ಮಾಲಿನ್ಯ ಕೊಂಚ ಇಳಿಕೆ: ರಾಜಕೀಯ ಕಿತ್ತಾಟ ಏರಿಕೆ

Published : Nov 05, 2019, 07:55 AM IST
ಮಾಲಿನ್ಯ ಕೊಂಚ ಇಳಿಕೆ:  ರಾಜಕೀಯ ಕಿತ್ತಾಟ ಏರಿಕೆ

ಸಾರಾಂಶ

ದೆಹಲಿಯಲ್ಲಿ ಮಳೆ ಸಂಭವ: ಸ್ಥಿತಿ ಮತ್ತಷ್ಟು ಸುಧಾರಣೆ ಸಾಧ್ಯತೆ | ಗಾಳಿಯಿಂದಾಗಿ ಮಲಿನ ಗಾಳಿ ಪ್ರಮಾಣ ಕುಸಿತ | ದಿಲ್ಲಿಯಲ್ಲಿ ಪರಿಸ್ಥಿತಿ ಸೋಮವಾರ ಸ್ವಲ್ಪ ಸುಧಾರಿಸಿದೆ | 

ನವದೆಹಲಿ (ನ.05):  ವಾಯುಮಾಲಿನ್ಯಪೀಡಿತ ದಿಲ್ಲಿಯಲ್ಲಿ ಪರಿಸ್ಥಿತಿ ಸೋಮವಾರ ಸ್ವಲ್ಪ ಸುಧಾರಿಸಿದೆ. ಗಂಟೆಗೆ 20 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದ ಮಾಲಿನ್ಯ ಇಳಿಕೆಯಾಗಿದೆ. ಅಲ್ಲದೆ, ಶೀಘ್ರದಲ್ಲೇ ಅಪ್ಪಳಿಸಲಿರುವ ಮಹಾ ಚಂಡಮಾರುತದ ಪರಿಣಾಮ ಸುತ್ತಲಿನ ರಾಜ್ಯಗಳಲ್ಲಿ ಮಳೆ ಬಂದು ಪರಿಸ್ಥಿತಿ ಸುಧಾರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸೋಮವಾರ ಸಂಜೆ 4 ಗಂಟೆಗೆ ದಿಲ್ಲಿ ವಾಯುಮಾಲಿನ್ಯ ಸೂಚ್ಯಂಕ 419 ಎಂದು ತೋರಿಸುತ್ತಿತ್ತು. ಇದು ‘ಗಂಭೀರ ದರ್ಜೆ’ಯ ಮಾಲಿನ್ಯವಾಗಿದೆ. ಆದರೆ ಭಾನುವಾರದ 625 ಸೂಚ್ಯಂಕಕ್ಕಿಂತ ಇದು ಉತ್ತಮ. 401ರಿಂದ 500ರ ನಡುವೆ ಸೂಚ್ಯಂಕವಿದ್ದರೆ ಅದು ಗಂಭೀರ ಎನ್ನಿಸಿಕೊಳ್ಳುತ್ತದೆ. ಭಾನುವಾರ ಗಂಭೀರ ಸ್ಥಿತಿಯನ್ನೂ ಮಾಲಿನ್ಯ ಮಟ್ಟಮೀರಿ ಹೋಗಿತ್ತು.

ಮಾಸ್ಕ್ ಧರಿಸಿದ ಬಾಂಗ್ಲಾ ತಂಡ; ದೆಹಲಿ ಸಿಎಂ ಕೇಜ್ರಿವಾಲ್ ತಿವಿದ ಗಂಭೀರ್ !

ಜಾವಡೇಕರ್‌-ಆಪ್‌ ಜಟಾಪಟಿ:

ಈ ನಡುವೆ ದೆಹಲಿ ಮಾಲಿನ್ಯ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಜಟಾಪಟಿ ತೀವ್ರಗೊಂಡಿದೆ. ದಿಲ್ಲಿ ಸುತ್ತಲಿನ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯ ಸುಡುವುದು ಮಾಲಿನ್ಯಕ್ಕೆ ಕಾರಣ. ಹೀಗಾಗಿ ಆ ರಾಜ್ಯಗಳಿಗೆ ಬೆಳೆ ತ್ಯಾಜ್ಯ ಸುಡುವ ತಂತ್ರಜ್ಞಾನಕ್ಕೆಂದು ದಿಲ್ಲಿಯ ಆಪ್‌ ಸರ್ಕಾರ 1500 ಕೋಟಿ ನೀಡಬೇಕು ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್‌ ಆಗ್ರಹಿಸಿದ್ದಾರೆ.

‘ಆದರೆ, ಬೆಳೆ ಸುಡುವ ತಂತ್ರಜ್ಞಾನಕ್ಕೆ ದುಡ್ಡು ನೀಡುವುದು ಆಯಾ ರಾಜ್ಯ ಸರ್ಕಾರಗಳ ಕೆಲಸ. ಪಕ್ಕದ ರಾಜ್ಯಗಳಿಗೆ ಹಣ ನೀಡುವುದು ನಮ್ಮ ಕೆಲಸವಲ್ಲ’ ಎಂದು ಆಪ್‌ ಸಂಸದ ಸಂಜಯ ಸಿಂಗ್‌ ಅವರು ಜಾವಡೇಕರ್‌ಗೆ ತಿರುಗೇಟು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?