
ಮುಂಬೈ(ಏ. 18) ರಾಷ್ಟ್ರೀಯ ಮಟ್ಟದಲ್ಲಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಬಾಕ್ಸರ್ ಸಂಕಷ್ಟದ ಬದುಕಿನಲ್ಲಿದ್ದರು. ಬದುಕಿನ ಬಂಡಿ ಸಾಗಿಸಲು ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು.
ಬಾಕ್ಸರ್ ಅಬೀದ್ ಖಾನ್ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಆನಂದ್ ಮಹೀಂದ್ರಾ ನೆರವು ನೀಡಿದ್ದಾರೆ. ಒಬ್ಬ ಬಾಕ್ಸರ್ ಮಾತ್ರ ಆಗಿರದ ಖಾನ್ ಕೋಚ್ ಆಗಿಯೂ ಐದು ವರ್ಷ ಕೆಲಸ ಮಾಡಿದ್ದಾರೆ.
ಮೂರು ಕಿಮೀ ಕಾಲುವೆ ತೋಡಿದ್ದ ರೈತನಿಗೆ ಮಹೀಂದ್ರಾ ಟ್ರ್ಯಾಕ್ಟರ್ ಗಿಫ್ಟ್
ಖಾನ್ ಅವರ ಜೀವನ ಉತ್ಸಾಹಕ್ಕೆ ಮೊದಲು ಅಭಿನಂದನೆ ಹೇಳುತ್ತೇನೆ ಎಂದಿರುವ ಅವರು ಜನರಿಂದಲೇ ಸಲಹೆ ಕೇಳಿದ್ದಾರೆ. ಬಾಕ್ಸಿಂಗ್ ಸ್ಟಾರ್ಟ್ ಅಪ್ ಓಪನ್ ಮಾಡಲು ಖಾನ್ ಅವರಿಗೆ ಹೇಗೆ ನೆರವು ನೀಡಬಹುದು ತಿಳಿಸಿ ಎಂದು ಕೇಳಿಕೊಂಡಿದ್ದಾರೆ. ಯಾವುದಾದರೂ ರೀತಿಯಲ್ಲಿ ಸಹಾಮ ಮಾಡಲು ಸಿದ್ಧ ಎಂದು ತಿಳಿಸಿದ್ದಾರೆ.
ಇಡ್ಲಿ ಅಮ್ಮ ಎಂದು ಖ್ಯಾತಿ ಪಡೆದಿದ್ದ ಮಹಿಳೆಗೆ ಕೆಲ ದಿನಗಳ ಹಿಂದೆ ಮಹೀಂದ್ರಾ ಹೊಸ ಮನೆ ಮಾಡಿಸಿಕೊಟ್ಟಿದ್ದರು. ಹಲವು ವರ್ಷಗಳಿಂದ ಒಂದು ರೂ. ಗೆ ಇಡ್ಲಿ ನೀಡಿಕೊಂಡು ಬಂದ ಮಹಿಳೆ ನೆರವಿಗೆ ಮಹೀಂದ್ರಾ ನಿಂತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ