ಹೆದರಬೇಡ, ನಾವಿದ್ದೇವೆ: ಸೋಂಕಿತ ಪಿಜ್ಜಾ ಬಾಯ್‌ಗೆ ಗ್ರಾಹಕರಿಂದಲೇ ಧೈರ್ಯ

Published : Apr 23, 2020, 12:59 PM IST
ಹೆದರಬೇಡ, ನಾವಿದ್ದೇವೆ: ಸೋಂಕಿತ ಪಿಜ್ಜಾ ಬಾಯ್‌ಗೆ ಗ್ರಾಹಕರಿಂದಲೇ ಧೈರ್ಯ

ಸಾರಾಂಶ

ಹೆದರಬೇಡ, ನಾವಿದ್ದೇವೆ: ಸೋಂಕಿತ ಪಿಜ್ಜಾ ಬಾಯ್‌ಗೆ ಗ್ರಾಹಕರಿಂದಲೇ ಧೈರ್ಯ| ಹೆಚ್ಚಿನವರು ಫೋನಿನಲ್ಲಿ ನನ್ನನ್ನು ಸಂಪರ್ಕಿಸಿದ್ದಾರೆ ಎಂದ ಡೆಲಿವರಿ ಬಾಯ್

ನವದೆಹಲಿ(ಏ.೨೩): ಕೊರೋನಾ ಸೋಂಕು ತಟ್ಟಿದ್ದ ರಾಜಧಾನಿಯ ಪಿಜ್ಜಾ ಡೆಲಿವರಿ ಬಾಯ್‌ಗೆ, ಗ್ರಾಹಕರೇ ಧೈರ್ಯ ತುಂಬಿದ್ದಾರೆ. ಆ ವ್ಯಕ್ತಿಯನ್ನು ಸಂಪರ್ಕಿಸಿದ 15ಕ್ಕೂ ಹೆಚ್ಚು ಮಂದಿ ಗ್ರಾಹಕರು ಧೃತಿಗೆಡಬೇಡ ಎಂದು ಧೈರ್ಯ ಹೇಳಿದ್ದಾರೆ.

ಬಿಲ್‌ನಲ್ಲಿದ್ದ ನಂಬರ್‌ ಮೂಲಕ ಗ್ರಾಹಕರು ಆತನಿಗೆ ಕರೆ ಮಾಡಿ, ಸಹಾಯ ಬೇಕಿದ್ದರೆ ಸಂಪರ್ಕಿಸುವಂತೆ ವಿಶ್ವಾಸ ತುಂಬಿದ್ದಾರೆ.

ಬಾಯಿ ಚಪಲ: ಪಿಜ್ಜಾ ತರಿಸಿದ 72 ಕುಟುಂಬಕ್ಕೆ ಕ್ವಾರಂಟೈನ್!

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋಂಕಿತ, ಹೆಚ್ಚಿನವರು ಫೋನಿನಲ್ಲಿ ನನ್ನನ್ನು ಸಂಪರ್ಕಿಸಿದ್ದಾರೆ. ಸಹಾಯ ಬೇಕಿದ್ದರೆ ಯಾವುದೇ ಮುಜುಗರವಿಲ್ಲದೇ ಕೇಳು ಎಂದು ಧೈರ್ಯ ತುಂಬಿದ್ದರು ಎಂದು ಹೇಳಿದ್ದಾನೆ.

ತನಗೆ ಕೊರೋನಾ ಸೋಂಕು ತಟ್ಟಿರುವುದು ತಿಳಿಯದೇ ಹಲವು ಕುಟುಂಬಳಿಗೆ ಈತ ಪಿಜ್ಜಾ ಡೆಲಿವರಿ ಮಾಡಿದ್ದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!