ಸೋನಿಯಾ ಗಾಂಧಿ ಮಾಡಿದ್ದ ಶಿಲಾನ್ಯಾಸ ಕಲ್ಲು ಅಟಲ್ ಟನಲ್‌ನಿಂದ ಮಾಯ!

Published : Oct 13, 2020, 11:58 AM ISTUpdated : Oct 13, 2020, 12:25 PM IST
ಸೋನಿಯಾ ಗಾಂಧಿ ಮಾಡಿದ್ದ ಶಿಲಾನ್ಯಾಸ ಕಲ್ಲು ಅಟಲ್ ಟನಲ್‌ನಿಂದ ಮಾಯ!

ಸಾರಾಂಶ

ಇತ್ತೀಚೆಗಷ್ಟೇ ಪಿಎಂ ಮೋದಿ ಉದ್ಘಾಟಿಸಿದ್ದ ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ಅಟಲ್ ಟನಲ್| ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಕಿದ್ದ ಶಿಲಾನ್ಯಾಸದ ಕಲ್ಲು ಮಾಯ| ಪ್ರತಿಭಟನೆ ನಡೆಸುವುದಾಗಿ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ

ಮನಾಲಿ(ಅ.13): ಇತ್ತೀಚೆಗಷ್ಟೇ ಪಿಎಂ ಮೋದಿ ಉದ್ಘಾಟಿಸಿದ್ದ ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ಅಟಲ್ ಟನಲ್ ದೇಶಕ್ಕೆ ಹೆಮ್ಮೆ ತಂದುಕೊಟ್ಟಿತ್ತು. ಆದರೀಗ ಉದ್ಘಾಟನೆಗೊಂಡ ಅಟಲ್ ಟನಲ್ ಮತ್ತೆ ಸದ್ದು ಮಾಡಿದೆ. ಹೌದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಕಿದ್ದ ಶಿಲಾನ್ಯಾಸದ ಕಲ್ಲು ಮಾಯವಾಗಿದೆ. ಇದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಸಂಬಂಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಟಲ್ ಕನಸಿನ ಯೋಜನೆ, ವಿಶ್ವದ ಅತಿ ದೊಡ್ಡ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ!

ಸೋನಿಯಾ ಗಾಮಧಿ ಹೆಸರಿದ್ದ ಶಿಲಾನ್ಯಾಸದ ಕಲ್ಲು ಅಟಲ್ ಟನಲ್ ಉದ್ಘಾಟನೆಗೂ ಮೊದಲೇ ಅಲ್ಲಿಂದ ಕಿತ್ತೆಸೆದಿದ್ದಾರೆ ಎಂಬುವುದು ಹಿಮಾಚಲ ಪ್ರದೇಶ ಕಾಂಗ್ರೆಸ್ ನಾಯಕರ ಆರೋಪವಾಗಿದೆ. ಪಪಕ್ಷದ ಪ್ರಾದೇಶಿಕ ಅಧ್ಯಕ್ಷ ಕುಲ್ದೀಪ್ ಸಿಂಗ್ ರಾಥೋಡ್ ಮುಖ್ಯಮಂತ್ರಿ ಜಯರಾಮ್ ಠಾಕೂರ್‌ಗೆ ಪತ್ರ ಬರೆದು ಇದನ್ನು ಖಂಡಿಸಿ ಪ್ರತಿಭಟನೆ ನಡೆಸುವುವ ಎಚ್ಚರಿಕೆ ನೀಡಿದ್ದಾರೆ. ತಾನು ಬರೆದ ಪತ್ರದಲ್ಲಿ 'ಮಾಯವಾಗಿರುವ ಕಲ್ಲನ್ನು ಮತ್ತೆ ಹಾಕದಿದ್ದರೆ ಸರ್ಕಾರದ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತೇವೆ' ಎಂದು ಎಚ್ಚರಿಸಿದ್ದಾರೆ. ಈ ನಡೆ ಪ್ರಜಾಪ್ರಭುತ್ವ ವಿರೋಧಿ, ಅಸಾಂಪ್ರದಾಯಿಕ ಮತ್ತು ಕಾನೂನುಬಾಹಿರ ಎಂದೂ ಉಲ್ಲೇಖಿಸಿದ್ದಾರೆ.

'ಅವರಲ್ಲಿ ಧೈರ್ಯ ಕಡಿಮೆ ಇತ್ತು, ಚುನಾವಣೆ ಇತ್ತು, ನಮಗೆ ದೇಶವೇ ಮೊದಲು'

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ  2010ರ ಜೂನ್ 28ರಂದು ಮನಾಲಿಯ ಧೌಂಡಿಯ ದಕ್ಷಿಣ ಪೋರ್ಟಲ್‌ನಲ್ಲಿ ರೊಹ್ತಂಗ್ ಸುರಂಗ ಮಾರ್ಗಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. 

ಸದ್ಯ ಪಕ್ಷದ ಇಬ್ಬರು ನಾಯಕರು ಜಿಯಾಚೆನ್ ಠಾಕೂರ್ ಹಾಗೂ ಹರಿಚಂದ್ ಶರ್ಮಾ ಕಿಲ್ಲಾಂಗ್ ಹಾಗೂ ಮನಾಲಿಯಲ್ಲಿ ಪೊಲೀಸ್ ಪ್ರಕರಣ ದಾಖಲಿಸಿದ್ದು, ಶಿಲಾನ್ಯಾಸ ಮಾಡಿದ ಕಲ್ಲು ಹೇಗೆ ಮಾಯವಾತ್ಯೆಂಬ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ