ದೀದೀ ಸರ್ಕಾರದಿಂದ ಶಾಲೆಗಳಿಗೆ ಹೊಸ ಡ್ರೆಸ್‌ ಕೋಡ್‌, ವಿದ್ಯಾರ್ಥಿಗಳಿಗೆ ಈ ಬಣ್ಣದ ಸಮವಸ್ತ್ರ!

Published : Mar 21, 2022, 01:35 PM IST
ದೀದೀ ಸರ್ಕಾರದಿಂದ ಶಾಲೆಗಳಿಗೆ ಹೊಸ ಡ್ರೆಸ್‌ ಕೋಡ್‌, ವಿದ್ಯಾರ್ಥಿಗಳಿಗೆ ಈ ಬಣ್ಣದ ಸಮವಸ್ತ್ರ!

ಸಾರಾಂಶ

* ಪಶ್ಚಿಮ ಬಂಗಾಳದ ಶಾಲೆಗಳಲ್ಲಿ ಇನ್ನು ಹೊಸ ಯೂನಿಫಾರಂ * ದೀದೀ ಸರ್ಕಾರದಿಂದ ಶಾಲೆಗಳಿಗೆ ಹೊಸ ಡ್ರೆಸ್‌ ಕೋಡ್‌ * ವಿದ್ಯಾರ್ಥಿಗಳಿಗೆ ಈ ಬಣ್ಣದ ಸಮವಸ್ತ್ರ

ಕೋಲ್ಕತ್ತಾ(ಮಾ.21): ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೊಸ ಡ್ರೆಸ್ ಕೋಡ್ ಅನ್ನು ಜಾರಿಗೆ ತರಲು ಹೊರಟಿದೆ. ಮಾಹಿತಿಯ ಪ್ರಕಾರ, ಬಂಗಾಳದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಉಡುಗೆ ನೀಲಿ ಮತ್ತು ಬಿಳಿಯಾಗಿರುತ್ತದೆ. ಹೊಸ ಡ್ರೆಸ್ ಕೋಡ್‌ನಲ್ಲಿ ಬಂಗಾಳ ಸರ್ಕಾರದ 'ಬಿಸ್ವಾ ಬಾಂಗ್ಲಾ' ಲೋಗೋ ಕೂಡ ಇರುತ್ತದೆ. ಇದನ್ನು ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿನ್ಯಾಸಗೊಳಿಸಿದ್ದಾರೆ.

ಸರ್ಕಾರದ ಆದೇಶದ ಪ್ರಕಾರ, ಹೊಸ ಸಮವಸ್ತ್ರವನ್ನು ರಾಜ್ಯದ ಎಂಎಸ್‌ಎಂಇ ಇಲಾಖೆಯು ಪೂರೈಸುತ್ತದೆ. ಪೂರ್ವ ಪ್ರಾಥಮಿಕದಿಂದ 8 ನೇ ತರಗತಿಯವರೆಗೆ ಹುಡುಗರಿಗೆ ಬಿಳಿ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಹಾಗೂ ಹುಡುಗಿಯರಿಗೆ, ಬಿಳಿ ಶರ್ಟ್ ಡ್ರೆಸ್ ಕೋಡ್ ಅನ್ನು ನೇವಿ ಬ್ಲೂ ಫ್ರಾಕ್ ಮತ್ತು ಸಲ್ವಾರ್ ಕಮೀಜ್‌ನೊಂದಿಗೆ ನಿಗದಿಪಡಿಸಲಾಗಿದೆ.

ಇದರೊಂದಿಗೆ ಬಿಸ್ವಾ ಬಾಂಗ್ಲಾ ಲಾಂಛನವು ಪ್ರತಿ ಡ್ರೆಸ್‌ನ ಜೇಬಿನ ಮೇಲೂ ಇರುತ್ತದೆ. ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶಾಲಾ ಬ್ಯಾಗ್‌ಗಳಲ್ಲಿಯೂ ಬಿಸ್ವಾ ಬಾಂಗ್ಲಾ ಎಂಬ ಲೋಗೋ ಇರುತ್ತದೆ.

ಪೂರ್ವ ಪ್ರಾಥಮಿಕದಿಂದ 8ನೇ ತರಗತಿವರೆಗಿನ ಬಾಲಕರಿಗೆ 1 ಹಾಫ್ ಪ್ಯಾಂಟ್ ಮತ್ತು 1 ಫುಲ್ ಶರ್ಟ್ ಸಿಗಲಿದೆ ಎಂದು ಸರಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಪೂರ್ವ ಪ್ರಾಥಮಿಕದಿಂದ II ನೇ ತರಗತಿಯವರೆಗಿನ ಹುಡುಗಿಯರು ಎರಡು ಸೆಟ್ ಶರ್ಟ್ ಮತ್ತು ಟ್ಯೂನಿಕ್ ಫ್ರಾಕ್ ಅನ್ನು ಪಡೆಯುತ್ತಾರೆ. III ನೇ ತರಗತಿಯಿಂದ V ವರೆಗೆ ಎರಡು ಸೆಟ್ ಶರ್ಟ್ ಮತ್ತು ಸ್ಕರ್ಟ್ ನೀಡಲಾಗುವುದು. ಆದರೆ 6 ರಿಂದ 8 ನೇ ತರಗತಿಯವರೆಗೆ ಎರಡು ಸೆಟ್ ಸಲ್ವಾರ್ ಮತ್ತು ಕಮೀಜ್ ದುಪಟ್ಟಾ ನೀಡಲಾಗುತ್ತದೆ.

ಈ ಮೊದಲೇ ಮಮತಾ ಬ್ಯಾನರ್ಜಿ ಸರ್ಕಾರ ಈ ವಿಚಾರವಾಗಿ ಆದೇಶ ನೀಡಿತ್ತು ಎಂಬುವುದು ಉಲ್ಲೇಖನೀಯ. ಇದರ ಅಡಿಯಲ್ಲಿ, ಎಲ್ಲಾ ಸರ್ಕಾರಿ ಕಚೇರಿ ಕಟ್ಟಡಗಳು ಮತ್ತು ಸಾರ್ವಜನಿಕ ಮೂಲಸೌಕರ್ಯಗಳಿಗೆ ನೀಲಿ ಮತ್ತು ಬಿಳಿ ಬಣ್ಣ ಬಳಿಯಲಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!