
ನವದೆಹಲಿ(ಮೇ.14): ಯುವ ವೃತ್ತಿಪರರೂ ಸೇರಿದಂತೆ ದೇಶದ ನಾಗರಿಕರು ಸೇನಾಧಿಕಾರಿಗಳು ಹಾಗೂ ಸೇನೆಯ ಇನ್ನಿತರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಮೂರು ವರ್ಷಗಳ ಮಟ್ಟಿಗೆ ಅವಕಾಶ ನೀಡುವ ಕುರಿತು ಭಾರತೀಯ ಸೇನೆ ಗಂಭೀರ ಪರಿಶೀಲನೆಯಲ್ಲಿ ತೊಡಗಿದೆ.
ಮೊದಲ ಹಂತದಲ್ಲಿ 100 ಅಧಿಕಾರಿಗಳು ಹಾಗೂ ಒಂದು ಸಾವಿರ ವ್ಯಕ್ತಿಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ಉದ್ದೇಶ ಹೊಂದಿದೆ.
'ನನ್ನನ್ನು ಸೇನೆಗೆ ಸೇರಿಸಿಕೊಳ್ಳಿ, ಇಲ್ಲಾ ಮಗಳನ್ನು ಕಳಿಸುತ್ತೇನೆ' ಹುತಾತ್ಮ ಯೋಧನ ಪತ್ನಿ
ಮೂರು ವರ್ಷಗಳ ಅವಧಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಸಿಗುವ ಈ ಅವಕಾಶವನ್ನು ‘ಟೂರ್ ಆಫ್ ಡ್ಯೂಟಿ’ ಎಂದು ಹೇಳಲಾಗುತ್ತದೆ.
ತ್ತಿಯಾಗಿ ಸೇನೆಯನ್ನು ಆಯ್ಕೆ ಮಾಡಿಕೊಳ್ಳದ ಆದರೆ ತಾತ್ಕಾಲಿಕ ಅವಧಿಗೆ ಸೇನಾ ಜೀವನವನ್ನು ಅನುಭವಿಸಲು ಬಯಸುವ ಆಸಕ್ತಿ ಹೊಂದಿರುವ ಯುವಕರನ್ನು ಸೆಳೆಯಲು ಸೇನೆ ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ