸುವುದು ಮಾಮೂಲಿ. ಕೆಲವೊಮ್ಮೆ ಸಿಟ್ಟು ನೆತ್ತಿಗೇರಿದರೆ ಲಟ್ಟಣಿಕೆ, ಪೊರಕೆ ಕೈಗೆ ಬರುತ್ತದೆ. ಆದರೆ, ಅಷ್ಟಕ್ಕೇ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುವುದುಂಟೇ?
ಆದರೆ, ಪಶ್ಚಿಮ ಬಂಗಾಳದ ಅಲಿಪುರುದರ್ ಜಿಲ್ಲೆಯ ಸೌಮಿತ್ರ ಅಧಿಕಾರಿ ಎಂಬಾತ ಹೆಂಡತಿ ಮತ್ತು ಅತ್ತೆಯಿಂದ ಪೊರಕೆ ಏಟು ತಿಂದಿದ್ದಕ್ಕೆ ಅವಮಾನ ತಾಳಲಾರದೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗಳನ್ನು ನೋಡುವುದಕ್ಕೆಂದು ಅತ್ತೆ ಮನೆಗೆ ಹೋದಾಗ ಜಗಳ ಏರ್ಪಟ್ಟು, ಹೆಂಡತಿ ಮತ್ತು ಅತ್ತೆ ಪೊರಕೆ ಸೇವೆ ಮಾಡಿದ್ದರು. ಈ ಸಂಗತಿಯನ್ನು ತನ್ನ ತಾಯಿಗೆ ಹೇಳಿದ ಆತ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇಷ್ಟಕ್ಕೆಲ್ಲಾ ಹೆಣ್ಣಿನ ಮನೆಯವರೇ ಕಾರಣ ಎಂದು ಮೃತನ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ