ನವದೆಹಲಿ (ಏ.9): ಅಸ್ಸಾಂ, ಕೇರಳ ಮತ್ತು ಪುದುಚೇರಿಗಳಲ್ಲಿ ಇಂದು ಭಾರೀ ಕುತೂಹಲ ಕೆರಳಿಸಿರುವ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳು ಅಸ್ಸಾಂ ಮತ್ತು ಪುದುಚೇರಿಯಲ್ಲಿ ಆಡಳಿತಾರೂಢ ಎನ್ಡಿಎಯ ಜನಪ್ರಿಯತೆಯನ್ನು ಪರೀಕ್ಷೆ ಮಾಡಲಿದ್ದರೆ, ಈ ಪ್ರದೇಶಗಳಲ್ಲಿ ಇಂಡಿಯಾ ಒಕ್ಕೂಟವು ಮತ್ತೆ ಅಧಿಕಾರಕ್ಕೆ ಬರುವ ಸಾಮರ್ಥ್ಯವನ್ನು ಅಳೆಯಲಿದೆ. ಮತದಾನ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು, ಮತದಾನ ಸುಗಮವಾಗಿ ನಡೆಯಲು ಸಾಕಷ್ಟು ಭದ್ರತಾ ವ್ಯವಸ್ಥೆಗಳು, ವೆಬ್ಕಾಸ್ಟಿಂಗ್ ಮತ್ತು ವಿಶೇಷ ಮತದಾರರ ಸೌಲಭ್ಯಗಳನ್ನು ಅಳವಡಿಸಲಾಗಿದೆ.
11:44 AM (IST) Apr 09
10:54 AM (IST) Apr 09
ಕೇರಳ ವಿಧಾನಸಭೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಸಗುವುದು ಖಚಿತ. 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲ್ಲಿದ್ದೇವೆ. ಜನರು ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ. ಇಂಥ ಮುಂಗೋಪಿ ಮುಖ್ಯಮಂತ್ರಿ ಇನ್ನೂ ಐದು ವರ್ಷ ಮುಂದುವರೆಸಬೇಕಾ ಎನ್ನುವ ಪ್ರಶ್ನೆ ಮತದಾರರನ್ನು ಕಾಡುತ್ತಿದೆ. ಎಲ್ಲಿ ಹೋದರೂ ಇಂಥ ಮುಖ್ಯಮಂತ್ರಿ ಇನ್ನು ಅಧಿಕಾರದಲ್ಲಿ ಇರಬಾರದೆಂಬ ಅಭಿಪ್ರಾಯವೇ ವ್ಯಕ್ತವಾಗುತ್ತಿದೆ. ಅಯ್ಯಪ್ಪನ ಬಂಗಾರವನ್ನು ಕದಿಯಲಾಗಿದೆ. ಆದರೆ,ಈ ಸರಕಾರ ಅವೆಲ್ಲವನ್ನೂ ಮುಚ್ಚಿ ಹಾಕಲು ಯತ್ನಿಸುತ್ತಿದೆ. ಜನ ತೀರ್ಪು ಇಂಥ ಚಿನ್ನ ಕಳ್ಳರ ವಿರುದ್ಧವೇ ಇರಲಿದೆ, ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
10:41 AM (IST) Apr 09
ಕೇರಳ ವಿಧಾನಸಭಾ ಚುನಾವಣೆ. ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ಕೇರಳ ಬಿಜೆಪಿ ಅಧ್ಯಕ್ಷ ಮತ್ತು ನೇಮಮ್ನ ಅಭ್ಯರ್ಥಿ ರಾಜೀವ್ ಚಂದ್ರಶೇಖರ್. ತಿರುವನಂತಪುರಂನ ಮತಗಟ್ಟೆಯಲ್ಲಿ ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ್ದಾರೆ. 9 ಗಂಟೆ ಹೊತ್ತಿಗೆ ದೇವರ ನಾಡಿನಲ್ಲಿ ಸುಮಾರು ಶೇ 16.2 ಮತದಾನ ನಡೆದಿದೆ
ಅಸ್ಸಾಂ ವಿಧಾನಸಭಾ ಚುನಾವಣೆ
9 ಗಂಟೆಯ ಮತದಾನದಂತೆ ಶೇ 17.87 ಮತದಾನ ನಡೆದಿದೆ
ಪುದುಚೆರಿಯಲ್ಲಿ ಶೇ 17.41 ಮತದಾನ ನಡೆದಿದೆ.
09:51 AM (IST) Apr 09
ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ 9 ಗಂಟೆಯ ಮತದಾನ ಪ್ರಮಾಣ ಪ್ರಕಟವಾಗಿದ್ದು, ಶೇ 17.41 ಮತದಾನ ನಡೆದಿದೆ.
09:50 AM (IST) Apr 09
ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ 9 ಗಂಟೆಯ ಮತದಾನ ಪ್ರಮಾಣ ಪ್ರಕಟವಾಗಿದ್ದು, ಶೇ 17.87 ಮತದಾನ ನಡೆದಿದೆ.
09:45 AM (IST) Apr 09
ಕೇರಳಂ ವಿಧಾನಸಭಾ ಚುನಾವಣೆಯಲ್ಲಿ 9 ಗಂಟೆಯ ಮತದಾನ ಪ್ರಮಾಣ ಪ್ರಕಟವಾಗಿದ್ದು, ಶೇ 16.2 ಮತದಾನ ನಡೆದಿದೆ.
09:43 AM (IST) Apr 09
ಪುದುಚೇರಿ ವಿಧಾನಸಭಾ ಚುನಾವಣೆಯ ಮತಗಟ್ಟೆಯೊಂದರಲ್ಲಿ, ಸೀರೆ ಉಟ್ಟ 'ನೀಲಾ' ಎಂಬ ಹ್ಯೂಮನಾಯ್ಡ್ ರೋಬೋಟ್ ಮತದಾರರನ್ನು ಸ್ವಾಗತಿಸಿ, ಮಾಹಿತಿ ನೀಡುವ ಮೂಲಕ ಗಮನ ಸೆಳೆಯಿತು. ಕೊಯಮತ್ತೂರಿನ 'ರೋಬೋ ಮಿರರ್' ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ.
09:15 AM (IST) Apr 09
ಕೇರಳದ ಹಿರಿಯ ನಟ ಮೋಹನ್ ಲಾಲ್ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಅದರೊಂದಿಗೆ ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.
08:54 AM (IST) Apr 09
ಕೇರಳವು ತನ್ನ ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಮತ ಚಲಾಯಿಸುತ್ತಿರುವಾಗ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ರಾಜ್ಯದ ಜನರನ್ನು ಕಾಳಜಿ ವಹಿಸುವ ಪಕ್ಷಕ್ಕೆ ಮತ ಚಲಾಯಿಸುವಂತೆ ಹೇಳಿದ್ದಾಎ.
X ಕುರಿತ ಪೋಸ್ಟ್ನಲ್ಲಿ, ಖರ್ಗೆ ಕೇರಳದ ಶಕ್ತಿ ವೈವಿಧ್ಯತೆಯಲ್ಲಿ ಏಕತೆಯಾಗಿದೆ ಮತ್ತು ವಿಭಜನೆ ಅಥವಾ ಗೊಂದಲದ ಮೂಲಕ ಆ ಶಕ್ತಿಯನ್ನು ದುರ್ಬಲಗೊಳಿಸಲು ಬಿಡಬೇಡಿ ಎಂದು ಕೇಳಿಕೊಂಡರು.
"ಕೇರಳದ ನನ್ನ ಪ್ರೀತಿಯ ಸಹೋದರಿಯರೇ ಮತ್ತು ಸಹೋದರರೇ, ನೀವು ಯಾವಾಗಲೂ ಶಿಕ್ಷಣ, ಘನತೆ, ಜಾತ್ಯತೀತ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಿಂತಿದ್ದೀರಿ. ಪ್ರಗತಿಪರ ಚಿಂತನೆಯ ನಿಜವಾದ ಅರ್ಥವನ್ನು ನೀವು ರಾಷ್ಟ್ರಕ್ಕೆ ತೋರಿಸಿದ್ದೀರಿ. ಈಗ, ಮತ್ತೊಮ್ಮೆ, ಜವಾಬ್ದಾರಿ ನಿಮ್ಮ ಕೈಯಲ್ಲಿದೆ." ಎಂದು ಬರೆದಿದ್ದಾರೆ.
08:51 AM (IST) Apr 09
ಗುರುವಾರ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯಸಭಾ ಸಂಸದೆ ಜೆಬಿ ಮಾಥರ್ ತಮ್ಮ ಮತ ಚಲಾಯಿಸಿದರು. "ನಾನು ಮತ ಚಲಾಯಿಸಿದ್ದೇನೆ. ಕೇರಳದ ಜನರು ಈಗಾಗಲೇ ತಮ್ಮ ಮನಸ್ಸನ್ನು ಮಾಡಿದ್ದಾರೆ - 100 ಸ್ಥಾನಗಳನ್ನು ಹೊಂದಿರುವ ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ" ಎಂದು ಅವರು ಹೇಳಿದರು.
07:16 AM (IST) Apr 09
ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಆರಂಭವಾದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಮತದಾರರಿಗೆ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ.