ಟಿಆರ್‌ಪಿಗಾಗಿ ಅರ್ನಬ್‌ 48 ಲಕ್ಷ ರೂ. ಕೊಟ್ಟಿದ್ರು: ಬಾರ್ಕ್ ಮಾಜಿ ಸಿಇಒ!

Published : Jan 26, 2021, 09:31 AM ISTUpdated : Jan 26, 2021, 10:14 AM IST
ಟಿಆರ್‌ಪಿಗಾಗಿ ಅರ್ನಬ್‌ 48 ಲಕ್ಷ ರೂ. ಕೊಟ್ಟಿದ್ರು: ಬಾರ್ಕ್ ಮಾಜಿ ಸಿಇಒ!

ಸಾರಾಂಶ

ಟಿಆರ್‌ಪಿ (ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್ಸ್‌) ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ವಿಷಯ| ಟಿಆರ್‌ಪಿಗಾಗಿ ಅರ್ನಬ್‌ 48 ಲಕ್ಷ ರೂ. ಕೊಟ್ಟಿದ್ರು: ಬಾರ್ಕ್ ಮಾಜಿ ಸಿಇಒ!

ನವದೆಹಲಿ(ಜ.26): ಟಿಆರ್‌ಪಿ (ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್ಸ್‌) ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ವಿಷಯವೊಂದು ಬಯಲಾಗಿದೆ. ರಿಪಬ್ಲಿಕ್‌ ಟೀವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರಿಂದ ಟಿಆರ್‌ಪಿ ತಿರುಚಲು ಕಳೆದ ಮೂರು ವರ್ಷದಲ್ಲಿ 48 ಲಕ್ಷ ರು. ಹಣ ಪಡೆದಿರುವುದಾಗಿ ಬಂಧಿತ ಬಾರ್ಕ್ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಮುಂಬೈ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಪ್ರಕರಣ ಸಂಬಂಧ ಕೋರ್ಟ್‌ಗೆ ಪೊಲೀಸರು ಸಲ್ಲಿಸಿರುವ ಚಾಜ್‌ರ್‍ಶೀಟ್‌ನಲ್ಲಿ ಇದನ್ನು ತಿಳಿಸಲಾಗಿದೆ. ಈ ಪೈಕಿ 40 ಲಕ್ಷ ರು. ನಗದು ರೂಪದಲ್ಲಿ ಮತ್ತು 4 ವಿದೇಶ ಪ್ರವಾಸಕ್ಕಾಗಿ 12000 ಡಾಲರ್‌ಗಳನ್ನು ಪಡೆದಿದ್ದಾಗಿ ಪಾರ್ಥೋ ಹೇಳಿದ್ದಾರೆ.

ಜ.11ರಂದು ಮುಂಬೈ ಪೊಲೀಸರು ಸಲ್ಲಿಸಿರುವ 3,600 ಪುಟಗಳ ಚಾಜ್‌ರ್‍ಶೀಟ್‌ನಲ್ಲಿ ಬಾರ್ಕ್ ವಿಧಿವಿಜ್ಞಾನ ಆಡಿಟ್‌ ವರದಿ, ವಾಟ್ಸ್‌ಆ್ಯಪ್‌ ಚಾಟ್‌ ಮತ್ತು 59 ಜನರ ಹೇಳಿಕೆಗಳನ್ನು ದಾಖಲಿಸಲಾಗಿದೆ.

ಗೋಸ್ವಾಮಿಗೆ ರಹಸ್ಯ ಬಿಟ್ಟುಕೊಟ್ಟ ಮೋದಿ- ರಾಹುಲ್‌:

ಈ ನಡುವೆ ತಮಿಳುನಾಡಿನಲ್ಲಿ ಚುನಾವಣಾ ರಾರ‍ಯಲಿ ನಡೆಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪುಲ್ವಾಮಾ ದಾಳಿ ವಿರುದ್ಧ ನಡೆದ ಬಾಲಾಕೋಟ್‌ ಏರ್‌ಸ್ಟೆ್ರೖಕ್‌ ಬಗ್ಗೆ ಸ್ವತಃ ಪ್ರಧಾನಿ ಮೋದಿಯೇ ರಿಪಬ್ಲಿಕ್‌ ಟೀವಿ ಪತ್ರಕರ್ತ ಅರ್ನಬ್‌ ಗೋಸ್ವಾಮಿಗೆ ತಿಳಿಸಿದ್ದರು ಎಂದು ಆರೋಪಿಸಿದ್ದಾರೆ.

ಏರ್‌ಸ್ಟೆ್ರೖಕ್‌ ಬಗ್ಗೆ ಕೇವಲ 5 ಮಂದಿ ಹೊರತಾಗಿ ಯಾರಿಗೂ ತಿಳಿದಿರಲಿಲ್ಲ. ಆದರೆ ರಿಪಬ್ಲಿಕ್‌ ಟೀವಿ ಪತ್ರಕರ್ತ ಅರ್ನಬ್‌ ಗೋಸ್ವಾಮಿ ಅವರಿಗೂ ಮೊದಲೇ ಈ ವಿಷಯ ತಿಳಿದಿತ್ತು ಎಂದು ಇತ್ತೀಚೆಗೆ ಬಯಲಾಗಿದೆ. ಅದರರ್ಥ ಆ ಐವರ ಪೈಕಿ ಒಬ್ಬರು ಅರ್ನಬ್‌ಗೆ ವಿಷಯ ತಿಳಿಸಿ ವಾಯುಸೇನೆಗೆ ವಿಶ್ವಾಸದ್ರೋಹ ಮಾಡಿದ್ದಾರೆ. ಒಂದು ವೇಳೆ ಪ್ರಧಾನಿ ವಿಷಯ ಬಹಿರಂಗಪಡಿಸಿಲ್ಲ ಎಂದಾದರೆ ಪತ್ರಕರ್ತನ ವಿರುದ್ಧ ಏಕೆ ತನಿಖೆ ಆರಂಭಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?