
ನವದೆಹಲಿ: ದೆಹಲಿಯಲ್ಲಿನ ವಾಯುಗುಣಮಟ್ಟ ತೀರಾ ಹದಗೆಟ್ಟು, ಅದನ್ನು ಸರಿಪಡಿಸಲು ಸರ್ಕಾರ ಹರಸಾಹಸ ಪಡೆಯುತ್ತಿರುವ ನಡುವೆಯೇ, ‘ಈ ವಿಷಯದಲ್ಲಿ ನಾವು ನಿಮಗೆ ಸಹಾಯ ಮಾಡುತ್ತೇವೆ’ ಎಂದು ಚೀನಾ ಸಹಾಯಹಸ್ತ ಚಾಚಿದೆ.
ಭಾರತದಲ್ಲಿರುವ ಚೀನಾ ರಾಯಭಾರಿ ಯು ಜಿಂಗ್ ತಮ್ಮ ಎಕ್ಸ್ನಲ್ಲಿ, ‘ಒಂದೊಮ್ಮೆ ಸ್ಮಾಗ್ (ಹೊಗೆ ಮತ್ತು ಮಂಜು) ಸಮಸ್ಯೆಯಿಂದ ಬಳಲಿದ್ದ ನಾವು ಈಗ ಅದನ್ನು ನಿವಾರಿಸಿಕೊಂಡಿದ್ದೇವೆ. ಭಾರತ ಕೂಡ ಇದನ್ನು ಸಾಧಿಸುವ ವಿಶ್ವಾಸವಿದೆ’ ಎಂದು ಬೀಜಿಂಗ್ ಮತ್ತು ಶಾಂಘೈ ನಗರಗಳ ಕಲುಷಿತ ಮತ್ತು ಸ್ವಚ್ಛ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ, ಭಾರತಕ್ಕೂ ಈ ವಿಷಯದಲ್ಲಿ ಸಹಾಯ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವಿಪರೀತವಾಗಿದ್ದ ವಾಯುಮಾಲಿನ್ಯವನ್ನು ತಡೆಗಟ್ಟಲು ಚೀನಾ ಕಾರ್ಖಾನೆಗಳ ಸ್ಥಳಾಂತರ, ಹಳೆ ವಾಹನಗಳ ಬಳಕೆಗೆ ಕಡಿವಾಣ, ಇದ್ದಿಲಿನ ಬದಲಿಗೆ ನೈಸರ್ಗಿಕ ಅನಿಲ ಬಳಕೆಯಂತಹ ಕ್ರಮಗಳನ್ನು ಕೈಗೊಂಡಿತ್ತು. ಇದರಿಂದಾಗಿ ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಿಸಿತ್ತು.
ಬೀಜಿಂಗ್ನಲ್ಲಿ ವಾಯುಮಾಲಿನ್ಯ ಅಳೆಯುವ ಪಿಎಂ 2.5 ಮಟ್ಟ 900ಕ್ಕೆ ತಲುಪಿತ್ತು. ಇದು ಗುಣಮಟ್ಟದ ಗಾಳಿಗಿಂತ 30 ಪಟ್ಟು ಮಲೀನ
ಇದರ ತಡೆಗೆ ಕಲ್ಲಿದ್ದಲು ಆಧರಿತ ಕೈಗಾರಿಕೆ ಸ್ಥಗಿತ, ದೊಡ್ಡ ಕೈಗಾರಿಕೆಗಳ ಸ್ಥಳಾಂತರ, ಸಾರ್ವಜನಿಕ ಸಾರಿಗೆಗೆ ಒತ್ತು ನೀಡಿದ್ದ ಚೀನಾ
ಕಬ್ಬಿಣ, ಉಕ್ಕಿನ ಉತ್ಪಾದನೆದಲ್ಲಿ ಭಾರೀ ಕಡಿತ ಮಾಡಿ, 12 ಪ್ರಾಂತ್ಯಗಳಲ್ಲಿ 3500 ಕೋಟಿ ಮರಗಳನ್ನು ನೆಡುವ ಯೋಜನೆ ರೂಪಿಸಿತ್ತು
ವಾಯುಮಾಲಿನ್ಯಕ್ಕೆ ಕಾರಣವಾಗುವ ವಾಹನಗಳ ಬಳಕೆ ಸಂಪೂರ್ಣವಾಗಿ ನಿಷೇಧ, ಮೆಟ್ರೋ ರೈಲು ಸೇವೆಗಳಲ್ಲಿ ಹೆಚ್ಚಳ ಮಾಡಿತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ