ಅನಾವಶ್ಯಕ ಹೇಳಿಕೆ ನೀಡದಂತೆ ನೂತನ ಸಚಿವರಿಗೆ ಮೋದಿ ಸಲಹೆ!

Published : Jul 10, 2021, 09:57 AM ISTUpdated : Jul 10, 2021, 10:36 AM IST
ಅನಾವಶ್ಯಕ ಹೇಳಿಕೆ ನೀಡದಂತೆ ನೂತನ ಸಚಿವರಿಗೆ ಮೋದಿ ಸಲಹೆ!

ಸಾರಾಂಶ

* ಸಾಮರ್ಥ್ಯವನ್ನು ಕೆಲಸದಲ್ಲಿ ತೋರಿಸಬೇಕೇ ಹೊರತು ಮಾತಿನಲ್ಲಿ ಅಲ್ಲ * ಅನಾವಶ್ಯಕ ಹೇಳಿಕೆ ನೀಡದಂತೆ ನೂತನ ಸಚಿವರಿಗೆ ಮೋದಿ ಸಲಹೆ * ನೂತನವಾಗಿ ಸಂಪುಟಕ್ಕೆ ಸೇರಿದ ಸಚಿವರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ   

ನವದೆಹಲಿ(ಜು.10): ನೂತನ ಸಚಿವರು ತಮ್ಮ ಸಾಮರ್ಥ್ಯವನ್ನು ಕೆಲಸದಲ್ಲಿ ತೋರಿಸಬೇಕೇ ಹೊರತು ಮಾತಿನಲ್ಲಿ ಅಲ್ಲ. ಅನಾವಶ್ಯಕವಾಗಿ ಹೇಳಿಕೆ ನೀಡಿ ಮಾಧ್ಯಮಗಳಿಗೆ ಆಹಾರವಾಗಬಾರದು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ನೂತನವಾಗಿ ಸಂಪುಟಕ್ಕೆ ಸೇರಿದ ಸಚಿವರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದರು. ಈ ವೇಳೆ 12 ಸಚಿವರನ್ನು ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಕಾರಣ ವಿವರಿಸಿದ ಅವರು, ಕೊನೆಯ ಮೈಲಿಯನ್ನು ತಲುಪುವವರೆಗೂ ವಿಶ್ರಮಿಸಬಾರದು ಎಂಬುದು ಸರ್ಕಾರದ ಕಾರ್ಯಸೂಚಿಯಾಗಿದೆ.

ಕೊರೋನಾ ಮೂರನೇ ಅಲೆ ಭೀತಿ ಮಧ್ಯೆ ಶುಭ ಸುದ್ದಿ ಕೊಟ್ಟ ಸಂಶೋಧಕರು!

ಆಡಳಿತ ವ್ಯವಸ್ಥೆಗೆ ನವ ಚೈತನ್ಯವನ್ನು ತುಂಬುವ ಉದ್ದೇಶದಿಂದ ಅವರನ್ನು ಬದಲಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಅವರು ಅಸಮರ್ಥರು ಎಂಬ ಅರ್ಥವಲ್ಲ. ನೂತನ ಸಚಿವರು ಹಿಂದಿನ ಸಚಿವರನ್ನು ಭೇಟಿ ಮಾಡಿ ಅವರ ಕೆಲಸದ ಅನುಭವ ಪಡೆದುಕೊಳ್ಳಬೇಕು. ಇದೇ ವೇಳೆ ಸಚಿವರು ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು. ಸಚಿವಾಲಯದ ಕೆಲಸದಲ್ಲಿ ಸಂಪೂರ್ಣ ಪರಿಶ್ರಮದಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕು. ತುಳಿತಕ್ಕೆ ಒಳಗಾದವರಿಗೆ ಸಹಾಯ ಮಾಡುವುದು ಮೊದಲ ಆದ್ಯತೆ ಆಗಬೇಕು ಎಂದು ಸಲಹೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು