ದೇಶ್‌ಮುಖ್‌ರಿಂದ 4 ಕೋಟಿ ರು. ಹಫ್ತಾ ವಸೂಲಿ: ಜಾರಿ ನಿರ್ದೇಶನಾಲಯ

Published : Jun 27, 2021, 09:05 AM IST
ದೇಶ್‌ಮುಖ್‌ರಿಂದ 4 ಕೋಟಿ ರು. ಹಫ್ತಾ ವಸೂಲಿ: ಜಾರಿ ನಿರ್ದೇಶನಾಲಯ

ಸಾರಾಂಶ

* ಮಹಾರಾಷ್ಟ್ರದ ಅಂದಿನ ಸಚಿವ ಅನಿಲ್‌ ದೇಶಮುಖ್‌ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಗಂಭೀರ ಆರೋಪ * ಬಾರ್‌ ಮಾಲೀಕರಿಂದ 4.7 ಕೋಟಿ ರು.ಗಳನ್ನು ದೇಶಮುಖ್‌ ಸಂಗ್ರಹಿಸಿ, ಟ್ರಸ್ಟ್‌ ಮೂಲಕ ಡಮ್ಮಿ ಕಂಪನಿಗಳಲ್ಲಿ ಹೂಡಿಕೆ * ಮುಂಬೈ ಕೋರ್ಟ್‌ಗೆ ಮಾಹಿತಿ ನೀಡಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳು

ಮುಂಬೈ(ಜೂ.27): ಹಫ್ತಾ ವಸೂಲು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಅಂದಿನ ಸಚಿವ ಅನಿಲ್‌ ದೇಶಮುಖ್‌ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಶನಿವಾರ ಗಂಭೀರ ಆರೋಪ ಮಾಡಿದೆ. ಬಾರ್‌ ಮಾಲೀಕರಿಂದ 4.7 ಕೋಟಿ ರು.ಗಳನ್ನು ದೇಶಮುಖ್‌ ಸಂಗ್ರಹಿಸಿ, ತಮ್ಮ ಟ್ರಸ್ಟ್‌ ಮೂಲಕ ಡಮ್ಮಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರು ಎಂದು ಅದು ಮುಂಬೈ ಕೋರ್ಟ್‌ಗೆ ಹೇಳಿದೆ.

ಬಾರುಗಳನ್ನು ನಿಗದಿತ ಅವಧಿ ಮೀರಿ ಅಕ್ರಮವಾಗಿ ತೆರೆಯಲು ದೇಶಮುಖ್‌ ಲಂಚ ವಸೂಲಿ ಮಾಡಿದ್ದರು. ಪೊಲೀಸ್‌ ಅಧಿಕಾರಿ ಸಚಿನ್‌ ವಾಝೆ ಬಳಸಿಕೊಂಡು ಈ ಕೃತ್ಯ ಎಸಗಿದ್ದರು ಎಂದು ಬಾರ್‌ ಮಾಲೀಕರು ಹೇಳಿಕೆ ನೀಡಿದ್ದಾರೆ ಎಂದು ಇ.ಡಿ. ತಿಳಿಸಿದೆ.

ವಿಚಾರಣೆಗೆ ಗೈರು:

ಈ ನಡುವೆ, ಶನಿವಾರ ದೇಶಮುಖ್‌ ಅವರು ಇ.ಡಿ. ವಿಚಾರಣೆಗೆ ಹಾಜರಾಗಲಿಲ್ಲ. ಮತ್ತೊಂದು ದಿನಾಂಕಕ್ಕೆ ಕೋರಿಕೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ಬಂಧಿತ ಇಬ್ಬರು ದೇಶಮುಖ್‌ ಆಪ್ತರನ್ನು ಜು.1ರವರೆಗೆ ಇ.ಡಿ. ವಶಕ್ಕೆ ಕೋರ್ಟ್‌ ಒಪ್ಪಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ ರಣ್‌ವೀರ್‌ ಸಿಂಗ್‌ ಸಿನಿಮಾ!
ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ