ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ಬದಲಾವಣೆಗೆ ಒವೈಸಿ ಕಿಡಿ

Published : Oct 10, 2022, 12:00 AM IST
ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ಬದಲಾವಣೆಗೆ ಒವೈಸಿ ಕಿಡಿ

ಸಾರಾಂಶ

ಹೆಸರು ಬದಲಾವಣೆಯಿಂದ ಟಿಪ್ಪು ಪರಂಪರೆ ಅಳಿಸಲಾಗದು: ಒವೈಸಿ, ಪರಂಪರೆ ಬದಲಿಸುವ ಉದ್ದೇಶ ಇಲ್ಲ, ಆತ ಮಹಾನ್‌ ಕ್ರೂರಿ: ಬಿಜೆಪಿ

ಹೈದರಾಬಾದ್‌(ಅ.10):  ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು ಒಡೆಯರ್‌ ಎಕ್ಸ್‌ಪ್ರೆಸ್‌ ಎಂದು ಬದಲಾಯಿಸಿದ ಸರ್ಕಾರದ ಕ್ರಮವನ್ನು ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್‌ ಒವೈಸಿ ಕಟುವಾಗಿ ಟೀಕಿಸಿದ್ದಾರೆ. ಹೆಸರು ಬದಲಾವಣೆ ಮೂಲಕ ಟಿಪ್ಪು ಪರಂಪರೆಯನ್ನು ಅಳಿಸಲಾಗದು ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಒವೈಸಿ ‘ಬಿಜೆಪಿ ಸರ್ಕಾರ, ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು ಒಡೆಯರ್‌ ಎಕ್ಸ್‌ಪ್ರೆಸ್‌ ಎಂದು ಬದಲಾಯಿಸಿದೆ. ಟಿಪ್ಪು, ಬಿಜೆಪಿಯನ್ನು ಕೆರಳಿಸುತ್ತಾನೆ, ಏಕೆಂದರೆ ಆತ ಮೂರು ಬಾರಿ ಬ್ರಿಟಿಷರ ಮೇಲೆ ದಾಳಿ ಮಾಡಿದ್ದ. ಬೇರೊಂದು ರೈಲಿಗೆ ಒಡೆಯರ್‌ ಹೆಸರು ಇಡಬಹುದಿತ್ತು. ಬಿಜೆಪಿ ಎಂದಿಗೂ ಟಿಪ್ಪು ಪರಂಪರೆ ಅಳಿಸಿ ಹಾಕಲಾಗದು. ಜೀವಂತ ಇದ್ದಾಗ ಟಿಪ್ಪು ಬ್ರಿಟಿಷರಿಗೆ ಆತಂಕ ಹುಟ್ಟಿಸಿದ್ದ, ಈಗ ಬ್ರಿಟಿಷರ ಗುಲಾಮರಿಗೂ ಆತಂಕ ಹುಟ್ಟಿಸುತ್ತಿದ್ದಾನೆ’ ಎಂದು ಕಿಡಿಕಾರಿದ್ದಾರೆ.

ಮುಸ್ಲಿಮರ ಜನಸಂಖ್ಯೆ ಕಡಿಮೆಯಾಗ್ತಿದೆ; ನಮ್ಮಿಂದಲೇ ಹೆಚ್ಚು ಕಾಂಡೋಮ್‌ ಬಳಕೆ: Asaduddin Owaisi

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ‘ಬಿಜೆಪಿಗೆ ಟಿಪ್ಪು ಪರಂಪರೆ ಅಳಿಸಿ ಹಾಕುವ ಉದ್ದೇಶವಿಲ್ಲ. ವಾಸ್ತವವವಾಗಿ ಟಿಪ್ಪುವಿನ ನಿಜವಾದ ಪರಂಪರೆಯನ್ನು ಜನರಿಗೆ ತಿಳಿಸಬೇಕಿದೆ. ಟಿಪ್ಪು ಕೊಡಗಿನ ಕೊಡವರ ಮೇಲೆ, ಮಂಗಳೂರಿನ ಸಿರಿಯನ್‌ ಕ್ರೈಸ್ತರ ಮೇಲೆ, ಕ್ಯಾಥೋಲಿಕ್ಕರ ಮೇಲೆ, ಕೊಂಕಣಿಗಳ ಮೇಲೆ, ಮಲಬಾರ್‌ನ ನಾಸಿರ್‌ ಮೇಲೆ ದೌರ್ಜನ್ಯ ಎಸಗಿದ ಕ್ರೂರಿ’ ಎಂದು ಕಿಡಿಕಾರಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..