
ಧಾರ್(ಮ.ಪ್ರ.)(ಮಾ.29): ವಿವಾದಿತ ಭೋಜಶಾಲಾ ದೇಗುಲ ಮತ್ತು ಮಸೀದಿಯ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಂದುವರೆಸಿದ್ದು, 7ನೇ ದಿನವಾದ ಗುರುವಾರ ಕಂದಕಗಳನ್ನು ತೋಡಿ ಪರಿಶೀಲನೆ ನಡೆಸಿದೆ.
ಈ ವೇಳೆ ಹಿಂದೂಗಳ ಪರವಾಗಿ ಸರಸ್ವತಿ ದೇಗುಲದ ಆಶಿಶ್ ಗೋಯಲ್ ಹಾಗೂ ಗೋಪಾಲ್ ಶರ್ಮಾ ಉಪಸ್ಥಿತರಿದ್ದರೆ, ಕಮಲ ಮೌಲಾ ಮಸೀದಿಯ ಪರವಾಗಿ ಅಬ್ದುಲ್ ಸಮದ್ ಹಾಜರಿದ್ದರು. ಈ ವೇಳೆ ಮಾತನಾಡಿದ ಸಮದ್, ‘ಎಎಸ್ಐ ತನ್ನ ಸಮೀಕ್ಷಾ ಕಾರ್ಯವನ್ನು ಮಾಡುತ್ತಿದ್ದು, ಗುರುವಾರ ಪ್ರಾಂಗಣದ ಹಿಂಬದಿಯಲ್ಲಿ 6 ಅಡಿ ಆಳದ ಮೂರು ಕಂದಕಗಳನ್ನು ತೋಡಿ ಪರಿಶೀಲನೆ ಕೈಗೊಂಡಿದೆ. ಆದರೆ ನಾವು 2003ರ ಬಳಿಕ ಪ್ರತಿಷ್ಠಾಪಿಸಲಾದ ವಸ್ತುಗಳನ್ನು ಸಮೀಕ್ಷೆಯ ಭಾಗವಾಗಿ ಬಳಸಬೇಡಿ ಎಂದು ಕೋರುತ್ತೇವೆ’ ಎಂದು ತಿಳಿಸಿದರು.
ಭೋಜಶಾಲಾ ಮಸೀದಿ ಮೂಲತಃ ಸರಸ್ವತಿ ದೇಗುಲ: ಖ್ಯಾತ ಇತಿಹಾಸ ತಜ್ಞ ಮೊಹಮ್ಮದ್
ವಾಗ್ದೇವಿ ವಿಗ್ರಹ ಒಯ್ದಿದ್ದ ಬ್ರಿಟಿಷರು:
ಭೋಜಶಾಲಾ ದೇಗುಲದಲ್ಲಿ ಇತಿಹಾಸದ ಪ್ರಕಾರ ರಾಜ ಭೋಜ ಎಂಬ ದೊರೆ ವಾಗ್ದೇವಿಯ ವಿಗ್ರಹವನ್ನು ಕ್ರಿ.ಶ.1034ರಲ್ಲಿ ಪ್ರತಿಷ್ಠಾಪನೆ ಮಾಡಿದ್ದ. ಅದನ್ನು ಬ್ರಿಟಿಷರು 1875ರಲ್ಲಿ ಲಂಡನ್ಗೆ ಕೊಂಡೊಯ್ದಿರುವುದಾಗಿ ಹಿಂದೂ ಪರ ಅರ್ಜಿದಾರರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ